ಗಣರಾಜ್ಯೋತ್ಸವ
ಗಣರಾಜ್ಯೋತ್ಸವದ ಸಂಭ್ರಮವು
ತಾಯಿ ಭಾರತಿಯೇ ನಿನಗೆ
ಸಂವಿಧಾನ ಜಾರಿಯಾದ ದಿನವು
ಇದುವೇ ನಿನಗೆ ಶುಭ ಗಳಿಗೆ
ಸಮವಸ್ತ್ರ ಧರಿಸಿ ರಾಷ್ಟ್ರಗೀತೆ
ಹಾಡಿದ ಶಾಲಾ ದಿನದ ನೆನಪು
ಮನದಿ ಇದೆ ಗಣರಾಜ್ಯೋತ್ಸವ
ಪ್ರಭಾತ ಪೇರಿಯ ಹೊಳಪು
ಇಪ್ಪತ್ತಾರು ಜನವರಿಯಂದು
ಆಚರಿಸುವೆವು ಗಣರಾಜ್ಯೋತ್ಸವ
ಶಿಸ್ತಿನಿಂದ ಮರವಣಿಗೆ ಮಾಡುತ
ಘೋಷಣೆಯನು ಕೂಗುವ
ಅಂಬೇಡ್ಕರರು ರಚಿಸಿದರು ದೇಶಕ್ಕೆ
ನೀತಿ-ನಿಯಮಗಳ ಸಂವಿಧಾನ
ದೇಶದ ಐಕ್ಯತೆ, ಸಮಗ್ರತೆಗಳಿಗೆ
ಇದುವೇ ಆಗಿಹುದು ಅಭಿದಾನ
ರಾಷ್ಟ್ರ ರಾಜಧಾನಿ ದೆಹಲಿಯಲಿ
ನಡೆವುದು ಸಿಪಾಯಿಗಳ ಮೆರವಣಿಗೆ
ಪ್ರಶಸ್ತಿ-ಪುರಸ್ಕಾರಗಳ ನೀಡುವರು
ಅಂದು ಸಾಧನೆಗೈದಂತ ವೀರರಿಗೆ
ವೇದಾವತಿ ಭಟ್ಟ
ಮುಂಬೈ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ