ಕಾದು ಕುಳಿತಿಹೆ ನಾನು
ಆ ಶಬರಿಯಂತೆ
ಮನಕೆ ಮುದ ನೀಡಲು
ಬರುವೆ ನೀನೆಂದೂ...??
ಕಳೆದ ಆ ಮಧುಮಧುರ
ನೆನಪುಗಳಿಗೆ
ಮರು ಜೀವ ನೀಡುವ
ಕ್ಷಣವು ಬರುವುದೆಂದೂ...??
ಪಂಜರದ ಗಿಣಿಯಂತೆ
ಬಂಧಿ ನಾನಿಲ್ಲಿ
ಕಾಡುತಿಹ ಭಯವು
ಕೊನೆಯಾಗುವುದೆಂದೂ...??
ಪಾಂಡವರ ಬೇಗುದಿಗೂ
ಮಿಗಿಲಾದ ಈ
ಅಜ್ಞಾತವಾಸ ನನಗೆ
ಮುಗಿವ ಕ್ಷಣವೆಂದೂ...??
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ