ಬುಧವಾರ, ಜುಲೈ 1, 2020

ಕೋರಿಕೆ

ಪಟಪಟನೇ ಸುರಿವ ಮಳೆಯೇ
ತೊಳೆ ನೀ ಭುವಿಯ ಕೊಳೆಯ
ಭರಭರನೇ ಬೀಸುವ ಗಾಳಿಯೇ
ಹಾರಿಸು ನೀ ಎಲ್ಲ ಸಂಕಷ್ಟವ

ಗುಡುಗುಡು ಗುಡುವ ಗುಡುಗೇ
ಹೆದರಿ ಓಡಿಸು ವಿಷ ಜೀವಾಣುವ
ಪಕಪಕನೇ ಹೊಳೆವ ಕೋಲ್ಮಿಂಚೇ
ಓಡಿಸು ಜಗದ ಅಂಧಕಾರವ

ದಡಬಡನೇ ಬಡಿವ ಬರಸಿಡಿಲೇ
ಚೂರುಚೂರಾಗಿಸು ಅಹಂಕಾರ
ತಪ್ಪಿನ ಅರಿವು ಮಾಡು ಪ್ರಕೃತಿಯೇ
ತಾನೇ ಮೇಲೆಂದು ಮೆರೆವ ಮನುಜರ

ಓ ದೇವನೇ ಸಾಕು ಮಾಡು ಈ ನರಕ
ಕೊನೆಯಾಗಿಸು ಶೀತಲ ಸಮರ
ಉಳಿಸು ನೀ ಎಲ್ಲ ಮುಗ್ಧರ ಜೀವ
ಕೊನೆಯಾಗಿಸು ಈ ಮರಣ ಮೃದಂಗ

ಪಂಚಮ ವೇದಾ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ