ಬುಧವಾರ, ಜುಲೈ 1, 2020

ಚುಟುಕು

ತನು
ತನುವ ಸೌಂದರ್ಯಕೆ ಸೋಲದಿರು
ಹೇ ಮರುಳು ಮನುಜ
ನಶಿಸುವುದು ಕಾಲ ಕಳೆದಂತೆ
ಇದು ಬಹಳ ಸಹಜ...

ಮನ
ಹೆಂಡತಿಯ ಮಾತ ಕೇಳಿ ಒಬ್ಬ
ತಾಯಿಗೆ ಕಟ್ಟಿದ ಪಟ್ಟ ಹುಚ್ಚಿ
ಮನದ ಮಾತ ಕೇಳದೇ ಮಾಡಿದ
ಅಪರಾಧ ಕೊನೆತನಕ ಕಾಡಿತ್ತು ಚುಚ್ಚಿ...

ಧನ
ಮಾಡಿದ ದಾನ ಧರ್ಮ
ಬರುವುದು ಕೊನೆಯಲಿ
ಕೂಡಿಟ್ಟ ಧನ ಇರುವುದು
ಕೇವಲ ಪೆಟ್ಟಿಗೆಯಲಿ...


*ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ(ರಿ) -ಮಹಾರಾಷ್ಟ್ರ*🇮🇳 🇮🇳🇮🇳🇮🇳🇮🇳🇮🇳🇮🇳🇮🇳

ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ (ರಿ )-ಮಹಾರಾಷ್ಟ್ರ ಇವರು *ಕುಣಿಗಲ್ ತಾ. ಲೇಖಕರ ಬಳಗ ಹಾಗೂ ತನ್ಮಯ್ ಗ್ರೂಪ್ಸ್ ನ ಸಹಯೋಗದಲ್ಲಿ ದಿ :20.06.2020ರಂದು ಅಂತರ್ ರಾಜ್ಯ ಮಟ್ಟದ ವಾಟ್ಸಪ್ *ಚುಟುಕು ಸ್ಪರ್ಧೆ* ಯಲ್ಲಿ "ಅತ್ಯುತ್ತಮ" ಸ್ಥಾನ ದೊರೆತು "ಅನರ್ಘ್ಯ ಚುಟುಕು ರತ್ನ" ಪ್ರಶಸ್ತಿ ಗೆ ಪಾತ್ರವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ