ಬುಧವಾರ, ಜುಲೈ 7, 2021

ಮೌನ

ಮಾತೇ ಬಾರದ ನೀರಸ ಮೌನ
ಅತೀ ಬೇಸರವೆನಿಸಿದೆ ಜೀವನ ಯಾನ
ಬದುಕಾಗಿದೆ ಬರಿಯ ಕಹಿಯ ಹೂರಣ
ಎತ್ತಲೋ ಸಾಗಿದೆ ಬದುಕಿನ ಪಯಣ...

ಕಾಣದ ಕೈಯ ಆಟದಿ ಶೂನ್ಯ ಬದುಕು
ಮರೀಚಿಕೆಯಂತೆ ಸುಖವ ಹುಡುಕು
ಹಿತಬಯಸುವರು ಶತ್ರುಗಳ ಸಮಾನ
ಆಸೆ ಕನಸೆಲ್ಲವೂ ಬರೀ ಗಗನ ಕುಸುಮ...

ತಿರುಗಿದರೆ ಭಯಹುಟ್ಟಿಸುವ ಕರಾಳ ಮುಖ
ದಿಕ್ಕೆಟ್ಟ, ಕಂಗೆಟ್ಟ, ಕಾಂತೀಹೀನತೆ, ಸೂತಕ
ನಿರಾಸೆಯ ಮೃತ್ಯುಕೂಪದಲಿ ಬೆಂದ ಮನಸು
ಕೊಲೆಯಾಗಿದೆ ಕಂಡ ಎಲ್ಲ ಸಿಹಿ ಕನಸು

ನಂಬಿಕೆ ಎಂಬ ಪದಕೆ ಇಲ್ಲವು ಇಲ್ಲಿ ಬೆಲೆಯು
ಬೆನ್ನ ಹಿಂದೆ ಮೋಸ ವಂಚನೆಯ ಬಲೆಯು
ನಂಬಿದವರೇ ಬೆನ್ನಿಗೆ ಹಾಕುವರು ಚೂರಿ
ಜೊತೆಗೆ ವಿಧಿಯೂ ಆಗಿದೆ ಬಲು ಕ್ರೂರಿ

ಬೇಯುತಿದೆ ಜ್ವಾಲಾಮುಖಿಯ ಜ್ವಾಲೆಯಲಿ
ಮುಳುಗಿದೆ ಸೂತಕದಂತ ಯಾತನೆಯಲಿ
ಬಿಡುಗಡೆ ದೊರೆತರೂ ಧಿಕ್ಕರಿಸುವಂತಾಗಿದೆ
ನೋವಿನ ನಂಜಲ್ಲಿ ಹುದುಗಿ ಪರಿತಪಿಸುತಿದೆ...

ವೇದಾವತಿ ಭಟ್ಟ
ಮುಂಬೈ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ