ಶನಿವಾರ, ಮಾರ್ಚ್ 6, 2021

ಅರುಣೋದಯ


ಬಾನಲಿ ಮೂಡಿಹ ಸುಂದರ ನೇಸರ
ಕಳೆಯುವ ಮನದಿ ತುಂಬಿಹ ಬೇಸರ
ತನು-ಮನದಿ ಚೈತನ್ಯದ ಸಂಚಾರ
ಪ್ರಕೃತಿಗೆ ಭಾನುವಿನ ಕಿರಣದ ಹಾರ

ಕರಗುತಿದೆ ಇಬ್ಬನಿಯ ಮುತ್ತಿನ ತೋರಣ
ಬೆಳಗಿದು ಸುಂದರ, ಸವಿಯ ಹೂರಣ
ಭುವಿಯ ತುಂಬಾ ಚೆಲ್ಲಿದೆ ಹೊಂಗಿರಣ
ಕೆಂಪು ಚೆಲ್ಲಿ ಬಣ್ಣವಾಗಿದೆ ಮೂಡಣ

ಹರಡಿದೆ ಅರಳುವ ಹೂವಿನ ಕಂಪು
ಮನಸಿಗೆ ನೀಡಿದೆ ಆಹ್ಲಾದದ ತಂಪು
ಜೊತೆಯಲಿ ಚಿಲಿಪಿಲಿ ಉಲಿಯ ಇಂಪು
ಆವರಿಸಿದೆ ಬೆಚ್ಚನೆ ಬಿಸಿಲಿಗೆ ಹುರುಪು

ನೇಸರನುದಯದಿ ನಾಚಿ ನೀರಾದ ಭುವಿ
ಸಕಲ ಜೀವರಾಶಿಗೂ ಈ ಬೆಳಗು ಸವಿ
ಝೇಂಕರಿಸುತಿದೆ ಸುಪ್ರಭಾತದ ಪಲ್ಲವಿ
ಅರುಣೋದಯವ ನೋಡಿ ಆದೆ ಕವಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ