ಬುಧವಾರ, ಜುಲೈ 1, 2020

ಬಂಧಿ

ಕಾದು ಕುಳಿತಿಹೆ ನಾನು
ಆ ಶಬರಿಯಂತೆ
ಮನಕೆ ಮುದ ನೀಡಲು
ಬರುವೆ ನೀನೆಂದೂ...??

ಕಳೆದ ಆ ಮಧುಮಧುರ
ನೆನಪುಗಳಿಗೆ
ಮರು ಜೀವ ನೀಡುವ
ಕ್ಷಣವು ಬರುವುದೆಂದೂ...??

ಪಂಜರದ ಗಿಣಿಯಂತೆ
ಬಂಧಿ ನಾನಿಲ್ಲಿ
ಕಾಡುತಿಹ ಭಯವು
ಕೊನೆಯಾಗುವುದೆಂದೂ...??

ಪಾಂಡವರ ಬೇಗುದಿಗೂ
ಮಿಗಿಲಾದ ಈ
ಅಜ್ಞಾತವಾಸ ನನಗೆ
ಮುಗಿವ ಕ್ಷಣವೆಂದೂ...??

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ