ಭಾನುವಾರ, ನವೆಂಬರ್ 29, 2020
ಸೂರ್ಯಾಸ್ತಮಾನ
ನಾ ಕಂಡ ಇಳೆಯ ಸಂಜೆಯು
ಸ್ವರ್ಗ ಮೀರಿಸುವ ಸೊಬಗು
ಬಾನಿಂದ ಜಾರುತಿರುವ
ಸೂರ್ಯನ ಬಣ್ಣದ ಮೆರಗು
ಗೂಡು ಸೇರುವ ತವಕದಿ
ಹಕ್ಕಿಗಳ ಚಿಲಿಪಿಲಿ ಉಲಿಯು
ಬಾನಲಿ ಬಣ್ಣಗಳ ಚಿತ್ತಾರ
ಇದು ರವಿಯ ಕಲೆಯು
ಸೂರ್ಯಾಸ್ತಮಾನದಲಿ
ದೈವದ ಸೃಷ್ಟಿಗೆ ಇಲ್ಲ ಸಾಟಿಯು
ಸತ್ತಲೂ ಮನ ಸೆಳೆಯುವ
ಹಸಿರ ಸೊಬಗಿನ ಸಿರಿಯು
ಪದಗಳಿಗೆ ನಿಲುಕದಿಹ
ಸೊಬಗಿನಾ ಜಾಲವು
ಗಿರಿಯ ನಡುವೆ ರವಿಯು
ನಯನ ಮನೋಹರವು
ಶುಕ್ರವಾರ, ನವೆಂಬರ್ 27, 2020
ಬದುಕು
ಬದುಕಲಿದೆ ಸಾಧಿಸುವ ಹಂಬಲ
ಬೇಕಾಗಿದೆ ಸತತ ಮನೋಬಲ
ಜೊತೆಯಲಿರಲಿ ಅಧಮ್ಯ ಛಲ
ಮನವಾಗದಿರಲಿ ಎಂದೂ ಚಂಚಲ
ಕಾಯಕದಿ ಇಹುದು ಕೈಲಾಸ
ದೂರವಿರಲಿ ಕಲ್ಪನಾ ವಿಲಾಸ
ಚಿಮ್ಮಲಿ ಗೆಲುವ ಮಂದಹಾಸ
ಮುಗಿಯಲಿ ಸೋಲಿನ ಅಟ್ಟಹಾಸ
ಮನಸಿದ್ದರೆ ಇದೆಯು ಮಾರ್ಗವು
ಕಷ್ಟ ಸುಖದ ನಡುವೆ ಜೀವನವು
ಒಂದೇ ನಾಣ್ಯದೆರಡು ಮುಖವು
ಗುರಿಯ ಹಿಂದೆ ಇರಲಿ ಓಟವು
ಕಠಿಣವು ಜೀವನವೆಂಬ ಸಾಗರವು
ಈಜಿದಾಗಲೇ ಸಿಗುವುದು ದಡವು
ಇರಲಿ ಸದಾ ದೇವರ ಅನುಗ್ರಹವು
ಜೊತೆಯಾಗಲಿ ವಿಧಿಯ ಬೆಂಬಲವು
ಬದುಕು ಸುಖ-ದುಃಖಗಳ ಸಮ್ಮಿಶ್ರಣ
ಅಲ್ಲವು ಕೇವಲ ಸಿಹಿಯ ಹೂರಣ
ಬದುಕಾಗಲಿ ಹಲವರಿಗೆ ಅನುಕರಣ
ಸಹ ಜೀವನವಾಗಲಿ ಅನಾವರಣ
ತೆರೆಯಲಿ ಹೊಸದಾದ ಮನ್ವಂತರ
ಬದುಕಾಗಲಿ ಸಂತಸದ ಹಂದರ
ಮನವಾಗಲಿ ಶಾಂತಿಯ ಮಂದಿರ
ಇದುವೇ ಜೀವನದ ಸಾಕ್ಷಾತ್ಕಾರ
ಬೇಕಾಗಿದೆ ಸತತ ಮನೋಬಲ
ಜೊತೆಯಲಿರಲಿ ಅಧಮ್ಯ ಛಲ
ಮನವಾಗದಿರಲಿ ಎಂದೂ ಚಂಚಲ
ಕಾಯಕದಿ ಇಹುದು ಕೈಲಾಸ
ದೂರವಿರಲಿ ಕಲ್ಪನಾ ವಿಲಾಸ
ಚಿಮ್ಮಲಿ ಗೆಲುವ ಮಂದಹಾಸ
ಮುಗಿಯಲಿ ಸೋಲಿನ ಅಟ್ಟಹಾಸ
ಮನಸಿದ್ದರೆ ಇದೆಯು ಮಾರ್ಗವು
ಕಷ್ಟ ಸುಖದ ನಡುವೆ ಜೀವನವು
ಒಂದೇ ನಾಣ್ಯದೆರಡು ಮುಖವು
ಗುರಿಯ ಹಿಂದೆ ಇರಲಿ ಓಟವು
ಕಠಿಣವು ಜೀವನವೆಂಬ ಸಾಗರವು
ಈಜಿದಾಗಲೇ ಸಿಗುವುದು ದಡವು
ಇರಲಿ ಸದಾ ದೇವರ ಅನುಗ್ರಹವು
ಜೊತೆಯಾಗಲಿ ವಿಧಿಯ ಬೆಂಬಲವು
ಬದುಕು ಸುಖ-ದುಃಖಗಳ ಸಮ್ಮಿಶ್ರಣ
ಅಲ್ಲವು ಕೇವಲ ಸಿಹಿಯ ಹೂರಣ
ಬದುಕಾಗಲಿ ಹಲವರಿಗೆ ಅನುಕರಣ
ಸಹ ಜೀವನವಾಗಲಿ ಅನಾವರಣ
ತೆರೆಯಲಿ ಹೊಸದಾದ ಮನ್ವಂತರ
ಬದುಕಾಗಲಿ ಸಂತಸದ ಹಂದರ
ಮನವಾಗಲಿ ಶಾಂತಿಯ ಮಂದಿರ
ಇದುವೇ ಜೀವನದ ಸಾಕ್ಷಾತ್ಕಾರ
ಬದುಕು-ಬವಣೆ
ಬದುಕು ನಿತ್ಯ ಬವಣೆಯ ಗೂಡು
ಹೊತ್ತಿದೆ ಬಾಳಿನ ಕನಸನು ನಡು
ತಲೆಯ ಮೇಲಿಹ ಭಾರವ ನೋಡು
ಸವೆಯುತಿಹುದು ಕಾಲಿನ ಜೋಡು
ಆಸರೆಯ ಸೂರಿಗಾಗಿ ಹುಡುಕಾಟ
ಕಾಯಕವ ಹುಡುಕಿ ಅಲೆದಾಟ
ನಿತ್ಯವೂ ದೊರೆಯುವುದು ಪಾಠ
ಕೊನಯಾಗದ ಬದುಕ ಪರದಾಟ
ಕೇಳುವರಿಲ್ಲ ಒಂಟಿ ಹೆಣ್ಣಿನ ಬವಣೆ
ಹೊರಲೇ ಬೇಕು ಜೀವನದ ಹೊಣೆ
ವಿಧಿಗೆ ಇಲ್ಲವೂ ಸ್ವಲ್ಪವೂ ಕರುಣೆ
ಪ್ರತಿಷ್ಠೆ, ಹಣ ಇರುವವರಿಗಿಲ್ಲಿ ಮಣೆ
ಬವಣೆಯಲೆ ಕಳೆಯುತಿದೆ ಬಾಳು
ಜೀವನದಲಿ ತುಂಬಿಹದು ಗೋಳು
ದೀನಬಂಧು ಪರಿಹಾರವ ಹೇಳು
ದೇವನೇ ನೀನೇ ಮೊರೆಯ ಕೇಳು
ಹೊತ್ತಿದೆ ಬಾಳಿನ ಕನಸನು ನಡು
ತಲೆಯ ಮೇಲಿಹ ಭಾರವ ನೋಡು
ಸವೆಯುತಿಹುದು ಕಾಲಿನ ಜೋಡು
ಆಸರೆಯ ಸೂರಿಗಾಗಿ ಹುಡುಕಾಟ
ಕಾಯಕವ ಹುಡುಕಿ ಅಲೆದಾಟ
ನಿತ್ಯವೂ ದೊರೆಯುವುದು ಪಾಠ
ಕೊನಯಾಗದ ಬದುಕ ಪರದಾಟ
ಕೇಳುವರಿಲ್ಲ ಒಂಟಿ ಹೆಣ್ಣಿನ ಬವಣೆ
ಹೊರಲೇ ಬೇಕು ಜೀವನದ ಹೊಣೆ
ವಿಧಿಗೆ ಇಲ್ಲವೂ ಸ್ವಲ್ಪವೂ ಕರುಣೆ
ಪ್ರತಿಷ್ಠೆ, ಹಣ ಇರುವವರಿಗಿಲ್ಲಿ ಮಣೆ
ಬವಣೆಯಲೆ ಕಳೆಯುತಿದೆ ಬಾಳು
ಜೀವನದಲಿ ತುಂಬಿಹದು ಗೋಳು
ದೀನಬಂಧು ಪರಿಹಾರವ ಹೇಳು
ದೇವನೇ ನೀನೇ ಮೊರೆಯ ಕೇಳು
ಗುರುವಾರ, ನವೆಂಬರ್ 19, 2020
ಬಣ್ಣದ ಬದುಕು
ಇದು ಬಣ್ಣದ ಬದುಕು
ಕೇವಲ ಸುಖವ ಹುಡುಕು
ಆಚರಣೆಗಳೆಲ್ಲ ಕೆಡುಕು
ಬರೀ ಥಳುಕು ಬಳುಕು
ಕಷ್ಟ ಪಡುವವರಿಲ್ಲ ಯಾರೂ
ಸುಖ ಬಯಸುವರು ಎಲ್ಲರೂ
ನಗರವ ಸೇರಿದರು ಜನರು
ಮಾನವೀಯನು ಮರೆತರು
ಹಣದ ಹಿಂದಾಯಿತು ಓಟ
ಮರೆತರು ದಿನದ ಊಟ
ಮರೆಯಿತು ಸಂಬಂಧದ ಪಾಠ
ಜೀವವಾಯಿತು ರೋಗದ ಕೂಟ
ಇದು ಬರೀ ಆಧುನಿಕ ಜೀವನ
ಅಭ್ಯಾಸಗಳೆಲ್ಲ ನವನವೀನ
ಹಳ್ಳಿಯ ಇದು ಕೇವಲ ಕಥನ
ಮೋಜು ಮಸ್ತಿ ಬದುಕ ವಿಧಾನ
ಹೆತ್ತವರಿಗಾಯಿತು ಅನಾಥಾಲಯ
ಕೇವಲ ಪದಗಳಾದವು ನಯವಿನಯ
ಇಲ್ಲದಾಯಿತು ನಂಬಿಕೆಯ ಭಯ
ಮರೆತಾಯಿತು ಕರುಣೆ, ದಯ
ಕೇವಲ ಸುಖವ ಹುಡುಕು
ಆಚರಣೆಗಳೆಲ್ಲ ಕೆಡುಕು
ಬರೀ ಥಳುಕು ಬಳುಕು
ಕಷ್ಟ ಪಡುವವರಿಲ್ಲ ಯಾರೂ
ಸುಖ ಬಯಸುವರು ಎಲ್ಲರೂ
ನಗರವ ಸೇರಿದರು ಜನರು
ಮಾನವೀಯನು ಮರೆತರು
ಹಣದ ಹಿಂದಾಯಿತು ಓಟ
ಮರೆತರು ದಿನದ ಊಟ
ಮರೆಯಿತು ಸಂಬಂಧದ ಪಾಠ
ಜೀವವಾಯಿತು ರೋಗದ ಕೂಟ
ಇದು ಬರೀ ಆಧುನಿಕ ಜೀವನ
ಅಭ್ಯಾಸಗಳೆಲ್ಲ ನವನವೀನ
ಹಳ್ಳಿಯ ಇದು ಕೇವಲ ಕಥನ
ಮೋಜು ಮಸ್ತಿ ಬದುಕ ವಿಧಾನ
ಹೆತ್ತವರಿಗಾಯಿತು ಅನಾಥಾಲಯ
ಕೇವಲ ಪದಗಳಾದವು ನಯವಿನಯ
ಇಲ್ಲದಾಯಿತು ನಂಬಿಕೆಯ ಭಯ
ಮರೆತಾಯಿತು ಕರುಣೆ, ದಯ
ರವಿ ಬೆಳಗೆರೆ
ಜನ್ಮವು ಬಳ್ಳಾರಿ ಸತ್ಯನಾರಾಯಣ ಪೇಟೆಯು
ಕೈಬೀಸಿ ಕರೆಯಿತು ಅಧ್ಯಾಪಕ ವೃತ್ತಿಯು
ನಟನೆ, ನಿರೂಪಣೆ, ಬರವಣಿಗೆ ಪ್ರವೃತ್ತಿಯು
ಮಂತ್ರಮುಗ್ಧವಾಗಿಸಿತು ಇವರ ಬರವಣಿಗೆಯು
ಬರಹ ಲೋಕದ ಮಹಾ ಮಾಂತ್ರಿಕ
ಕಂಚಿನ ಕಂಠದ ಅದ್ಭುತ ನಿರೂಪಕ
ಪಾಕ್ಷಿಕ, ಮಾಸಿಕ ಪತ್ರಿಕೆಯ ಸಂಪಾದಕ
ಪ್ರಾರ್ಥನಾ ವಿದ್ಯಾ ಸಂಸ್ಥೆಯ ಸಂಸ್ಥಾಪಕ
ಯುವ ಮನಸುಗಳಿಗೆ ಬರವಣಿಗೆಯ
ಗೀಳು ಹಿಡಿಸಿದ ಮಹಾ ಜಾದೂಗಾರ
ಜ್ಞಾನ ದೀಪವ ಹೊತ್ತಿಸಿದ ದೈವ ನೀ
ಪ್ರತೀ ಅಕ್ಷರಕೂ ಜೀವ ತುಂಬಿದ ಕಥೆಗಾರ
ಹೇಳಿ ಹೋಗು ಕಾರಣ ಎನ್ನುತಲಿ
ಹೇಳದೆ ಹೋದೆ ಬಾರದ ಲೋಕಕೆ
ಯಾರು ಹೇಳುವರು ಇನ್ನು ಸಾಂತ್ವನ
ನೋವು-ದುಃಖ ತುಂಬಿದ ಮನಕೆ
ಭಾವುಕತೆ, ಧೈರ್ಯದಲಿ ಮೀರಿಸುವರಿಲ್ಲ
ಬರಹವಣಿಗೆ ಲೋಕವೇ ಅನಾಥವಾಯ್ತಲ್ಲ
ಕಂಚಿನ ಕಂಠದಾ ಅಬ್ಬರವು ಇನ್ನಿಲ್ಲ
ಅಕ್ಷರ ಮಾಂತ್ರಿಕನ ಬದುಕು ಮುಗಿಯಿತಲ್ಲ
ಅಕ್ಷರ ದೀಪ
ನಮ್ಮ ಹೆಮ್ಮೆಯ ವೇದಿಕೆ ಅಕ್ಷರ ದೀಪ
ಹಚ್ಚುವ ನಾವು ಇಲ್ಲಿ ಅಕ್ಷರಗಳ ದೀಪ
ಸಾಹಿತ್ಯಕೆ ಕೊಡುವುದು ಹೊಸ ರೂಪ
ಕವಿ ಮನಸುಗಳಿಗಿದುವೇ ನಂದಾದೀಪ
ಅಕ್ಷರದ ದೀಪ ಹಚ್ಚಲು ವೇದಿಕೆ ಇದುವು
ಸೃಜನಶೀಲತೆಗೆ ಇದು ಆಗಿಹುದು ಒಡಲು
ಉತ್ತಮ ಸ್ಪರ್ಧೆಯ ವಿಧಗಳು ಹತ್ತು ಹಲವು
ಸಾಹಿತ್ಯ ಜ್ಞಾನವನು ಹೊತ್ತು ತರುವ ಕಡಲು
ನಮ್ಮ ವೇದಿಕೆಯೆಂಬ ಹೆಮ್ಮೆ ನಮಗೆ
ನಿರಂತರವೂ ಸಾಹಿತ್ಯದ ಬೆಳವಣಿಗೆ
ಕೀರ್ತಿ ಹರಡಲಿ ಜಗದ ತುದಿಯವರೆಗೆ
ದಿನವೂ ಕನ್ನಡ ಸಾಹಿತ್ಯದ ಮೆರವಣಿಗೆ
ಪ್ರತಿಭೆಗಳಿಗೆ ದೊರೆಹುದು ಇಲ್ಲಿ ಪುರಸ್ಕಾರ
ಇದುವು ಕವಿ ಹೃದಯಗಳ ಭಾವದ ಸಾಗರ
ಸೃಜನಶೀಲ ವಿಚಾರಗಳ ಸುಂದರ ಹಂದರ
ಕವಿ ಮನಗಳಿಗಿದು ಅವಕಾಶಗಳ ಆಗರ
ಬುಧವಾರ, ನವೆಂಬರ್ 18, 2020
ಮಕ್ಕಳು
ಮಕ್ಕಳು
ಮಕ್ಕಳ ಮನವಿದು ಹೂವಿನಂತೆ
ಮಗ್ಧತೆಯ ಪ್ರತಿ ರೂಪದಂತೆ
ನಿಷ್ಕಲ್ಮಷತೆ ತುಂಬಿದ ಹೃದಯ
ಆ ನಗುವಿನಲೇ ಜಗ ತನ್ಮಯ
ಮನೆಯೇ ಮೊದಲ ಪಾಠಶಾಲೆ
ಜನನಿಯೇ ಮೊದಲ ಗುರುವು
ಹಾಕಬೇಕು ಭದ್ರ ಬುನಾದಿ ನೆಲೆ
ಮೌಲ್ಯಗಳೇ ಬಾಳಿಗೆ ಬಲವು
ಉತ್ತಮ ಆಹಾರವ ಒದಗಿಸಿ
ವಿದ್ಯೆ ನೀಡಿ ಬಾಳನು ಬೆಳಗಿಸಿ
ಬೇಕು ಬೇಡಗಳನು ಪೂರೈಸಿ
ಉಜ್ವಲ ಭವಿಷ್ಯಕೆ ಹಾರೈಸಿ
ಕೆಲಸವು ಬೇಡವು ಬಾಲ್ಯದಲಿ
ಬೆಳೆಯುವ ಸಿರಿ ಮೊಳಕೆಯಲಿ
ಉತ್ತಮ ಶಿಕ್ಷಣವು ದೊರೆಯಲಿ
ಸಂಸ್ಕಾರ ಸಂಸ್ಕೃತಿಯೂ ಇರಲಿ
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು
ನಮ್ಮ ಸಮಾಜದ ನಂದಾದೀಪಗಳು
ಹೆತ್ತವರಿಗೆ ಇವರೇ ಎಂದೂ ಕಣ್ಣುಗಳು
ನಮ್ಮ ಬದುಕಿನ ಹೊಸ ಕನಸುಗಳು
ಮಕ್ಕಳ ಮನವಿದು ಹೂವಿನಂತೆ
ಮಗ್ಧತೆಯ ಪ್ರತಿ ರೂಪದಂತೆ
ನಿಷ್ಕಲ್ಮಷತೆ ತುಂಬಿದ ಹೃದಯ
ಆ ನಗುವಿನಲೇ ಜಗ ತನ್ಮಯ
ಮನೆಯೇ ಮೊದಲ ಪಾಠಶಾಲೆ
ಜನನಿಯೇ ಮೊದಲ ಗುರುವು
ಹಾಕಬೇಕು ಭದ್ರ ಬುನಾದಿ ನೆಲೆ
ಮೌಲ್ಯಗಳೇ ಬಾಳಿಗೆ ಬಲವು
ಉತ್ತಮ ಆಹಾರವ ಒದಗಿಸಿ
ವಿದ್ಯೆ ನೀಡಿ ಬಾಳನು ಬೆಳಗಿಸಿ
ಬೇಕು ಬೇಡಗಳನು ಪೂರೈಸಿ
ಉಜ್ವಲ ಭವಿಷ್ಯಕೆ ಹಾರೈಸಿ
ಕೆಲಸವು ಬೇಡವು ಬಾಲ್ಯದಲಿ
ಬೆಳೆಯುವ ಸಿರಿ ಮೊಳಕೆಯಲಿ
ಉತ್ತಮ ಶಿಕ್ಷಣವು ದೊರೆಯಲಿ
ಸಂಸ್ಕಾರ ಸಂಸ್ಕೃತಿಯೂ ಇರಲಿ
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು
ನಮ್ಮ ಸಮಾಜದ ನಂದಾದೀಪಗಳು
ಹೆತ್ತವರಿಗೆ ಇವರೇ ಎಂದೂ ಕಣ್ಣುಗಳು
ನಮ್ಮ ಬದುಕಿನ ಹೊಸ ಕನಸುಗಳು
ಮನದನ್ನೆ
ಮನೋಹರಿ ನನ್ನ ಮನದನ್ನೆ
ಮುಡಿಪಾಗಿಡುವೆ ಬದುಕನ್ನೆ
ಸುರಿವೆ ಪ್ರೀತಿಯ ಧಾರಯನ್ನೆ
ಗಣದಲಿ ಸುಗುಣೆ ಸಂಪನ್ನೆ
ಮನವ ಕದ್ದ ಕೋಮಲ ಹರಿಣಿ
ನೀನೆ ನನ್ನ ಮನೆಯ ಮಹರಾಣಿ
ಆಗಿರುವೆ ಸೌಂದರ್ಯದ ಕಣಿ
ಮೃದುಭಾಷಿ ನನ್ನ ಅರಗಿಣಿ
ಭಾವ ತರಂಗದ ಗುಪ್ತಗಾಮಿನಿ
ನನ್ನ ಉಸಿರಾಗಿಹ ಮಾನಿನಿ
ನಡಿಗೆಯಲಿ ಇವಳು ಹಂಸಿನಿ
ಚತುರೆ ಸುಜ್ಞಾನದ ವಾಹಿನಿ
ಪಾಕಶಾಸ್ತ್ರದಲಿ ಪ್ರವೀಣೆಯು
ಕಲೆ ಸಾಹಿತ್ಯದಲಿ ಇಲ್ಲ ಸಾಟಿಯು
ಇವಳೇ ನಾಟ್ಯ ಮಯೂರಿಯು
ನನ್ನ ಬಾಳಿನ ಕಾವ್ಯ ಕನ್ನಿಕೆಯು
ಕರುನಾಡು
ನಮ್ಮದಿದು ನಮ್ಮದಿದು ಚೆಲುವ ಕನ್ನಡ ನಾಡು
ಶಿಲ್ಪಕಲೆ ಸಂಸ್ಕೃತಿಯ ವೈಭವದ ಸಿರಿನಾಡು
ಹಸಿರ ಸಿರಿ ಮೈತಳೆದ ಸೊಬಗಿನ ಕರುನಾಡು
ತೆಂಗು-ಕಂಗು, ಭತ್ತ-ರಾಗಿ ಬೆಳೆಯುವ ನಾಡು
ಸಾಹಿತ್ಯ ಸಿರಿಯಲೂ ಮೇರು ಆಗಿಹ ನಾಡು
ಕೃಷ್ಣೆ ಕಾವೇರಿ ಶರಾವತಿ ತುಂಗೆಯರ ನೆಲೆವೀಡು
ಸಹ್ಯಾದ್ರಿಯ ಸಾಲು ಮೈತಳೆದ ಕರುನಾಡು
ಕೆಚ್ಚೆದೆಯ ವೀರರಿಗೆ ಜನುಮ ನೀಡಿದ ಗೂಡು
ಜಕ್ಕಣ-ಡಂಕಣನ ಶಿಲ್ಪಕಲೆಗೆ ಹೆಸರಾದ ನಾಡು
ಪಂಪ ಕುಮಾರ ರಾಘವರುದಿಸಿದ ತಾಯ್ನಾಡು
ಕಸ್ತೂರಿ ಕನ್ನಡದ ಕಂಪು ಹರಡಿಹ ನಾಡು
ಕುವೆಂಪು ಬೇಂದ್ರೆ ಮಾಸ್ತಿಯರ ತಾಯ್ನಾಡು
ತಾಯಿ ಭುವನೇಶ್ವರಿಯು ನೆಲೆಸಿಹ ಸಿರಿನಾಡು
ಶಿಲ್ಪಕಲೆಗೆ ಹೆಸರಾದ ದೇವಾಲಯಗಳ ಗೂಡು
ಬೆಲೆ ಬಾಳುವ ಚಿನ್ನ ದೊರೆಯುವ ನಾಡು
ಋಷಿಗಳಾ ಕವಿಗಳಾ ವೀರ-ಶೂರರಾ ತಾಯ್ನಾಡು
ಹುಲಿ ಸಿಂಹ ಆನೆ ನವಿಲು ಸಾರಂಗದ ನೆಲೆವೀಡು
ತೇಗ ಗಂಧ ಆಲ ಬೇಲಗಳ ಹಸಿರು ಸಿರಿಯ ನಾಡು
ವಿಶ್ವ ವಿಖ್ಯಾತ ಜೋಗ ಜಲಪಾತದ ಸೊಬಗ ನಾಡು
ಕಲ್ಲುಕಲ್ಲಿನಲೂ ವೈಭವವ ಹೊತ್ತ ಪುಣ್ಯದ ನಾಡು
ದೀಪಾವಳಿ
ಹೊಸ ಮನ್ವಂತರಕೆ ನಾಂದಿಯಾಗಲಿ ದೀಪ
ಕೊಳಯನೆಲ್ಲ ಸುಡಲಿ ಹಚ್ಚಿದ ದೀಪದ ತಾಪ
ಕೊನೆಯಾಗಲಿ ಜಗಕೆ ಅಂಟಿರುವ ಶಾಪ
ಮನೆ-ಮನಕೆ ಚೈತನ್ಯವ ತುಂಬಲಿ ದೀಪ
ಸಾಲು ಸಾಲಿನಲಿ ಹಚ್ಚುವ ನಾವು ಪ್ರಣತಿ
ಮರೆಯುವ ಎಲ್ಲ ಕಹಿ ನೋವಿನ ಸಂಗತಿ
ನಮ್ಮಯ ಗುರಿಯಾಗಲಿ ಕೇವಲ ಪ್ರಗತಿ
ನಿರತವೂ ಗೆಲುವಾಗಲಿ ನಮ್ಮಯ ಅತಿಥಿ
ಸಾಗುವ ಕತ್ತಲೆಯಿಂದ ಬೆಳಕಿನೆಡೆಗೆ
ಹೋಗುವ ಅಜ್ಞಾನದಿಂದ ಜ್ಞಾನದೆಡೆಗೆ
ದ್ವೇಷ ರೋಷ ಮರೆತು ಪ್ರೀತಿಯೆಡೆಗೆ
ಹರುಷವಾಗಲಿ ಈ ಹಬ್ಬದ ಕೊಡುಗೆ
ದೀಪದಿಂದ ದೀಪವ ಹಚ್ಚುವ ದೀಪಾವಳಿ
ಅಂಧಕಾರವು ಸರಿದು ಜ್ಞಾನ ನೆಲೆಯಾಗಲಿ
ಜೀವನವು ಸ್ಪೂರ್ತಿಯ ಸೆಲೆಯಾಗಲಿ
ದೈವದ ಹರಕೆಯು ನಮ್ಮ ಬಲವಾಗಲಿ
ಶುಕ್ರವಾರ, ನವೆಂಬರ್ 6, 2020
ಮೈಸೂರು ದಸರಾ
ದುರ್ಗೆಯಿಂದ ಮಹಿಷಾಸುರನ ಸಂಹಾರ
ಈ ದೇವಿಯ ಪೂಜಿಸುವ ಉತ್ಸವ ದಸರ
ವಿಧ ವಿಧವಾದ ಕಲಾ ವೈಭವದ ಹಂದರ
ನೋಡಲು ಬಲು ಆಕರ್ಷಕ, ಸುಂದರ
ನವ ಅವತಾರದಿ ದುರ್ಗೆಯು ಬರುವಳು
ನವ ವಿಧದ ಪೂಜೆಯ ಸ್ವೀಕರಿಸುವಳು
ಮಹಿಷಾಸುರಮರ್ದಿನಿ ಚಾಮುಂಡಿ ಇವಳು
ಲೋಕವ ಕಾಯುವ ದೇವತೆಯಾಗಿಹಳು
ಮೈಸೂರಿನಲಿ ಆನೆಯ ಮೇಲೆ ಅಂಬಾರಿ
ಗಾಂಭೀರ್ಯದಲಿ ಜಂಬೂ ಸವಾರಿ
ರಾಜಮನೆತನದವರ ಉಸ್ತುವಾರಿ
ಜನ ಸೇರುವರು ದಸರೆಗೆ ಮಿತಿಮೀರಿ
ಕಣ್ಮನ ಸೆಳೆಯುವ ದೀಪಾಲಂಕಾರವು
ಸಾಂಸ್ಕೃತಿಕ ಕಲೆಗಳಿಗಿದುವೇ ತಾಣವು
ದೇಶ-ವಿದೇಶದಲೂ ದಸರಾ ಪ್ರಸಿದ್ಧವು
ಕರ್ನಾಟಕದ ವೈಭವದ ನಾಡಹಬ್ಬವು
ಚಾಮುಂಡಿಬೆಟ್ಟದಲಿ ವಿಶೇಷ ಪೂಜೆಯು
ವೈಭವದಲಿ ತೇಲುವ ಅರಮನೆಯು
ಕಣ್ಮನವ ಸೆಳೆಯುವ ಹಬ್ಬ ದಸರೆಯು
ಇರಲಿ ಎಲ್ಲರ ಮೇಲೆ ದೇವಿಯ ಕೃಪೆಯು
ಕನ್ನಡ ಸೇವೆ
ಗೂಡು ಬಿಟ್ಟ ಹಕ್ಕಿಗಳು ನಾವು
ಗಡಿನಾಡ ಕನ್ನಡಿಗರು ನಾವು
ಕರುನಾಡು ನಮ್ಮ ತಾಯಿನಾಡು
ನಮ್ಮ ತಾಯಿನುಡಿ ಕನ್ನಡವು
ಕನ್ನಡಕೆಂದು ಚಿರಋಣಿಯು
ಗೈಯುವೆ ಸಾಹಿತ್ಯ ಸೇವೆಯನು
ಕನ್ನಡವೇ ನನ್ನುಸಿರು ನಿತ್ಯಹಸಿರು
ಕನ್ನಡ ಭಾಷೆ ಎನಗೆ ಕಾಮಧೇನು
ಲಿಪಿಗಳ ರಾಣಿ ಕನ್ನಡ ಭಾಷೆಗೆ
ಹೃದಯಾಂತರಾಳದಾ ನಮನವು
ಅಭಿಜಾತ ಭಾಷೆ ಎಂಬ ಗೌರವವು
ಕನ್ನಡ ಮಾತನಾಡುವ ಅನುದಿನವು
ಕನ್ನಡವನೇ ನುಡಿವೆ ಕೊನೆವರೆಗೆ
ಕನ್ನಡದಲೇ ನನ್ನಯ ಬರವಣಿಗೆ
ಕನ್ನಡವೇ ಭಾವದುಸಿರು ಎನಗೆ
ಕನ್ನಡಕಾಗಿ ಬದುಕು ಕೊನೆವರೆಗೆ
ಸಮಯದ ಮಹತ್ವ
ಮುತ್ತಿಗಿಂತ ಹೊತ್ತು ಉತ್ತಮ
ಅರಿತರೆ ಜೀವನ ಸುಗಮ
ಕೂತು ಕಳೆಯಬೇಡ ಹೊತ್ತು
ಬರುವುದು ದೊಡ್ಡ ವಿಪತ್ತು...
ಕಳೆಯ ಸಮಯ ಬರದು
ತಿರುಗಿ ಮತ್ತೆ ಎಂದೆಂದೂ
ಹಣಕೆ ಸಿಗುವುದು ಮುತ್ತು
ಹಣಕೂ ಸಿಗದ ವಸ್ತು ಹೊತ್ತು...
ಮೂರೇ ದಿನ ಜೀವನವು
ಪ್ರತಿ ಕ್ಷಣವೂ ಅಮೂಲ್ಯವು
ಇರುವ ಸಮಯ ಬಳಸಿ
ನಡೆವ ಗುರಿಯ ಅರಸಿ...
ಸದ್ಭಳಕೆ ಮಾಡುವ ಸಮಯ
ಸಮಯ ತೋರದು ದಯ
ಹೊತ್ತಿಗಿದೆ ಅದರದೇ ಹಿರಿಮೆ
ತಿಳಿದವರಾರು ಮಹಿಮೆ
ಸಂವಿಧಾನ ಶಿಲ್ಪಿ
ಮಹಾರಾಷ್ಟ್ರದ ರತ್ನಾಗಿರಿಯಲಿ ಭೀಮನ ಜನನ
ಬಾಲ್ಯದಲೇ ತಾಯಿ ಭೀಮಾಬಾಯಿಯ ನಿಧನ
ಅತ್ತೆ ಮೀರಾಳ ಜೊತೆ ಬಡತನದಲೇ ಜೀವನ
ಇವರು ಅಸ್ಪೃಶ್ಯತೆಯ ವಿರುದ್ಧ ಸಾರಿದರು ಕದನ
ಪಡೆದರು ಅರ್ಥಶಾಸ್ತ್ರ, ರಾಜನೀತಿಯ ಪದವಿಯನು
ವಿದೇಶದಲಿ ಸಂಪಾದಿಸಿದರು ವಕೀಲಿ ವೃತ್ತಿಯನು
ಪಡೆದರು ಪರಿಶ್ರಮದಿ ಡಾಕ್ಟರೇಟ್ ಪದವಿಯನು
ಸ್ಥಾಪಿಸಿದರು ದಲಿತ ವರ್ಗದ ಕಲ್ಯಾಣ ಸಂಸ್ಥೆಯನು
ನೀಡಿದರು ಮನುಸ್ಮೃತಿ ಚಳುವಳಿಗೆ ಚಾಲನೆ
ಮಾಡಿದರು ಸಮಾನತೆಯ ಹಕ್ಕಿನ ಪ್ರತಿಪಾದನೆ
ಹೂಡಿದರು ಜಾತಿಪದ್ಧತಿಯ ವಿರುದ್ಧ ಪ್ರತಿಭಟನೆ
ಯಶಸ್ವಿಯಾಗಿ ಮಾಡಿದರು ಕಾರ್ಯಸಾಧನೆ
ಇವರು ಭಾರತದ ಮಹಾನ್ ಸಂವಿಧಾನ ಶಿಲ್ಪಿಯು
ಅಪಾರ ಜ್ಞಾನದ ಕಡಲು ಈ ಪುಸ್ತಕ ಪ್ರೇಮಿಯು
ಕೊನಯಲಿ ಶಾಂತಿಗಾಗಿ ಬೌದ್ಧ ಧರ್ಮಿಯಾದರು
ಇವರಿಗೆ ಭಾರತರತ್ನವನು ನೀಡಿ ಗೌರವಿಸಿದರು
ಮಹಾ ಮಾನವತಾವಾದಿ
ಭೀಮಾಬಾಯಿ ರಾಮಜೀಯ
ಸುತನು ಈ ಭೀಮನು
ಮಹಾರಾಷ್ಟ್ರ ರತ್ನಾಗಿರಿಯಲಿ
ಇವನು ಜನಿಸಿದನು
ಅಸ್ಪೃಶ್ಯತೆ ಬಡತನದಲೇ
ಬಾಲ್ಯವನು ಕಳೆದನು
ಎಂದಿಗೂ ಮೊದಲಿಗನು
ವಿದ್ಯೆಯಲಿ ಇವನು
ಅರ್ಥಶಾಸ್ತ್ರ ನ್ಯಾಯಶಾಸ್ತ್ರದಿ
ಪದವಿಯನು ಪಡೆದರು
ವಿದೇಶದಲಿ ಕಾನೂನು
ಅಭ್ಯಾಸವನು ಮಾಡಿದರು
ಭಾರತದ ಸಂವಿಧಾನದ
ಶಿಲ್ಪಿಯು ಇವರಾದರು
ಅಸ್ಪೃಶ್ಯತೆಯ ವಿರುದ್ಧ
ಸಮರವನು ಸಾರಿದರು
ಮಹಾ ಮಾನವತಾವಾದಿ
ಪುಸ್ತಕಗಳ ಪ್ರೇಮಿಯು
ಭಾರತರತ್ನ ಪುರಸ್ಕೃತರು
ಬುದ್ಧನ ಅನುಯಾಯಿಯು
ವೀರ ವನಿತೆ ಓಬವ್ವ
ಗಂಡುಮೆಟ್ಟಿದ ನಾಡು ಚಿತ್ರದುರ್ಗವು
ಅಲ್ಲಿಹ ಬಲಿಷ್ಠ ಕಲ್ಲಿನ ಕೋಟೆಯು
ವೀರ ಮದಕರಿ ನಾಯಕನು ಆಳಿದ
ಹಸಿರ ನಡುವಿನ ಉಕ್ಕಿನ ಕೋಟೆಯು
ಕೋಟೆಯ ಕಾವಲಿಗೆ ಇರುವನು
ಶೂರನಾದ ಮದ್ದ ಹನುಮಪ್ಪನು
ಇವನು ಊಟಕೆ ಮನೆಗೆ ಬಂದನು
ಇವನ ಹೆಂಡತಿಯು ಓಬವ್ವನು
ಮನೆಯಲಿ ನೀರು ಮುಗಿದಿರಲು
ಓಬವ್ವ ನೀರಿಗಾಗಿ ಹೊರಟಳು
ಆಗಲೇ ಕಳ್ಳ ಗಿಂಡಿಯಲಿ ಸೈನಿಕರು
ನುಗ್ಗುವದನು ಅವಳು ನೋಡಿದಳು
ಒನಕೆ ಹಿಡಿದು ಅಲ್ಲಿಗೆ ನಡೆದಳು
ಒನಕೆಯಲಿ ತಲೆಯ ಜಜ್ಜಿ ಒಡೆದಳು
ಹೆಣಗಳ ಎಳೆದು ಬೀಸಾಡಿದಳು
ಹೈದರನ ಸೈನ್ಯವನು ಬಗ್ಗು ಬಡಿದಳು
ಊಟ ಮುಗಿಸಿ ಬಂದ ಕಾವಲುಗಾರನು
ರಕ್ತಸಿಕ್ತ ಹೆಂಡತಿಯ ನೋಡಿ ದಂಗಾದನು
ಕೊಡಲೇ ಕಹಳೆಯನು ಊದಿದನು
ಶತ್ರುಗಳ ಮಣಿಸಿ ಗಳಿಸಿದರು ಜಯವನು
ಇತಿಹಾಸದಿ ಹೆಸರಾದಳು ಒನಕೆ ಓಬವ್ವ
ಕರ್ನಾಟಕದ ವೀರ ವನಿತೆ ಓಬವ್ವಳು
ಶೌರ್ಯಕೆ ಮನೆ ಮಾತಾದಳು ನಮ್ಮವ್ವ
ಒನಕೆ ಓಬವ್ವನ ಕಿಂಡಿಗೆ ಹಚ್ಚ ಹಸಿರಾದಳು
ಕಸ್ತೂರಿ ಕನ್ನಡ
ಕಸ್ತೂರಿ ಕನ್ನಡವು ನಮ್ಮ ನುಡಿಯು
ಅಭಿಜಾತ ಭಾಷೆ ಎಂಬ ಹೆಮ್ಮೆಯು
ಆಗಿಹುದು ಇದು ಲಿಪಿಗಳ ರಾಣಿಯು
ಕರುನಾಡು ನಮ್ಮ ತಾಯಿ ಗುಡಿಯು
ಎನಿತು ನಮ್ಮ ನುಡಿಯು ಸೊಗವು
ಅತೀ ಮಧುರ ಕನ್ನಡ ಸ್ವರಾಕ್ಷರವು
ಕೋಗಿಲೆಯ ನದಿಯಂತೆ ಇಂಪು
ನಮ್ಮ ನುಡಿಯೇ ನಮ್ಮ ಬಲವು
ಬ್ರಾಹ್ಮಿ ಲಿಪಿಯಿಂದ ಉಗಮ ಕನ್ನಡವು
ಸಾವಿರದ ಐನೂರು ವರ್ಷದ ಇತಿಹಾಸವು
ಹಲ್ಮಿಡಿ ಕನ್ನಡದ ಮೊದಲ ಶಾಸನವು
ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿಹವು
ಪಂಪ ಕುಮಾರವ್ಯಾಸರ ಕವಿಗಳ ಹಿರಿಮೆ
ಕುವೆಂಪು ಮಾಸ್ತಿ ಸಾಹಿತ್ಯದ ಗರಿಮೆ
ನವ ವಿಧದ ಸಾಹಿತ್ಯಕಿದು ಒಲುಮೆ
ಸಿರಿಗನ್ನಡವು ನಮ್ಮ ಭಾಷೆಯೆಂಬ ಹೆಮ್ಮೆ
ಆಧುನಿಕ ಜೀವನ
ಕೋಟಿ ರೂಪಾಯಿ ಕಾಂಕ್ರೀಟು
ಮನೆಗೆ ಒಡೆಯನು ನಾನು
ತುಂಬಿಹುದು ಬಗೆ ಬಗೆಯ
ಕಾರು, ಎಸಿ, ಸೋಫಾ, ಫ್ಯಾನು
ದುಬಾರಿ ಬೆಲೆಗೆ ಸಿಗುವುದು
ರಾಸಾಯನಿಕ ಮಿಶ್ರಿತ ನೀರು
ಗಾಳಿಯಲೂ ತುಂಬಿಹುದು
ಕಷ್ಮಲ ಶುದ್ಧವಿಲ್ಲವೂ ಚೂರು
ಆಧುನಿಕತೆಯ ಭರದಲಿ
ನಾಶವಾಗಿದೆ ಹಸಿರು
ಜನಜಂಗುಳಿಯ ನಗರ
ಕಲುಷಿತತೆಯ ತವರು
ಜೀವನವು ಆಗಿದೆ ಸರಳ
ಕವಲೊಡೆದ ದಾರಿ
ಬೆರಳ ತುದಿಯಲೇ ಬೇಕೆಲ್ಲ
ಜನರಾಗಿಹರು ಸೋಮಾರಿ
ಮನೆ ಕೆಳಗಿಳಿದರೆ
ಸಿಗುವುದು ಎಲ್ಲ
ಏನು ಮಾಡುವುದು
ನೆಮ್ಮದಿಯೇ ಇಲ್ಲ
ಗುರುವಾರ, ನವೆಂಬರ್ 5, 2020
ಕನ್ನಡ ನಾಡು
ಕಸ್ತೂರಿ ಕನ್ನಡವು ನಮ್ಮ ಭಾಷೆಯೆಂಬ ಹಿರಿಮೆ
ಕರುನಾಡು ನಮ್ಮ ತಾಯ್ನಾಡು ಎಂಬ ಗರಿಮೆ
ವಿವಿಧತೆಯಲಿ ಏಕತೆಯ ಸಾರುವ ನಾಡು
ಶ್ರೀಗಂಧ-ತೇಗ, ಖಗ-ಮೃಗಗಳ ಬೀಡು
ಸಪ್ತ ಜ್ಞಾನಪೀಠ ಕವಿಗಳಿಗಿದು ತಾಯ್ನಾಡು
ಪಂಪ ಕುಮಾರವ್ಯಾಸ ಉದಿಸಿಹ ನಾಡು
ತಾಯಿ ಕಾವೇರಿ ಉಗಮವಾದ ಪುಣ್ಯನಾಡು
ಕಾಮಧೇನು ಕಲ್ಪವೃಕ್ಷ ತುಂಬಿರುವ ನಾಡು
ಶಿಲೆ ಶಿಲೆಯಲೂ ಶಿಲ್ಪಕಲೆ ಅರಳಿದ ನಾಡು
ಗಂಗ-ಕದಂಬರಾಳಿದಂತ ವೈಭವದ ಗೂಡು
ಜೋಗ ಜಲಪಾತ ಧುಮ್ಮಿಕ್ಕಿದ ಸಿರಿನಾಡು
ವಿಶ್ವ ವಿಖ್ಯಾತ ಹಂಪಿ, ಬಾದಾಮಿಯ ನಾಡು
ಮೈಸೂರು ಅರಮನೆ, ಬೃಂದಾವನದ ನಾಡು
ಸಂಸ್ಕೃತಿ-ಸಂಸ್ಕಾರಗಳಿಗೆ ಇದುವೇ ಗೂಡು
ಕರುನಾಡು ನಮ್ಮ ತಾಯ್ನಾಡು ಎಂಬ ಗರಿಮೆ
ವಿವಿಧತೆಯಲಿ ಏಕತೆಯ ಸಾರುವ ನಾಡು
ಶ್ರೀಗಂಧ-ತೇಗ, ಖಗ-ಮೃಗಗಳ ಬೀಡು
ಸಪ್ತ ಜ್ಞಾನಪೀಠ ಕವಿಗಳಿಗಿದು ತಾಯ್ನಾಡು
ಪಂಪ ಕುಮಾರವ್ಯಾಸ ಉದಿಸಿಹ ನಾಡು
ತಾಯಿ ಕಾವೇರಿ ಉಗಮವಾದ ಪುಣ್ಯನಾಡು
ಕಾಮಧೇನು ಕಲ್ಪವೃಕ್ಷ ತುಂಬಿರುವ ನಾಡು
ಶಿಲೆ ಶಿಲೆಯಲೂ ಶಿಲ್ಪಕಲೆ ಅರಳಿದ ನಾಡು
ಗಂಗ-ಕದಂಬರಾಳಿದಂತ ವೈಭವದ ಗೂಡು
ಜೋಗ ಜಲಪಾತ ಧುಮ್ಮಿಕ್ಕಿದ ಸಿರಿನಾಡು
ವಿಶ್ವ ವಿಖ್ಯಾತ ಹಂಪಿ, ಬಾದಾಮಿಯ ನಾಡು
ಮೈಸೂರು ಅರಮನೆ, ಬೃಂದಾವನದ ನಾಡು
ಸಂಸ್ಕೃತಿ-ಸಂಸ್ಕಾರಗಳಿಗೆ ಇದುವೇ ಗೂಡು
ಬುಧವಾರ, ನವೆಂಬರ್ 4, 2020
ಕಡಲ ತೀರದ ಭಾರ್ಗವ
ಉಡುಪಿಯ ಕೋಟದ ಶಿವರಾಮ ಕಾರಂತರು
ನಡೆದಾಡುವ ವಿಶ್ವಕೋಶ ಆಗಿದ್ದರು ಇವರು
ಕಡಲ ತೀರದ ಭಾರ್ಗವ ಎಂದು ಪ್ರಸಿದ್ಧರು
ಪದ್ಮಭೂಷಣ ಪಂಪ ಪ್ರಶಸ್ತಿ ಪುರಸ್ಕೃತರು
ಕನ್ನಡ ಸಾಹಿತ್ಯ ಸಂಸ್ಕೃತಿಯ ವಕ್ತಾರ
ಪ್ರಸಿದ್ಧ ಕಾದಂಬರಿಕಾರ, ನಾಟಕಕಾರ
ವೈಜ್ಞಾನಿಕ ಲೇಖನಗಳ ಬರಹಗಾರ
ಜ್ಞಾನಪೀಠ ನಾಡೋಜದ ಪುರಸ್ಕಾರ
ಪರಿಸರ ಪ್ರೇಮಿ, ಹೋರಾಟಗಾರ ಇವರು
ಬಾಲವನದ ಕಾರಂತಜ್ಜ ಎಂದು ಪ್ರಸಿದ್ಧರು
ಸ್ವಾತಂತ್ರ್ಯ ಸಂಗ್ರಾಮದಲೂ ಇದೆ ಹೆಸರು
ವಿಶ್ವಕೋಶ ನಿಘಂಟುಗಳ ರಚನೆಕಾರರು
ಪ್ರಸಿದ್ಧ ಚೋಮನದುಡಿ, ಮೂಕಜ್ಜಿಯ ಕನಸು
ಚಲನಚಿತ್ರವಾಯ್ತು ಕಾದಂಬರಿ ಚಿಗುರಿದ ಕನಸು
ಇವರ ನಾಟಕಗಳು ಆಹಾ ಎಂತಹ ಸೊಗಸು
ಸೊರೆಗೊಂಡರು ಸಾಹಿತ್ಯ ಪ್ರೇಮಿಗಳ ಮನಸು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)