ಹನ್ನೆರಡನೇ ಶತಮಾನದ ಮಹಾಮಾನವ ಬಸವೇಶ್ವರ
ಜನ್ಮ ಸ್ಥಳವು ಬಸವನ ಬಾಗೇವಾಡಿಯ ಇಂಗಳೇಶ್ವರ
ಮಾದರಸ, ಮಾದಲಾಂಬಿಕೆಯರ ಮಗನಾಗಿ ಜನನ
ಸಮಾಜದ ಜನರಲಿ ಅರಿವು ಮೂಡಿಸಿತು ಇವರ ವಚನ
ಸ್ಥಾಪಿಸಿದರು ಇವರು ಅನುಭವ ಮಂಟಪವನು
ಎಲ್ಲರಿಗೂ ತಿಳಿಸಿದರು ಶಿವ ಭಕ್ತಿಯ ಸಾರವನು
ಪರಿಚಯಿಸಿದರು ಸ್ತ್ರೀ-ಪುರುಷ ಸಮಾನತೆಯನು
ವಚನದಿ ಹೇಳಿದರು ಮನಶುದ್ಧಿಯ ಮಹತ್ವವನು
ಸಮಾನತೆಯನು ಜಗಕೆ ಸಾರಿದ ಮಹಾ ಹರಿಕಾರ
ಜಗದ ಜ್ಯೋತಿ ಎಂದು ಹೆಸರಾದ ಕ್ರಾಂತಿವೀರ
ಕಾಯಕವೇ ಕೈಲಾಸ ಎಂದು ಹೇಳಿದ ವಚನಕಾರ
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಹೋರಾಟಗಾರ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ