ಹೂಡಿದೆ ಪ್ರಕೃತಿಯು ಸತ್ಯಾಗ್ರಹ
ಮುಂದಿಟ್ಟಿದೆ ತನ್ನಯ ಆಗ್ರಹ
ತತ್ತರಿಸಿದೆ ಭುವಿಯೆಂಬ ಗ್ರಹ
ಪಣವಾಗಿದೆ ಮನುಜನ ದೇಹ
ಹಿಂದೆ ಪರದಾಡಿತ್ತು ಜೀವರಾಶಿ
ತುಂಬಿತು ಮನುಜನ ಪಾಪದ ರಾಶಿ
ಇಂದು ಎಲ್ಲೆಲ್ಲೂ ಹೆಣದ ರಾಶಿ
ಕೊನೆಯಾಯ್ತು ಮನುಜನ ಖುಷಿ
ಗಾಳಿಗೆ ತೂರಿದ ಮೌಲ್ಯಗಳು, ನೀತಿ
ಸ್ವಾರ್ಥದ ಇರಬೇಕಿತ್ತು ಒಂದು ಮಿತಿ
ಮೀರಿದಾಗ ಒದಗಿ ಬಂತು ಈ ಗತಿ
ಹಣದಾಸೆಯು ಆಗಬಾರದು ಅತಿ
ಬದುಕಾಗಿದೆ ಇಂದು ಬಲು ದುಸ್ಥರ
ನಾಲ್ಕು ಗೋಡೆಯ ನಡುವೆ ಬೇಸರ
ಎಲ್ಲೆಡೆಯಲೂ ಕೇಳಿದೆ ಹಾಹಾಕಾರ
ಸಂಬಂಧಗಳು ಆದವು ಬಹುದೂರ
ಇನ್ನಾದರೂ ಬದಲಾಗಲಿ ಜೀವನ
ಸ್ವಾರ್ಥವ ತೊರೆದರೆ ಅದು ನಂದನ
ಕಳಚಲಿ ಸಕಲ ಪಾಪಗಳ ಬಂಧನ
ಜೀವನವಾಗಲಿ ಮುಂದೆ ವಿನೂತನ
ವೇದಾವತಿ ಭಟ್ಟ
ಮುಂಬೈ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ