ಪ್ರಕೃತಿ ಮಾತೆ ಸಹಿಸುತಿಹಳು
ಎಲ್ಲ ಕಷ್ಟಕೋಟಲೆ..
ನಮ್ಮ ಬಾಳು ನರಕ ಸದೃಶ
ಅವಳು ಸಿಡಿದಳೆಂದರೆ..
ಉಸಿರು ಕೊಡುವ ಹಸಿರಿಗೆ
ಕೊಡಲಿ ಏಟು ಕೊಡುವರು..
ಜೀವಜಲಕೆ ವಿಷವ ಬೆರೆಸಿ
ಸಾಧನೆಯೆಂದು ಮೆರೆವರು..
ವಿನಾಶದ ಅಂಚಲ್ಲಿದೆ
ಪ್ರಾಣಿ-ಪಕ್ಷಿ ಸಂಕುಲ..
ಆಕ್ರೋಶದಿ ಕೂಗುತಿವೆ
ನಮದೂ ಅಲ್ಲವೇ ಈ ನೆಲ??
ಸಹನಾಮೂರ್ತಿ, ಕ್ಷಮಯಾಧರಿತ್ರಿ
ಈ ವಸುಂಧರೆ...
ವಿಷವನ್ನುಂಡು ಅಮೃತವನೇ
ನೀಡುತಿಹಳು ಸುಮ್ಮನೆ..
ಸಮೀಪಿಸುತಿದೆ ಕೇಡುಗಾಲ
ಮನುಜಕುಲಕೂ ಖಂಡಿತ..
ಇದನರಿತು ಸಂರಕ್ಷಿಸಿದರೆ ಪ್ರಕೃತಿಯ
ಸುಖದ ಕಾಲ ನಿಶ್ಚಿತ.