ಮಾಗಿಯ ಚಳಿಗಾಗಿ ಕಾಯುವ
ಭುವಿಯಂತೆ..
ಮಂಜಿನ ಹನಿಯ ಸ್ಪರ್ಶಕಾಗಿ
ಕಾದ ಇಳೆಯಂತೆ..
ಬಿಸಿಲ ಬಿಸಿ ಅಪ್ಪುಗೆಗೆ
ಕಾದ ವಸುಂಧರೆಯಂತೆ..
ಮುಂಗಾರು ಮಳೆಗಾಗಿ ವಿರಹಿಸಿ
ಕಾಯುವ ಧರೆಯಂತೆ..
ನಿನ್ನ ಆಗಮನಕಾಗಿ ಕಾದಿರುವೆ
ಓ ಗೆಳೆಯಾ..
ಮನದ ಭಾವನೆಯ ಹೊತ್ತ ಸಂದೇಶ
ರವಾನೆ..
ಕಣ್ಣು ಮುಚ್ಚಿದರೆ ಕಾಡುವ
ನಿನ್ನ ಕನಸುಗಳು..
ಕಣ್ಣು ತೆರೆದರೂ ಬರಿ ನಿನ್ನ
ಹಗಲುಕನಸುಗಳು..
ಮನದಿ ನಿನ್ನ ನೆನಪಿನಲೆಯ
ತೊಯ್ದಾಟ..
ಇದೆಲ್ಲವೂ ಸಾಕಾಗಿದೆ ಓ
ಗೆಳೆಯಾ..
ಸಾಕಾಗಿದೆ ಈ ಸಂಘರ್ಷ, ನೀಡು
ನಿನ್ನ ಹಿತ ಸ್ಪರ್ಶ..
ಕ್ಷಣ ಕ್ಷಣವೂ ಬೇಕಾಗಿದೆ
ನಿನ್ನ ಸಾಂಗತ್ಯ..
ಸವಿಯುವಾಸೆ ಬಾಹುಬಂಧನದ
ಲಾಲಿತ್ಯ..
ಕೊನೆಗೊಳಿಸು ಈ ಕಹಿ ವಿರಹ
ವೇದನೆಯ..
ಕಾದಿರುವೆ ನಿನಗಾಗಿ ಓ ಗೆಳೆಯಾ..
ನೀನಿಲ್ಲದೇ ಬಣ್ಣವಿಲ್ಲದ
ಚಿತ್ರ ನಾನು..
ಸುವಾಸನೆ ಬೀರದ ಹೂವು ನಾನು..
ನಾದ ಹೊಮ್ಮದ ಬರಿಯ ವೀಣೆ
ನಾನು..
ಹಸಿರಿಲ್ಲದ ಒಣಗಿದ ಭುವಿ
ನಾನು..
ಚೈತನ್ಯ ತುಂಬಲು ಬಾ ಗೆಳೆಯಾ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ