ಪ್ರತಿಜ್ಞೆ..
ಕಯ್ಯ ಮೇಲೆ ಕೈ ಇರಿಸಿ
ನೀಡು ಪ್ರಮಾಣವ ಮಗು
ಆದರ್ಶ ನಾಗರೀಕನಾಗಿ
ಬಾಳುವುನೆಂದು...
ಅನ್ಯಾಯದ ವಿರುದ್ಧ
ಸಿಡಿದೇಳು ಮಗು
ವಂಚನೆಯ ಮಾಡು
ಗಡೀಪಾರು...
ಬಡವರ ಕಂಬನಿ ಒರೆಸಿ
ನಗಿಸು ನೀನು ಮಗು
ಸಹಾಯ ಹಸ್ತ ಇರಲಿ
ಅಸಹಾಯಕರ ಮೇಲೆ...
ಸಮಾಜ ಸುಧಾರಣೆಯ
ಗುರಿಕಾರನಾಗು ಮಗು
ಭ್ರಷ್ಟರ ಸೆದೆಬಡಿವ
ನಾಯಕನಾಗು...
ಮಾನವೀಯ ಮೌಲ್ಯಗಳ
ಮರೆಯದಿರು ಮಗು
ಹಸನಾಗಿಸಲು ಮಾಡು
ಇಂದೇ ಭೀಷ್ಮ ಪ್ರತಿಜ್ಞೆ...
ಪಂಚಮ ವೇದಾ....
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ