ಹೆತ್ತ ತಂದೆ-ತಾಯಿಯರ
ಬಂಧನವ ಬಿಡಿಸಿ
ದುರುಳನಾದ ಕಂಸನ
ಸಂಹರಿಸಿದೆ ನೀ ಮುರಳಿ...
ನಿನಗೆ ಮೃತ್ಯುವಾಗಲು
ಬಂದ ರಾಕ್ಷಸಿ ಪೂತನಿಯ
ಮಗುವಾಗಿರುವಾಗಲೇ
ಕೊಂದೆ ನೀ ಶ್ಯಾಮ...
ಕೌರವ ಸಭೆಯಲಿ ದ್ರೌಪದಿಯ
ವಸ್ತ್ರಾಪಹರಣ ತಡೆದು
ಮಾನ ಉಳಿಸಿದ
ಮಹಾನುಭಾವ ನೀ ಕೃಷ್ಣ...
ಧರ್ಮ ರಕ್ಷಣೆಗಾಗಿ ಕರ್ಣನ
ಬಾಣದಿಂದ ಬಹು ಸೂಕ್ಷ್ಮದಿ
ಅರ್ಜುನನ ಪ್ರಾಣವನು
ಉಳಿಸಿದೆ ನೀ ಮಾಧವ..
ಈ ಕಲಿಯುಗದಿ ಮತ್ತೆ
ಅವತರಿಸಿ ಕಾಣದ ವಿಷಾಣುವಿನ
ಅಬ್ಬರವ ನಿಲ್ಲಿಸಿ ಮುಗ್ಧ ಜೀವಗಳ
ಉಳಿಸು ದುಷ್ಟ ಸಂಹಾರಿ ಮೋಹನ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ