ಭಾನುವಾರ, ಜನವರಿ 24, 2021

ಕವಿತೆ ಕೃಷ್ಣ


ಕಲ್ಪವೃಕ್ಷ ಜಿಲ್ಲೆ ತುಮಕೂರು ಇವರ ತವರು
ಕೆಂಚಯ್ಯ-ಸಂಜೀವಮ್ಮನ ಪುತ್ರರು ಇವರು
ಶುಕ್ಲ ಪಕ್ಷದ ಚೌತಿಯಂದು ಜನಿಸಿದರು
ವಿದ್ಯಾ ವಾಚಸ್ಪತಿ ಕವಿತಾ ಕೃಷ್ಣ ಇವರು

ನನ್ನೂರು ಕ್ಯಾತಸಂದ್ರದಿ ಬಿತ್ತರ ಊರಭಿಮಾನ
ರಚಿಸಿದರು ಇವರು ಹಲವಾರು ಕವನ ಸಂಕಲನ
ಅರಸಿ ಬಂದವು ಇವರನು ಪ್ರಶಸ್ತಿ ಸನ್ಮಾನ
ಸಾಹಿತ್ಯ ಸೇವೆಗೆ ಹೆಸರು ಕವಿತಾ ಪ್ರಕಾಶನ

ಅನೇಕ ಕೃತಿಗಳಿಗೆ ಮುನ್ನುಡಿಯ ಬರೆದರು
ನಾಟಕ ಲೋಕದಲಿ ಪ್ರಸಿದ್ಧ ಇವರ ಹೆಸರು
ಜೀವನ ಚರಿತ್ರೆಗಳ ರಚನಾಕಾರರು
ಇವರೊಬ್ಬ ಹೆಸರಾಂತ ಉಪನ್ಯಾಸಕಾರು

ಮಕ್ಕಳ ಸಾಹಿತ್ಯ ಲೋಕದಲೂ ಕೈಯಾಡಿಸಿದರು
ಸಂಶೋಧನಾ ಕೃತಿಗಳ ರಚಿಸಿದ ಕರ್ತೃ ಇವರು
ಕನ್ನಡ ರತ್ನ, ಚುಂಚಶ್ರೀ ಪ್ರಶಸ್ತಿ ಪುರಸ್ಕೃತರು
ಜನಮನದಿ ಗುರುಗಳೆಂದು ಪ್ರಸಿದ್ಧರಾದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ