ಬುಧವಾರ, ಆಗಸ್ಟ್ 26, 2015

ಕರಾಳ ಬದುಕು

ಮಾತೇ ಬಾರದ ನೀರಸ ಮೌನ
ಅತೀ ಬೇಸರವೆನಿಸಿದೆ ಜೀವನ ಯಾನ
ಭಾವ ಸರೋವರದ ಬಿರುಗಾಳಿಗೆ ಸಿಲುಕಿ
ಎತ್ತಲೋ ಸಾಗಿದೆ ಬದುಕಿನ ಪಯಣ...

ಕಾಣದ ಕೈಯ ಕೈವಾಡಕ್ಕೆ ಬದುಕಾಗಿದೆ ಶೂನ್ಯ
ಮರೆತ ಗುರಿಯಿಂದ ಎಲ್ಲವೂ ಕುರುಡು
ಮರೀಚಿಕೆಯ ಬೆನ್ನಟ್ಟಿ ನಾಗಾಲೋಟ
ಆಸೆ ಕನಸೆಲ್ಲವೂ ಬರೀ ಗಗನ ಕುಸುಮ...

ತಿರುಗಿ ನೋಡಿದರೆ ಭಯಹುಟ್ಟಿಸುವ ಕರಾಳ ಮುಖ
ದಿಕ್ಕೆಟ್ಟ ಕಂಗೆಟ್ಟ ಧೃತಿಗೆಟ್ಟ ಕಾಂತೀಹೀನ ಕರಾಳತೆಯ ಛಾಯೆ
ನಿರಾಸೆಯ ಮೃತ್ಯುಕೂಪದಲಿ ಬೆಂದ ಮನಸು
ತಾನೇ ಬಂಧಿಯಾಗಿದೆ ಖಿನ್ನತೆಯ ಭೂತಬಂಗಲೆಯಲಿ..

ಬೇಯುತಿದೆ ಜ್ವಾಲಾಮುಖಿಯ ಜ್ವಾಲೆಯಲಿ
ಮುಳುಗಿದೆ ಸೂತಕದಂತ ಯಾತನೆಯಲಿ
ಬಿಡುಗಡೆ ದೊರೆತರೂ ಧಿಕ್ಕರಿಸಿ
ನೋವಿನ ನಂಜಲ್ಲಿ ಹುದುಗಿ ಪರಿತಪಿಸುತಿದೆ...



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ