ಜೀವನವಿತ್ತು ಮೊದಲು ಬಲು ಸೊಗಸು
ಆದರೆ ಈಗ ಪ್ರಕೃತಿಯ ಮುನಿಸು
ಬಂದಿದೆ ಎಲ್ಲೆಡೆ ಕೊರೋನಾ ವೈರಸ್ಸು
ಭಗ್ನವಾಯಿತು ಎಲ್ಲರ ಮನದ ಕನಸು
ನಿತ್ಯದ ಜೀವನಕೂ ಈಗ ಪರದಾಟ
ಬಲ್ಲವರು ಯಾರು ಆ ದೇವನ ಆಟ
ಸಿಗುತ್ತಿಲ್ಲ ಬಡವರಿಗೆ ನಿತ್ಯದ ಊಟ
ಇನ್ನಾದರೂ ಮನುಜ ಕಲಿಯಲಿ ಪಾಠ
ಮನುಜನ ಆಸೆಗೆ ಇಲ್ಲವೂ ಮಿತಿ
ಕೊನೆಯಾಗುತ್ತಿಲ್ಲ ಭೀಕರ ಪರಿಸ್ಥಿತಿ
ಎಲ್ಲೆಡೆ ಆವರಿಸಿದೆ ರೋಗದ ಭೀತಿ
ಎಂದು ಬದಲಾಗುವುದು ಈ ಸ್ಥಿತಿ??
ವೇದಾವತಿ ಭಟ್ಟ
ಮುಂಬೈ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ