ಬುಧವಾರ, ನವೆಂಬರ್ 28, 2018

ಕಾಂಚಾಣ

ಝಣ ಝಣ ಈ ಕಾಂಚಾಣ
ನೆಮ್ಮದಿ ಕೆಡಲು ಇದು ಕಾರಣ
ಹರಡಿದೆ ಬರೀ ಹಗರಣ
ಇರದು ಹಣವಿರದ ತಾಣ...

ಕಾಕಿ, ಕಾದಿ, ಕಾವಿ ಎಲ್ಲರೂ
ಶರಣು ಈ ನೋಟಿಗೆ ಮೋಡಿಗೆ
ವೋಟು ಮಾರಾಟ ಕೋಟಿಗೆ
ಇದುವೇ ಔಷಧವೂ ನೋವಿಗೆ...

ಈ ಹಣದ ಮಹಿಮೆ ಅಪಾರ
ಇದರ ಮುಂದೆ ಮಾಯ ಕನಿಕರ
ಹಣವೇ ಸರಿ ಮಾಡುವುದು ಗ್ರಹಚಾರ
ಬದಲಾಗಿದೆ ಜನರ ಆಚಾರ-ವಿಚಾರ...

ಕೂಡಿಟ್ಟಿರುವರು ಕೋಟಿ ಕೋಟಿ
ಮಾಡುವರು ದೇಶದ ಲೂಟಿ
ಬಡವರಿಗೆ ಬರಿ ಏಟಿನ ಚಾಟಿ
ಹಿಡಿದಿರುವರು ಬರಿಯ ಮೇಟಿ...

       ಪಂಚಮ ವೇದಾ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ