*ಜನಪದ ರತ್ನ ಸಿಂಪಿ ಲಿಂಗಣ್ಣ*
ವಿಜಯಪುರ ಜಿಲ್ಲೆಯ ಇಂಡಿಯ
ಚಡಚಣ ಗ್ರಾಮದಿ ಜನಿಸಿದರು
ಶಿವಯೋಗಿ-ಸಾವಿತ್ರಿ ದಂಪತಿಯ
ಪ್ರೇಮದ ಪುತ್ರ ಲಿಂಗಣ್ಣನವರು
ಮುಲ್ಕಿ ಮುಗಿಸಿ ಅಧ್ಯಾಪಕ ವೃತ್ತಿ
ಶೃದ್ಧೆಯಿಂದಲಿ ಪ್ರಾರಂಭಿಸಿದರು
ಗರತಿಯ ಹಾಡು, ಜೀವನ ಸಂಗೀತ
ಕವನ ಸಂಕಲನ ಪ್ರಕಟಿಸಿದರು
ಬೆಟ್ಟದ ಹೊಳೆ ಇವರ ಕಾದಂಬರಿ
ಹಲವಾರು ನಾಟಕ ರಚಿಸಿದರು
ನಾಗಾಲೋಟ, ಬಾಳ ಸಂಜೆಯ ಹಿನ್ನೋಟ
ಕೃತಿಯಲಿ ಆತ್ಮ ಚರಿತ್ರೆ ಬರೆದರು
ಜಾನಪದ ಸಾಹಿತ್ಯದ ಉಳಿವಿಗೆ
ಅವಿರತ ಶ್ರಮವಹಿಸಿದರು ಇವರು
ಜಾನಪದ ಜೀವಾಳ ಎಂಬ ಜಾನಪದ
ಕೃತಿಯ ವಿಮರ್ಶೆ ಹೊರಡಿಸಿದರು
ಕರ್ನಾಟಕ ಜನಪದ ರತ್ನ ನಮ್ಮ
ಹೆಮ್ಮೆಯ ಕವಿ ಸಿಂಪಿ ಲಿಂಗಣ್ಣನವರು
ಜಾನಪದ ದಿಗ್ಗಜರೆಂದು ಖ್ಯಾತಿಯ
ಪಡೆದ ನವೋದಯದ ಸಾಹಿತಿ ಇವರು
ಇವರನು ಅರಸಿ ಬಂದ ಪ್ರಶಸ್ತಿ,
ಗೌರವ-ಪುರಸ್ಕಾರಗಳು ಹಲವಾರು
ಪ್ರತಿವರ್ಷ ಕೊಡುವ ಸಿಂಪಿ ಲಿಂಗಣ್ಣ
ಪ್ರಶಸ್ತಿಯಿಂದ ಚಿರಸ್ಥಾಯಿ ಇವರು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ