ಹುಣ್ಣಿಮೆಯ ಚಂದ್ರನ ಬೆಳಕೂ
ಸುಡು ಬಿಸಿಲಂತಾಗಿದೆ..
ಶಾಂತ ಸರೋವರದಲೂ
ಸುನಾಮಿ ಎದ್ದಬ್ಬರಿಸಿದೆ..
ಒಲವು ಧಾರೆ ಬತ್ತಿ
ಮನಕೀಗ ನೋವಾಗಿದೆ..
ಬೇಸರದ ಬೇಗುದಿಗೆ
ಮನ ಮೂಕವಾಗಿದೆ..
ಒಡಲಾಳ ಕಹಿ ಸತ್ಯ
ಕಥೆಯ ಗೂಡಾಗಿದೆ..
ನಗುವೆಂಬುದು ಮರುಭೂಮಿ
ಮರೀಚಿಕೆಯಂತಾಗಿದೆ..
ಮನದ ತೊಳಲಾಟಕೆ
ಕನಸೂ ಕೂಡ ನಡುಗಿದೆ..
ಭಾವದ ಬೀಕರತೆಗೆ
ಕಣ್ಣಂಚಲೀ ಕಣ್ಣೀರಿದೆ..
ಈ ಮೌನ ಕಲಹದ ವಿರಹಕೆ
ದೊರಕುವುದೇ ವಿರಾಮ..
ಬರಡಾದ ಖಾಲಿ ಹೃದಯದಲಿ
ಆಗುವುದೇ ಮಧುರ ಭಾವದಾಗಮ..
ಪಂಚಮ ವೇದಾ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ