ಭಾನುವಾರ, ಡಿಸೆಂಬರ್ 20, 2020

ರೈತ



ದುಡಿಮೆ ಹೊಲದಿ ಬೆವರು ಸುರಿಸಿ
ನೆತ್ತರನು ಅಲ್ಪಸ್ವಲ್ಪ ಜೊತೆಗೆ ಬೆರೆಸಿ
ಮೂಳೆಯ ಪರಿಶ್ರಮವ ಹರಿಸಿ
ಬೆಳೆಯುವೆನು ನಾನು ಪುಟ್ಟ ಸಸಿ

ಹೊರುವೆ ಮೈತುಂಬ ಸಾಲವನು
ಬೆಳೆಯನೇ ನಂಬಿ ಬದುಕುವೆನು
ತಿಳಿಯೇ ಪ್ರಕೃತಿಯ ಆಟವನು
ಕಷ್ಟದಲೇ ನೂಕುವೆ ದಿನವನು

ಕೊಡುವೆ ಜಗದ ಜನಕೆ ಅನ್ನವನು
ಕೇಳರು ಯಾರೂ ನನ್ನ ಗೋಳನು
ಚಪ್ಪಲಿಯೂ ಇಲ್ಲದೆ ನಡೆವೆನು
ನನಗೂ ನೀಡಿ ಸಹಾಯವನು

ಇಲ್ಲ ಸರ್ಕಾರದ ಸಹಾಯ ಸವಲತ್ತು
ಓಟು ಕೇಳುವಾಗ ನನ್ನ ನೆನಪಿತ್ತು
ಎಲ್ಲರೂ ನಂಬಿಸಿ ಕೊಯ್ವರು ಕತ್ತು
ಸಾಗುತಿರುವೆ ಬದುಕ ನೊಗ ಹೊತ್ತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ