ಗುರುವಾರ, ಮೇ 20, 2021

ತಿರುಗೇಟು

ತಿರುಗೇಟು

ಉರಿಯುತಿರುವ ಮೇಣದ ಬತ್ತಿ
ಉರಿಯಬಾರದು ಎಂದಿಗೂ ಹೊತ್ತಿ
ಆಗ ಜಗವೇ ಉರಿಯುವುದು ಕತ್ತಿ
ಎಲ್ಲಕೂ ಇದೆ ಅದರದೇ ಆದ ಮಿತಿ

ಮಿತಿ ಮೀರಿದ ಮನುಜನ ಸ್ವಾರ್ಥ
ಬದುಕಿಗೆ ಇಲ್ಲವಾಗಿದೆ ಇಂದು ಅರ್ಥ
ಹಣ, ಪ್ರತಿಷ್ಠೆ ಎಲ್ಲವೂ ಬರಿ ವ್ಯರ್ಥ
ಆಗಿದೆ ಇಲ್ಲಿ ಎಲ್ಲವೂ ಅನರ್ಥ

ತನ್ನ ಬುಡಕೆ ಬೆಂಕಿ ಹಚ್ಚಿಕೊಂಡಿದೆ ಬತ್ತಿಯು
ತನ್ನ ಸ್ವಾರ್ಥಕೆ ತಾನೆ ಆಗಿದೆ ಬಲಿಯು
ಮನುಜನ ಸ್ವಾರ್ಥಕೆ ಇಲ್ಲ ಕೊನೆಯು
ನಡೆಯುತಿದೆ ಇಲ್ಲಿ ವೈರಾಣುವಿನ ಧಾಳಿಯು

ಮನುಕುಲವೇ ತಪ್ಪಿಗೆ ದಂಡ ತೆರುತಿದೆ
ಬದುಕು ಇಲ್ಲಿ ಬಹು ದುಸ್ತರವಾಗಿದೆ
ಮಾರಣ ಹೋಮ ನಡೆಯುತಲೇ ಇದೆ
ಪ್ರಕೃತಿ ಮನುಜನಿಗೆ ತಿರುಗೇಟು ನೀಡಿದೆ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ