ಭಾನುವಾರ, ಜೂನ್ 22, 2014

ಪ್ರಕೃತಿ




ಪ್ರಕೃತಿ ಮಾತೆ ಸಹಿಸುತಿಹಳು
ಎಲ್ಲ ಕಷ್ಟಕೋಟಲೆ..
ನಮ್ಮ ಬಾಳು ನರಕ ಸದೃಶ
ಅವಳು ಸಿಡಿದಳೆಂದರೆ..

ಉಸಿರು ಕೊಡುವ ಹಸಿರಿಗೆ
ಕೊಡಲಿ ಏಟು ಕೊಡುವರು..
ಜೀವಜಲಕೆ ವಿಷವ ಬೆರೆಸಿ
ಸಾಧನೆಯೆಂದು ಮೆರೆವರು..

ವಿನಾಶದ ಅಂಚಲ್ಲಿದೆ
ಪ್ರಾಣಿ-ಪಕ್ಷಿ ಸಂಕುಲ..
ಆಕ್ರೋಶದಿ ಕೂಗುತಿವೆ
ನಮದೂ ಅಲ್ಲವೇ ನೆಲ??

ಸಹನಾಮೂರ್ತಿ, ಕ್ಷಮಯಾಧರಿತ್ರಿ
ವಸುಂಧರೆ...
ವಿಷವನ್ನುಂಡು ಅಮೃತವನೇ
ನೀಡುತಿಹಳು ಸುಮ್ಮನೆ.. 

ಸಮೀಪಿಸುತಿದೆ ಕೇಡುಗಾಲ
ಮನುಜಕುಲಕೂ ಖಂಡಿತ..
ಇದನರಿತು ಸಂರಕ್ಷಿಸಿದರೆ ಪ್ರಕೃತಿಯ
ಸುಖದ ಕಾಲ ನಿಶ್ಚಿತ.

2 ಕಾಮೆಂಟ್‌ಗಳು:

  1. ಪ್ರಕೃತಿಯ ಸಿರಿಮುಡಿಗೆ ಕೊಡಲಿ ಹಾಕಿದ ಮನುಜ ಸ್ವಾರ್ಥದಲಿ ಮುಳುಗಿಹನು ಪೂರ ಪ್ರತಿಪತಿ ಭಿತ್ತಿಯಲ್ಲಿ ಬಿಡಿಸುವನು ಗಿಡಬಳ್ಳಿ ಚಿತ್ತಾರ ಮರೆತೇಬಿಟ್ಟಿಯನ್ನು ಮಣ್ಣ ಸೊಗಡ

    ಪ್ರತ್ಯುತ್ತರಅಳಿಸಿ