ದುತ್ತೆಂದು ಬಂದೆರಗಿತು ಆ ದಿಗಿಲು
ಕಿತ್ತು ಬಿಸಾಡಿತು ಪೋಷಿಸುವ ಒಡಲು
ದೂರಾಯಿತು ಮಮತೆಯ ಮಡಿಲು
ಬಂದೆರಗಿತು ಭೀಕರ ಬರಸಿಡಿಲು
ಧರೆಯ ನೋಡಲು ಇನ್ನಿಲ್ಲ ಅವಕಾಶ
ಅದಾಗಲೇ ಬಂಧಿಸಿದೆ ಯಮಪಾಶ
ಖಚಿತವಾಗಿದೆ ಮೊಳಕೆಯಲೇ ನಾಶ
ತಿಳಿದವರಿಂದಲೇ ಶುರು ಈ ವಿನಾಶ
ನನ್ನಂಥ ಪಾಪದ ಪಿಂಡಗಳು ಹಲವಾರು
ಕೊಲೆಗೈಯಲು ಕಾರಣಗಳು ಹತ್ತಾರು
ಮೂಲ ಅತಿಯಾಗಿ ಬೆಳೆದ ವಿಜ್ಞಾನದ ಬೇರು
ಇದನೆಲ್ಲ ತಡೆಯುವ ದೇವಮಾನವನಾರು??
ಅರಿಯದ ಜೀವಕೆ ಒದಗಿಹುದು ಶಿಕ್ಷೆ
ಬೇಡಿದರೂ ಸಿಗುತಿಲ್ಲ ಪ್ರಾಣದ ಭಿಕ್ಷೆ
ಕೊಲೆಗಡುಕರಾಗುವವರು ಕೊಡುವರೇ ರಕ್ಷೆ
ಅಧಃಪತನವಾಗುತಿದೆ ಮಾನವೀಯತೆಯ ಸುಭೀಕ್ಷೆ
ಪಂಚಮ ವೇದಾ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ