ಗುರುವಾರ, ಮೇ 20, 2021

ಬಸವಣ್ಣ

ಹನ್ನೆರಡನೇ ಶತಮಾನದ ಮಹಾಮಾನವ ಬಸವೇಶ್ವರ
ಜನ್ಮ ಸ್ಥಳವು ಬಸವನ ಬಾಗೇವಾಡಿಯ ಇಂಗಳೇಶ್ವರ
ಮಾದರಸ, ಮಾದಲಾಂಬಿಕೆಯರ ಮಗನಾಗಿ ಜನನ
ಸಮಾಜದ ಜನರಲಿ ಅರಿವು ಮೂಡಿಸಿತು ಇವರ ವಚನ

ಸ್ಥಾಪಿಸಿದರು ಇವರು ಅನುಭವ ಮಂಟಪವನು
ಎಲ್ಲರಿಗೂ ತಿಳಿಸಿದರು ಶಿವ ಭಕ್ತಿಯ ಸಾರವನು
ಪರಿಚಯಿಸಿದರು ಸ್ತ್ರೀ-ಪುರುಷ ಸಮಾನತೆಯನು
ವಚನದಿ ಹೇಳಿದರು ಮನಶುದ್ಧಿಯ ಮಹತ್ವವನು

ಸಮಾನತೆಯನು ಜಗಕೆ ಸಾರಿದ ಮಹಾ ಹರಿಕಾರ
ಜಗದ ಜ್ಯೋತಿ ಎಂದು ಹೆಸರಾದ ಕ್ರಾಂತಿವೀರ
ಕಾಯಕವೇ ಕೈಲಾಸ ಎಂದು ಹೇಳಿದ ವಚನಕಾರ
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಹೋರಾಟಗಾರ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ