ಎಲ್ಲರ ಕೈಯಲ್ಲೂ ಇದೆ ಜಂಗಮ ವಾಣಿ
ಇದು ಎಲ್ಲರ ಮನದ ಮಹಾರಾಣಿ...
ವಾಟ್ಸ್ ಆಪ್, ಫೇಸ್ಬುಕ್ ಕೂಡ ಇದೆ ಇಲ್ಲಿ!!
ಇಂತಹ ಮನರಂಜನೆಯ ತಾಣ ಇನ್ನೆಲ್ಲಿ??
ಕ್ಷಣ ಮಾತ್ರದಲೇ ರವಾನೆ ಸಂದೇಶ
ಈಗ ಬರುವುದು ಇದರಲೇ ಆದೇಶ!!
ತೆಗೆಯಬಹುದು ಬಣ್ಣಬಣ್ಣದ ಪಟ
ಆಡಬಹುದು ಬಗೆಬಗೆಯ ಆಟ..
ದಾರಿಯ ತೋರುವ ಜೊತೆಗಾರ ಇದು
ಮಾಹಿತಿ ನೀಡುವ ಗುರುವೂ ಇದು..
ನೀರೆ-ತರುಣರ ಮನವನೂ ಕದ್ದಿಹುದು
ಬಾಲರಾದಿಯಾಗಿ ವೃದ್ಧರ ಮನ ಗೆದ್ದಿಹುದು..
ಇತಿಯ ಜೊತೆಗೆ ಮಿತಿಯೂ ಉಂಟು
ಬಗೆಬಗೆಯ ಅಪಾಯಗಳೂ ಉಂಟೂ..
ಅತಿಯಾದರೇ ಅಮೃತವೂ ಕೂಡ ವಿಷವೇ
ಅತಿಯಾಗಿ ಬಳಸಿದರೆ ಇದರ ಕೋಲಾಹಲವೇ
ಎಲ್ಲೆಲ್ಲೂ ಕೇಳಿಬರುತಿದೆ ಸೈಬರ್ ಕ್ರೈಂ ಕಥೆ
ದಾರಿ ತಪ್ಪಿದ ಮಕ್ಕಳ ಪಾಲಕರ ವ್ಯಥೆ..
ಇತಿಮಿತಿಯಲಿರಲಿ ಮೊಬೈಲ್ ನ ಬಳಕೆ
ಎಲ್ಲರಿಗೂ ಸವಿನಯವಾದ ಕೋರಿಕೆ...
ಪಂಚಮ ವೇದಾ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ