ಹಲವು ವೇಷ ಬದುಕಲು ಅಗತ್ಯ ಕೆಲವರಿಗೆ
ಶೋಕಿಗಾಗಿ ವೇಷ ಹಾಕುವ ಕರ್ಮ ಹಲವರಿಗೆ
ಅನ್ನವಿಲ್ಲದೇ ಪರಿತಪಿಸುವರು ಹಲವರು
ಬೆಲೆತೆತ್ತು ಅನ್ನ ಚೆಲ್ಲುವರು ಕೆಲವರು...
ಜೀವನ
ಬಾರದು ಮತ್ತೆ ಕಳೆದಿರುವ ಕ್ಷಣ
ಸವಿಯಬಹುದು ನೆನಪಿನ ಹೂರಣ
ಸಿಹಿ-ಕಹಿ ಎರಡೂ ಉಂಟು ಬದುಕಲಿ
ನೋವು-ನಲಿವೆಂಬ ಮುಖವು ಬಾಳಲಿ
ಬೇಸರಿಸದೆ ಸಂತಸದಿ ತಾ ಬದುಕಿ
ಬದುಕಕೊಟ್ಟರೆಲ್ಲರಿಗೂ ಬಾಳು ಸುಖಕರ
ನಿದ್ದೆ
ನಿದ್ದೆ ನಿದ್ದೆ ನಿದ್ದೆ ನಿದ್ದೆ
ಪತಿರಾಯನಿಗೆ ಯಾವಾಗಲೂ ಇದ್ದಿದ್ದೆ
ಕೇಳಿದರೆ ನಿಮಗೆ ಯಾಕಿಷ್ಟು ನಿದ್ದೆ
ಬರುವ ಉತ್ತರ ನೋಡಿ...
ನಿನ್ನದು ರಾಮಾಯಣ ಯಾವಾಗಲೂ ಇದ್ದಿದ್ದೆ
ಪಾರಾಯಣ
ಹಗಲಲಿ ಓದಿಸುವರು ದೇವಿ ಪಾರಾಯಣ
ರಾತ್ರಿ ಮಾಡುವರು ಹದಿಮೂರೆಲೆಯ ಪಾರಾಯಣ
ಬೆಳಿಗ್ಗೆ ಹೆಂಡತಿಯಿಂದ ಮಹಾಭಾರತ ರಾಮಾಯಣ
ಜಪಭಜನೆ ಮಾಡುವರು ನಾರಾಯಣ ನಾರಾಯಣ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ