ಬುಧವಾರ, ಜುಲೈ 14, 2021
ಜೀವ ಜೀವನ
ಜೀವವು ಇದ್ದರೆ ಜೀವನ ಎನ್ನುವಂತಾಗಿದೆ ಸ್ಥಿತಿ ಇಂದು
ಜೀವಿಯ ಜೀವದ ಜೊತೆ ಆಟವಾಡಿದ ಮನುಜ ಅಂದು
ಸ್ವಾರ್ಥದ ಜೀವನವು ಬೇಡ ಹೇ ಮನುಜ ಎಂದೆಂದೂ
ಯೋಚಿಸಿ ಕೆಲಸವನು ಮಾಡುವ ಹಿಂದು-ಮುಂದು
ಎಲ್ಲ ಜೀವರಾಶಿಗೂ ಜೀವ-ಜೀವನವು ಬಲು ಪ್ರಧಾನ
ಇದ ಅರಿತು ನಡೆ ಮನುಜ ಎಲ್ಲರೂ ಒಂದೇ ಸಮಾನ
ಕೈಲಾಗದವೆಂದು ಶೋಷಿಸದಿರು ನೀ ಅನುದಿನ
ಪ್ರತೀಕಾರ ತೀರಿಸಲು ಬಂದಿದೆ ನೋಡು ಸಣ್ಣ ಕೊರೋನ
ಕ್ಷಣದಲೇ ಬದಲಾಗಿ ಹೋಯಿತು ನಮ್ಮಯ ಜೀವನ
ಜೀವ ಭಯದಿಂದ ನಾಲ್ಕು ಗೋಡೆಯೊಳಗೆ ಬಂಧನ
ಮನುಜನ ಕಾಟ ಇಲ್ಲದೇ ಪ್ರಕೃತಿಗೆ ಅಮೃತ ಸಿಂಚನ
ಆದರೆ ನಮ್ಮ ಬದುಕು ಭಯದ ನೆರಳಲಿ ಅನುದಿನ
ಬೇಡವೇ ಬೇಡ ನೈಸರ್ಗಿಕ ಹಸಿರು ಪರಿಸರದ ನಾಶ
ನಗರೀಕರಣ ಆಧುನೀಕರಣದಿಂದಲೇ ನಮ್ಮ ವಿನಾಶ
ಹಣ ಹಿಂದೆ ಓಡುತ ಹಾಕಬೇಡ ಬಗೆಬಗೆಯ ವೇಷ
ಕಳೆದುಕೊಳ್ಳಬೇಡ ಈ ಕ್ಷಣದ ಜೀವನದ ಸಂತೋಷ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ