ಪಟಪಟನೇ ಸುರಿವ ಮಳೆಯೇ
ತೊಳೆ ನೀ ಭುವಿಯ ಕೊಳೆಯ
ಭರಭರನೇ ಬೀಸುವ ಗಾಳಿಯೇ
ಹಾರಿಸು ನೀ ಎಲ್ಲ ಸಂಕಷ್ಟವ
ಗುಡುಗುಡು ಗುಡುವ ಗುಡುಗೇ
ಹೆದರಿ ಓಡಿಸು ವಿಷ ಜೀವಾಣುವ
ಪಕಪಕನೇ ಹೊಳೆವ ಕೋಲ್ಮಿಂಚೇ
ಓಡಿಸು ಜಗದ ಅಂಧಕಾರವ
ದಡಬಡನೇ ಬಡಿವ ಬರಸಿಡಿಲೇ
ಚೂರುಚೂರಾಗಿಸು ಅಹಂಕಾರ
ತಪ್ಪಿನ ಅರಿವು ಮಾಡು ಪ್ರಕೃತಿಯೇ
ತಾನೇ ಮೇಲೆಂದು ಮೆರೆವ ಮನುಜರ
ಓ ದೇವನೇ ಸಾಕು ಮಾಡು ಈ ನರಕ
ಕೊನೆಯಾಗಿಸು ಶೀತಲ ಸಮರ
ಉಳಿಸು ನೀ ಎಲ್ಲ ಮುಗ್ಧರ ಜೀವ
ಕೊನೆಯಾಗಿಸು ಈ ಮರಣ ಮೃದಂಗ
ಪಂಚಮ ವೇದಾ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ