ಬುಧವಾರ, ಆಗಸ್ಟ್ 4, 2021

ವಿಜಯಾನಂದದ ಸವಾರಿ

06/08/2021 - ಕ್ರಾಂತಿಧ್ವನಿ

ಸವಾರಿ ಹೊರಟೆ ವಿಜಯಾನಂದ ಬಸ್ಸಿನಲ್ಲಿ
ಬಹು ಆನಂದವಾಯಿತು ನನಗೆ ಮನದಲ್ಲಿ
ಕುಳಿತೆ ಮುದದಿಂದ ಕಿಟಕಿ ಪಕ್ಕದ ಸೀಟಿನಲ್ಲಿ
ಮೊದಲ ಪಯಣವು ನನದು ಈ ಬಸ್ಸಿನಲ್ಲಿ

ಮೆಲುವಾದ ಸಂಗೀತ ಕೇಳುತ ಸಾಗಿತು ಪಯಣ
ನೋಡುತ ಮೈಯನು ಮರೆತೆ ಹಸಿರಿನ ತಾಣ
ಆಗಲೇ ಬಂದಿತು ಊಟ ಮಾಡುವ ನಿಲ್ದಾಣ
ಇಳಿದೆ ತೆಗೆದುಕೊಂಡು ಊಟಕೆ ಬೇಕಾದ ಹಣ

ಊಟವನು ಮುಗಿಸಿ ಬಂದೆ ಏರಲು ಬಸ್ಸನು
ಕಾಣದೇ ಬೋರ್ಡ್ ನು ಆದೆ ನಾನು ಮಂಗನು
ನೋಡಿ ದಂಗಾದೆ ಒಂದೇ ರೀತಿಯ ಬಸ್ಸನು
ಏನೂ ಮಾಡಲು ತೋಚದೇ ಹುಡುಕಿದೆ ಬಸ್ಸನು

ಯಾವ ಬಸ್ಸಿಗೂ ಬರೆದಿಲ್ಲವು ಊರ ಹೆಸರು
ನನಗೆ ನಿಂತ ಹಾಗಾಯಿತು ಒಮ್ಮೆಲೇ ಉಸಿರು
ಪರದಾಟವನು ನೋಡಿ ಕೇಳಿದರು ಒಬ್ಬರು
ಪರಿಸ್ಥಿತಿ ಅರಿತು ಸಹಾಯಕೆ ಬಂದರು ಅವರು

ನೋಡಿ ನಿಮ್ಮ ಬಸ್ಸಿನ ನಂಬರು ಇಲ್ಲ ಇಲ್ಲಿ ಹೆಸರು
ಆಗ ನೋಡಿದೆ ಟಿಕೇಟಿನಲ್ಲಿ ನನ್ನ ಬಸ್ಸಿನ ನಂಬರು
ಅಷ್ಟರಲ್ಲಿ ಬಸ್ಸಿನ ನಿರ್ವಾಹಕರು ಸಹ ಬಂದರು
ಇದು ನನ್ನ ಮೊದಲ ಪಯಣ ಕೇಳಿ ನೀವೆಲ್ಲರೂ

ವೇದಾವತಿ ಭಟ್ಟ
ಮುಂಬೈ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ