ಝಣ ಝಣ ಈ ಕಾಂಚಾಣ
ನೆಮ್ಮದಿ ಕೆಡಲು ಇದು ಕಾರಣ
ಹರಡಿದೆ ಬರೀ ಹಗರಣ
ಇರದು ಹಣವಿರದ ತಾಣ...
ಕಾಕಿ, ಕಾದಿ, ಕಾವಿ ಎಲ್ಲರೂ
ಶರಣು ಈ ನೋಟಿಗೆ ಮೋಡಿಗೆ
ವೋಟು ಮಾರಾಟ ಕೋಟಿಗೆ
ಇದುವೇ ಔಷಧವೂ ನೋವಿಗೆ...
ಈ ಹಣದ ಮಹಿಮೆ ಅಪಾರ
ಇದರ ಮುಂದೆ ಮಾಯ ಕನಿಕರ
ಹಣವೇ ಸರಿ ಮಾಡುವುದು ಗ್ರಹಚಾರ
ಬದಲಾಗಿದೆ ಜನರ ಆಚಾರ-ವಿಚಾರ...
ಕೂಡಿಟ್ಟಿರುವರು ಕೋಟಿ ಕೋಟಿ
ಮಾಡುವರು ದೇಶದ ಲೂಟಿ
ಬಡವರಿಗೆ ಬರಿ ಏಟಿನ ಚಾಟಿ
ಹಿಡಿದಿರುವರು ಬರಿಯ ಮೇಟಿ...
ಪಂಚಮ ವೇದಾ....
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ