ಭಾನುವಾರ, ಡಿಸೆಂಬರ್ 20, 2020
ಹೆಣ್ಣಿನ ಬದುಕು
ಜೊತೆಗಿಹುದು ಕಾನೂನು ಸಂವಿಧಾನ
ಆದರೂ ನಿಲ್ಲದಿದು ನೋವಿನ ಯಾನ
ಶೋಷಣೆಯಲೇ ಕಳೆಯುತಿದೆ ಜೀವನ
ಹೆಣ್ಣಿನ ಭಾವನೆಗಳಿಗಿಲ್ಲವು ಸ್ಪಂದನ
ನಿಲ್ಲಲಿಲ್ಲ ಅತ್ಯಾಚಾರಿಗಳ ಅಟ್ಟಹಾಸ
ಮೊಳಗುತಿದೆ ದುರುಳರ ಮಂದಹಾಸ
ವಿಕೃತ ಮನಸುಗಳ ಮನದ ಸಂತಸ
ಶೋಷಣೆಗಿದೆ ಶತಮಾನದ ಇತಿಹಾಸ
ಆಗಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ
ನೀಡಬಾರದು ಮತ್ತೆ ಜೀವನದ ಭಿಕ್ಷೆ
ತೊಡುವ ನಾರಿಯ ಸಮ್ಮಾನದ ದೀಕ್ಷೆ
ಸಮಾಜದಿ ನೆಲೆಸಲಿ ಶಾಂತಿ ಸುಭೀಕ್ಷೆ
ನಾರಿಯ ಕಣ್ಣೀರು ಕೊನೆಯಾಗಲಿ
ಅತ್ಯಾಚಾರಿಗಳ ಬಾಳು ಅಂತ್ಯವಾಗಲಿ
ಸುಭದ್ರ ಸಮಾಜ ನಿರ್ಮಾಣವಾಗಲಿ
ಹೆಣ್ಣಿನ ಶೋಷಣೆ ಮುಕ್ತಾಯವಾಗಲಿ
ರೈತ
ದುಡಿಮೆ ಹೊಲದಿ ಬೆವರು ಸುರಿಸಿ
ನೆತ್ತರನು ಅಲ್ಪಸ್ವಲ್ಪ ಜೊತೆಗೆ ಬೆರೆಸಿ
ಮೂಳೆಯ ಪರಿಶ್ರಮವ ಹರಿಸಿ
ಬೆಳೆಯುವೆನು ನಾನು ಪುಟ್ಟ ಸಸಿ
ಹೊರುವೆ ಮೈತುಂಬ ಸಾಲವನು
ಬೆಳೆಯನೇ ನಂಬಿ ಬದುಕುವೆನು
ತಿಳಿಯೇ ಪ್ರಕೃತಿಯ ಆಟವನು
ಕಷ್ಟದಲೇ ನೂಕುವೆ ದಿನವನು
ಕೊಡುವೆ ಜಗದ ಜನಕೆ ಅನ್ನವನು
ಕೇಳರು ಯಾರೂ ನನ್ನ ಗೋಳನು
ಚಪ್ಪಲಿಯೂ ಇಲ್ಲದೆ ನಡೆವೆನು
ನನಗೂ ನೀಡಿ ಸಹಾಯವನು
ಇಲ್ಲ ಸರ್ಕಾರದ ಸಹಾಯ ಸವಲತ್ತು
ಓಟು ಕೇಳುವಾಗ ನನ್ನ ನೆನಪಿತ್ತು
ಎಲ್ಲರೂ ನಂಬಿಸಿ ಕೊಯ್ವರು ಕತ್ತು
ಸಾಗುತಿರುವೆ ಬದುಕ ನೊಗ ಹೊತ್ತು
ದ್ವಿಮುಖ
ಕವಲೊಡೆದಿದೆ ಭಾವಗಳ ಬಾಳು
ಜೊತೆಯಾಗಿ ಕಂಡ ಕನಸು ಹೋಳು
ಬಾಳಾಗಿದೆ ಈಗ ಬರಿಯ ಗೋಳು
ಕಹಿಯಾಗಿದೆ ಜೀವನದ ತಿರುಳು
ಸಾಗರದ ಆಳಕೂ ಹರಡಿದೆ ನೋವು
ನೀಲ ಶರಧಿಗೂ ತಾಕಿದೆ ವಿರಹದ ಕಾವು
ಕಳಚುತಿದೆ ಒಲವ ಭಾವ ಬಂಧನವು
ಭಿನ್ನತೆಯು ಮೂಡಿ ಆಗಿದೆ ದ್ವಿಮುಖವು
ಮನವೆಂಬ ಸರೋವರದಿ ಭೋರ್ಗರೆತ
ಭಾವ ಸಾಗರದಲೆಗಳಲಿ ಬಲು ಏರಿಳಿತ
ಮನದೊಳಗಣ ನೋವಿನದೇ ತುಡಿತ
ಸ್ತಬ್ಧವಾಗಿದೆ ಈ ಹೃದಯದ ಮಿಡಿತ
ಒಂಟಿಯಾಗಿದೆ ಬಾಳ ಸಂಜೆಯ ಪಯಣ
ತಿಳಿಯುತಿಲ್ಲವು ಹುಡುಕಿದರೂ ಕಾರಣ
ತುಂಬಿದೆ ಮನದಿ ಬರಿ ನೋವ ಹೂರಣ
ಭಾರವಾಗಿದೆ ಒಲವಿಲ್ಲದೇ ಅಂತಃಕರಣ
ಕಂದಾ
ಮುದ್ದು ಮೊಗದ ಹಸುಕಂದ
ನಿನ್ನಾ ನಗುವೇ ಬಲು ಚೆಂದ
ನೀ ನನ್ನ ಮನದ ಆನಂದ
ಜನ್ಮಾಂತರದ ಈ ಅನುಬಂಧ
ಕೃಷ್ಣನಾಗು ಯಶೋದೆಯಾಗುವೆ
ರಾಮನಾದರೆ ಕೌಸಲ್ಯೆಯಾಗುವೆ
ಗಣಪನಾದರೆ ನಾ ಗೌರಿಯಾಗುವೆ
ನಾ ನಿನ್ನಯ ಹಿಂದಿರುವೆ ಮಗುವೆ
ಅಭ್ಯಂಗ ಧಾರೆಯ ಮೈಗೆ ತೀಡುವೆ
ಜಲಧಾರೆಯಲಿ ಸ್ನಾನ ಮಾಡಿಸುವೆ
ಪ್ರೀತಿಯಲಿ ಕೈತುತ್ತನು ನೀಡುವೆ
ಯನ್ನ ಮಡಿಲಲಿ ಮಲಗು ಮಗುವೆ
ನನ್ನ ಜೀವದ ಜೀವವು ನೀನು
ಮನೆಯ ನಂದಾದೀಪವು ನೀನು
ಈ ಬಾಳ ಹಸಿರು ಉಸಿರು ನೀನು
ನಿನ್ನ ಕಂಠದ ಸ್ವರವು ಸವಿಜೇನು
ನಿನ್ನಾ ನಗುವೇ ಬಲು ಚೆಂದ
ನೀ ನನ್ನ ಮನದ ಆನಂದ
ಜನ್ಮಾಂತರದ ಈ ಅನುಬಂಧ
ಕೃಷ್ಣನಾಗು ಯಶೋದೆಯಾಗುವೆ
ರಾಮನಾದರೆ ಕೌಸಲ್ಯೆಯಾಗುವೆ
ಗಣಪನಾದರೆ ನಾ ಗೌರಿಯಾಗುವೆ
ನಾ ನಿನ್ನಯ ಹಿಂದಿರುವೆ ಮಗುವೆ
ಅಭ್ಯಂಗ ಧಾರೆಯ ಮೈಗೆ ತೀಡುವೆ
ಜಲಧಾರೆಯಲಿ ಸ್ನಾನ ಮಾಡಿಸುವೆ
ಪ್ರೀತಿಯಲಿ ಕೈತುತ್ತನು ನೀಡುವೆ
ಯನ್ನ ಮಡಿಲಲಿ ಮಲಗು ಮಗುವೆ
ನನ್ನ ಜೀವದ ಜೀವವು ನೀನು
ಮನೆಯ ನಂದಾದೀಪವು ನೀನು
ಈ ಬಾಳ ಹಸಿರು ಉಸಿರು ನೀನು
ನಿನ್ನ ಕಂಠದ ಸ್ವರವು ಸವಿಜೇನು
ದೇವ ಮಾನವ ಯೇಸು
ಬೆತ್ಲೆಹೇಂನಲ್ಲಿ ಜನಿಸಿದ ಕೂಸು
ದೇವ ಮಾನವನ ಹೆಸರು ಏಸು
ಮೇರಿ-ಜೋಸೆಫ್ ರ ಸುತನೀತ
ಅಹಿಂಸೆಯ ಜಗಕೆ ಸಾರಿದಾತ
ಚುಮುಚುಮು ಚಳಿಯಲಿ
ಇಪ್ಪತ್ತೈದು ಡಿಸೆಂಬರ್ ನಲಿ
ಯೇಸುಕ್ರಿಸ್ತನ ಜನುಮ ದಿನವು
ಇದುವೇ ಕ್ರಿಸ್ ಮಸ್ ಹಬ್ಬವು
ಬರುವನು ಕೆಂಪಂಗಿಯ ತಾತಾ
ಉಡುಗೊರೆಯ ತರುವ ತಾತಾ
ಕ್ರಿಸ್ ಮಸ್ ಟ್ರೀಗೆ ದೀಪಾಲಂಕಾರ
ಸ್ಮರಿಸುತ ಯೇಸುವಿನ ಉಪಕಾರ
ಸ್ನೇಹ ಸಹಬಾಳ್ವೆ ಇವನ ಉಸಿರು
ಶಾಂತಿ ಸಹನೆ ಸಾರಿ ಜಗ ಹಸಿರು
ಪಠಿಸುತ ಪವಿತ್ರ ಬೈಬಲ್ ಗ್ರಂಥವನು
ತಾನೇ ಹೊರುತಲಿ ಎಲ್ಲರ ನೋವನು
ಶುಕ್ರವಾರ, ಡಿಸೆಂಬರ್ 11, 2020
ಪಾರಿ
ನನ್ನಯ ಮುದ್ದಿನ ಗೊಂಬೆ ಪಾರಿ
ಇದುವೇ ನನ್ನಯ ಮೆಚ್ಚಿನ ಆಟಿಕೆ
ಗುಲಾಬಿ ಬಣ್ಣದ ನನ್ನಯ ಗೊಂಬೆ
ನಿಮಗೂ ಇದುವು ಆಡಲು ಬೇಕೇ?
ಪಾರಿ ಎಂಬ ಮುದ್ದಿನ ಗೊಂಬೆಯ
ಅಪ್ಪನು ಜಾತ್ರೆಯಿಂದ ತಂದಿಹನು
ಪಿಳಿ ಪಿಳಿ ಕಣ್ಣಿನ ಗೊಂಬೆಯ
ನನಗೆ ಆಡಲು ಜೊತೆ ಮಾಡಿಹನು
ಜರಿಯ ಲಂಗವನು ಧರಿಸಿರುವ
ಗೊಂಬೆಯ ಜೊತೆಗೆ ನನ್ನ ಊಟ
ಹೊಂಬಣ್ಣದ ಕೂದಲಿನ ಚೆಂದದ
ಗೊಂಬೆ ಇಲ್ಲದೆ ಆಗದು ಆಟ-ಪಾಠ
ಗೊಂಬೆಯ ಜೊತೆಗೆ ಆಡುವೆ
ಅಮ್ಮ-ಮಗುವಿನ ಆಟವನು
ತಲೆಯನು ಬಾಚಿ ಸ್ನಾನವ
ಮಾಡಿಸಿ ತಿನಿಸುವೆ ಊಟವನು
ಮುದ್ದಿನ ಗೊಂಬೆಯೇ ಪಾರಿ
ನೀ ಎಂದಿಗೂ ನನ್ನಯ ಗೆಳತಿ
ಮರೆಯಲಾರೆ ಎಂದೆಂದಿಗೂ
ನೀನೇ ಬಾಲ್ಯದ ಜೊತೆಗಾತಿ
ಗುರುವಾರ, ಡಿಸೆಂಬರ್ 10, 2020
ನಂಬಿಕೆ
ಅಳಸಬೇಕು ನಾವು
ಮೂಢನಂಬಿಕೆಗಳನು
ಜೀವನದಿ ಇಡುವ
ಹೊಸ ಹೆಜ್ಜೆಯನು
ಕಳೆಯುತಿದೆ ಹಳೆಯ
ಏಳುಬೀಳಿನ ವರುಷವು
ಬರುತಲಿದೆ ಸಂತಸದಿ
ಹೊಸ ಮನ್ವಂತರವು
ಅಜ್ಞಾನ ಅಂಧಕಾರವನು
ನಾವು ಓಡಿಸುವ ಇಂದು
ಸುಜ್ಞಾನದ ಜ್ಯೋತಿಯನು
ಬೆಳಗಿಸುವ ಬಾ ಬಂಧು
ಮಹಿಳೆಯರಿಗೆ ನೀಡುವ
ಸ್ವಾತಂತ್ರ್ಯದ ಸವಿಯ
ನಂಬಿಕೆಯ ತುಂಬುತಾ
ಮನುಕುಲಕೆ ಅಭಯ
ಬುಧವಾರ, ಡಿಸೆಂಬರ್ 9, 2020
ನೀರಿನ ಸದ್ಭಳಕೆ
ಬನ್ನಿ ಉಳಿಸೋಣ ಜೀವಜಲ
ಹಸಿರಾಗಿಸುವ ನಮ್ಮಯ ನೆಲ
ಉಳಿಸುವ ಜೀವಿಗಳ ಪ್ರಾಣ
ಮಕ್ಕಳೇ ತೊಡುವ ಇಂದೇ ಪಣ
ಪೋಲು ಮಾಡದಿರಿ ಹನಿ ನೀರು
ಉಳಿಸುವ ಜೀವಜಲದ ತುಂತುರು
ಮಾಡುವ ಅಂತರ್ಜಲದ ಉಳಿಕೆ
ದಿನನಿತ್ಯ ಮಾಡುವ ನೀರಿನ ಸದ್ಭಳಕೆ
ಹಸಿರೇ ನಮ್ಮಯ ಜೀವದುಸಿರು
ಹಸಿರು ಉಳಿದರೆ ಉಂಟು ನೀರು
ಅತಿವೃಷ್ಟಿ ಅನಾವೃಷ್ಟಿ ತಡೆಯುವ
ಹಸಿರು ಗಿಡಗಳನು ನಾವು ಬೆಳೆಸುವ
ಕಾಡು ಕಡಿದರೆ ನೀರಿಗೆ ಹಾಹಾಕಾರ
ಜೀವ ಸಂಕುಲಗಳಿಗೆ ಸಂಚಕಾರ
ಕಲಿಯುವ ನೀರಿನ ಹಿತಮಿತ ಬಳಕೆ
ಇದುವೆ ಆಗಿದೆ ಮುಂದಿನ ಗಳಿಕೆ
ಕರೆಕಟ್ಟೆಗಳನು ಕಲುಷಿತಗೊಳಿಸದೆ
ಸ್ವಚ್ಛ ಇಡುವ ಪಣ ತೊಡುವ ಇಂದೆ
ಪರಿಸರವನು ಇರಿಸುವ ಸ್ವಚ್ಛವಾಗಿ
ಎಲ್ಲರನು ಕರೆಯುವ ನಾವು ಕೂಗಿ
ಮಂಗಳವಾರ, ಡಿಸೆಂಬರ್ 8, 2020
ಮಧುರ ಬಾಲ್ಯ
ಮರೆಯಲಾಗದ ಮಧುರ ಬಾಲ್ಯ
ಇದಕೆ ಕಟ್ಟಲಾಗದು ನಿಖರ ಮೌಲ್ಯ
ಬಾಲ್ಯದ ಕ್ಷಣಗಳಿಗೆ ಅಲ್ಲವೂ ತುಲ್ಯ
ಮರಳಿ ಬರಬಾರದೇ ಆ ಬಾಲ್ಯ
ಸೀಬೆ ಹಣ್ಣು ಕದ್ದು ತಿಂದ ನೆನಪು
ಮರವನು ಹತ್ತಿ ಬಿದ್ದ ಹುರುಪು
ಸುತ್ತ ಇರುವ ಸ್ನೇಹಿತರ ಗುಂಪು
ಬಾಲ್ಯದ ನೆನಪು ಮನದಿ ಸೊಂಪು
ವರ್ಣಮಾಲೆ ಕಲಿತ ಮುದವು
ಶಾಲೆಯ ಮೊದಲ ದಿನದ ಭಯವು
ಮರೆಯದ ಗುರುಗಳ ಹೊಡೆತವು
ಮನಃ ಪಟಲದಿ ಹಸಿರು ನಿತ್ಯವು
ಕುಂಟೆ-ಬಿಲ್ಲೆ, ನೆಲ್ಲಿ ಕಾಯಿಯ ಸವಿ
ಸ್ವರ್ಗವು ಎಂದೂ ಬಾಲ್ಯದಿ ಭುವಿ
ಚಿಂತೆ, ಬಡತನ ಅಂದು ಗಿರವಿ
ಬಾಲ್ಯದ ನೆನಪಲಿ ಆದೆನು ಕವಿ
ಸ್ಪೂರ್ತಿ ಗೀತೆ
ಮಾರ್ಗದರ್ಶನ ನೀಡುವವರು
ಇಲ್ಲದಿದ್ದರೇನು ತೊಂದರೆ
ಹೊಸ ಮಾರ್ಗವನೇ ಸೃಷ್ಟಿಸುವ
ಧೈರ್ಯ, ಛಲವು ನಿನ್ನಲಿ ಇದ್ದರೆ
ಜಗವೇ ಬರುವುದು ನೀ
ಸೃಷ್ಟಿಸಿದ ಮಾರ್ಗದಲಿ ಎಂದು
ಸ್ವಾಮಿ ವಿವೇಕಾನಂದರ
ನುಡಿಯಿದು ಸತ್ಯವು ಎಂದೆಂದೂ
ಆತ್ಮಸ್ಥೈರ್ಯದ ಮುಂದೆ
ಎಲ್ಲ ಕಷ್ಟಗಳು ಸೊನ್ನೆ
ಮರೆತು ಬಿಡು ಸೋಲಿನ
ಅವಮಾನಗಳ ನಿನ್ನೆ
ಮುಂದಿರುವ ಗುರಿಯೆಡೆಗೆ
ಸಾಗು ನೀ ಎಡೆಬಿಡದೆ
ಮನೋಬಲವು ಇರಲಿ
ಓಡು ನೀ ಎದೆಗುಂದದೆ
ಜೊತೆಯಿರಲಿ ಎಂದೂ
ಸತ್ಯ, ಮಾನವೀಯತೆ
ಬದುಕಾಗಲಿ ನಿತ್ಯವೂ
ವಿಜಯದ ಸ್ಪೂರ್ತಿಗೀತೆ
ಭಾನುವಾರ, ನವೆಂಬರ್ 29, 2020
ಸೂರ್ಯಾಸ್ತಮಾನ
ನಾ ಕಂಡ ಇಳೆಯ ಸಂಜೆಯು
ಸ್ವರ್ಗ ಮೀರಿಸುವ ಸೊಬಗು
ಬಾನಿಂದ ಜಾರುತಿರುವ
ಸೂರ್ಯನ ಬಣ್ಣದ ಮೆರಗು
ಗೂಡು ಸೇರುವ ತವಕದಿ
ಹಕ್ಕಿಗಳ ಚಿಲಿಪಿಲಿ ಉಲಿಯು
ಬಾನಲಿ ಬಣ್ಣಗಳ ಚಿತ್ತಾರ
ಇದು ರವಿಯ ಕಲೆಯು
ಸೂರ್ಯಾಸ್ತಮಾನದಲಿ
ದೈವದ ಸೃಷ್ಟಿಗೆ ಇಲ್ಲ ಸಾಟಿಯು
ಸತ್ತಲೂ ಮನ ಸೆಳೆಯುವ
ಹಸಿರ ಸೊಬಗಿನ ಸಿರಿಯು
ಪದಗಳಿಗೆ ನಿಲುಕದಿಹ
ಸೊಬಗಿನಾ ಜಾಲವು
ಗಿರಿಯ ನಡುವೆ ರವಿಯು
ನಯನ ಮನೋಹರವು
ಶುಕ್ರವಾರ, ನವೆಂಬರ್ 27, 2020
ಬದುಕು
ಬದುಕಲಿದೆ ಸಾಧಿಸುವ ಹಂಬಲ
ಬೇಕಾಗಿದೆ ಸತತ ಮನೋಬಲ
ಜೊತೆಯಲಿರಲಿ ಅಧಮ್ಯ ಛಲ
ಮನವಾಗದಿರಲಿ ಎಂದೂ ಚಂಚಲ
ಕಾಯಕದಿ ಇಹುದು ಕೈಲಾಸ
ದೂರವಿರಲಿ ಕಲ್ಪನಾ ವಿಲಾಸ
ಚಿಮ್ಮಲಿ ಗೆಲುವ ಮಂದಹಾಸ
ಮುಗಿಯಲಿ ಸೋಲಿನ ಅಟ್ಟಹಾಸ
ಮನಸಿದ್ದರೆ ಇದೆಯು ಮಾರ್ಗವು
ಕಷ್ಟ ಸುಖದ ನಡುವೆ ಜೀವನವು
ಒಂದೇ ನಾಣ್ಯದೆರಡು ಮುಖವು
ಗುರಿಯ ಹಿಂದೆ ಇರಲಿ ಓಟವು
ಕಠಿಣವು ಜೀವನವೆಂಬ ಸಾಗರವು
ಈಜಿದಾಗಲೇ ಸಿಗುವುದು ದಡವು
ಇರಲಿ ಸದಾ ದೇವರ ಅನುಗ್ರಹವು
ಜೊತೆಯಾಗಲಿ ವಿಧಿಯ ಬೆಂಬಲವು
ಬದುಕು ಸುಖ-ದುಃಖಗಳ ಸಮ್ಮಿಶ್ರಣ
ಅಲ್ಲವು ಕೇವಲ ಸಿಹಿಯ ಹೂರಣ
ಬದುಕಾಗಲಿ ಹಲವರಿಗೆ ಅನುಕರಣ
ಸಹ ಜೀವನವಾಗಲಿ ಅನಾವರಣ
ತೆರೆಯಲಿ ಹೊಸದಾದ ಮನ್ವಂತರ
ಬದುಕಾಗಲಿ ಸಂತಸದ ಹಂದರ
ಮನವಾಗಲಿ ಶಾಂತಿಯ ಮಂದಿರ
ಇದುವೇ ಜೀವನದ ಸಾಕ್ಷಾತ್ಕಾರ
ಬೇಕಾಗಿದೆ ಸತತ ಮನೋಬಲ
ಜೊತೆಯಲಿರಲಿ ಅಧಮ್ಯ ಛಲ
ಮನವಾಗದಿರಲಿ ಎಂದೂ ಚಂಚಲ
ಕಾಯಕದಿ ಇಹುದು ಕೈಲಾಸ
ದೂರವಿರಲಿ ಕಲ್ಪನಾ ವಿಲಾಸ
ಚಿಮ್ಮಲಿ ಗೆಲುವ ಮಂದಹಾಸ
ಮುಗಿಯಲಿ ಸೋಲಿನ ಅಟ್ಟಹಾಸ
ಮನಸಿದ್ದರೆ ಇದೆಯು ಮಾರ್ಗವು
ಕಷ್ಟ ಸುಖದ ನಡುವೆ ಜೀವನವು
ಒಂದೇ ನಾಣ್ಯದೆರಡು ಮುಖವು
ಗುರಿಯ ಹಿಂದೆ ಇರಲಿ ಓಟವು
ಕಠಿಣವು ಜೀವನವೆಂಬ ಸಾಗರವು
ಈಜಿದಾಗಲೇ ಸಿಗುವುದು ದಡವು
ಇರಲಿ ಸದಾ ದೇವರ ಅನುಗ್ರಹವು
ಜೊತೆಯಾಗಲಿ ವಿಧಿಯ ಬೆಂಬಲವು
ಬದುಕು ಸುಖ-ದುಃಖಗಳ ಸಮ್ಮಿಶ್ರಣ
ಅಲ್ಲವು ಕೇವಲ ಸಿಹಿಯ ಹೂರಣ
ಬದುಕಾಗಲಿ ಹಲವರಿಗೆ ಅನುಕರಣ
ಸಹ ಜೀವನವಾಗಲಿ ಅನಾವರಣ
ತೆರೆಯಲಿ ಹೊಸದಾದ ಮನ್ವಂತರ
ಬದುಕಾಗಲಿ ಸಂತಸದ ಹಂದರ
ಮನವಾಗಲಿ ಶಾಂತಿಯ ಮಂದಿರ
ಇದುವೇ ಜೀವನದ ಸಾಕ್ಷಾತ್ಕಾರ
ಬದುಕು-ಬವಣೆ
ಬದುಕು ನಿತ್ಯ ಬವಣೆಯ ಗೂಡು
ಹೊತ್ತಿದೆ ಬಾಳಿನ ಕನಸನು ನಡು
ತಲೆಯ ಮೇಲಿಹ ಭಾರವ ನೋಡು
ಸವೆಯುತಿಹುದು ಕಾಲಿನ ಜೋಡು
ಆಸರೆಯ ಸೂರಿಗಾಗಿ ಹುಡುಕಾಟ
ಕಾಯಕವ ಹುಡುಕಿ ಅಲೆದಾಟ
ನಿತ್ಯವೂ ದೊರೆಯುವುದು ಪಾಠ
ಕೊನಯಾಗದ ಬದುಕ ಪರದಾಟ
ಕೇಳುವರಿಲ್ಲ ಒಂಟಿ ಹೆಣ್ಣಿನ ಬವಣೆ
ಹೊರಲೇ ಬೇಕು ಜೀವನದ ಹೊಣೆ
ವಿಧಿಗೆ ಇಲ್ಲವೂ ಸ್ವಲ್ಪವೂ ಕರುಣೆ
ಪ್ರತಿಷ್ಠೆ, ಹಣ ಇರುವವರಿಗಿಲ್ಲಿ ಮಣೆ
ಬವಣೆಯಲೆ ಕಳೆಯುತಿದೆ ಬಾಳು
ಜೀವನದಲಿ ತುಂಬಿಹದು ಗೋಳು
ದೀನಬಂಧು ಪರಿಹಾರವ ಹೇಳು
ದೇವನೇ ನೀನೇ ಮೊರೆಯ ಕೇಳು
ಹೊತ್ತಿದೆ ಬಾಳಿನ ಕನಸನು ನಡು
ತಲೆಯ ಮೇಲಿಹ ಭಾರವ ನೋಡು
ಸವೆಯುತಿಹುದು ಕಾಲಿನ ಜೋಡು
ಆಸರೆಯ ಸೂರಿಗಾಗಿ ಹುಡುಕಾಟ
ಕಾಯಕವ ಹುಡುಕಿ ಅಲೆದಾಟ
ನಿತ್ಯವೂ ದೊರೆಯುವುದು ಪಾಠ
ಕೊನಯಾಗದ ಬದುಕ ಪರದಾಟ
ಕೇಳುವರಿಲ್ಲ ಒಂಟಿ ಹೆಣ್ಣಿನ ಬವಣೆ
ಹೊರಲೇ ಬೇಕು ಜೀವನದ ಹೊಣೆ
ವಿಧಿಗೆ ಇಲ್ಲವೂ ಸ್ವಲ್ಪವೂ ಕರುಣೆ
ಪ್ರತಿಷ್ಠೆ, ಹಣ ಇರುವವರಿಗಿಲ್ಲಿ ಮಣೆ
ಬವಣೆಯಲೆ ಕಳೆಯುತಿದೆ ಬಾಳು
ಜೀವನದಲಿ ತುಂಬಿಹದು ಗೋಳು
ದೀನಬಂಧು ಪರಿಹಾರವ ಹೇಳು
ದೇವನೇ ನೀನೇ ಮೊರೆಯ ಕೇಳು
ಗುರುವಾರ, ನವೆಂಬರ್ 19, 2020
ಬಣ್ಣದ ಬದುಕು
ಇದು ಬಣ್ಣದ ಬದುಕು
ಕೇವಲ ಸುಖವ ಹುಡುಕು
ಆಚರಣೆಗಳೆಲ್ಲ ಕೆಡುಕು
ಬರೀ ಥಳುಕು ಬಳುಕು
ಕಷ್ಟ ಪಡುವವರಿಲ್ಲ ಯಾರೂ
ಸುಖ ಬಯಸುವರು ಎಲ್ಲರೂ
ನಗರವ ಸೇರಿದರು ಜನರು
ಮಾನವೀಯನು ಮರೆತರು
ಹಣದ ಹಿಂದಾಯಿತು ಓಟ
ಮರೆತರು ದಿನದ ಊಟ
ಮರೆಯಿತು ಸಂಬಂಧದ ಪಾಠ
ಜೀವವಾಯಿತು ರೋಗದ ಕೂಟ
ಇದು ಬರೀ ಆಧುನಿಕ ಜೀವನ
ಅಭ್ಯಾಸಗಳೆಲ್ಲ ನವನವೀನ
ಹಳ್ಳಿಯ ಇದು ಕೇವಲ ಕಥನ
ಮೋಜು ಮಸ್ತಿ ಬದುಕ ವಿಧಾನ
ಹೆತ್ತವರಿಗಾಯಿತು ಅನಾಥಾಲಯ
ಕೇವಲ ಪದಗಳಾದವು ನಯವಿನಯ
ಇಲ್ಲದಾಯಿತು ನಂಬಿಕೆಯ ಭಯ
ಮರೆತಾಯಿತು ಕರುಣೆ, ದಯ
ಕೇವಲ ಸುಖವ ಹುಡುಕು
ಆಚರಣೆಗಳೆಲ್ಲ ಕೆಡುಕು
ಬರೀ ಥಳುಕು ಬಳುಕು
ಕಷ್ಟ ಪಡುವವರಿಲ್ಲ ಯಾರೂ
ಸುಖ ಬಯಸುವರು ಎಲ್ಲರೂ
ನಗರವ ಸೇರಿದರು ಜನರು
ಮಾನವೀಯನು ಮರೆತರು
ಹಣದ ಹಿಂದಾಯಿತು ಓಟ
ಮರೆತರು ದಿನದ ಊಟ
ಮರೆಯಿತು ಸಂಬಂಧದ ಪಾಠ
ಜೀವವಾಯಿತು ರೋಗದ ಕೂಟ
ಇದು ಬರೀ ಆಧುನಿಕ ಜೀವನ
ಅಭ್ಯಾಸಗಳೆಲ್ಲ ನವನವೀನ
ಹಳ್ಳಿಯ ಇದು ಕೇವಲ ಕಥನ
ಮೋಜು ಮಸ್ತಿ ಬದುಕ ವಿಧಾನ
ಹೆತ್ತವರಿಗಾಯಿತು ಅನಾಥಾಲಯ
ಕೇವಲ ಪದಗಳಾದವು ನಯವಿನಯ
ಇಲ್ಲದಾಯಿತು ನಂಬಿಕೆಯ ಭಯ
ಮರೆತಾಯಿತು ಕರುಣೆ, ದಯ
ರವಿ ಬೆಳಗೆರೆ
ಜನ್ಮವು ಬಳ್ಳಾರಿ ಸತ್ಯನಾರಾಯಣ ಪೇಟೆಯು
ಕೈಬೀಸಿ ಕರೆಯಿತು ಅಧ್ಯಾಪಕ ವೃತ್ತಿಯು
ನಟನೆ, ನಿರೂಪಣೆ, ಬರವಣಿಗೆ ಪ್ರವೃತ್ತಿಯು
ಮಂತ್ರಮುಗ್ಧವಾಗಿಸಿತು ಇವರ ಬರವಣಿಗೆಯು
ಬರಹ ಲೋಕದ ಮಹಾ ಮಾಂತ್ರಿಕ
ಕಂಚಿನ ಕಂಠದ ಅದ್ಭುತ ನಿರೂಪಕ
ಪಾಕ್ಷಿಕ, ಮಾಸಿಕ ಪತ್ರಿಕೆಯ ಸಂಪಾದಕ
ಪ್ರಾರ್ಥನಾ ವಿದ್ಯಾ ಸಂಸ್ಥೆಯ ಸಂಸ್ಥಾಪಕ
ಯುವ ಮನಸುಗಳಿಗೆ ಬರವಣಿಗೆಯ
ಗೀಳು ಹಿಡಿಸಿದ ಮಹಾ ಜಾದೂಗಾರ
ಜ್ಞಾನ ದೀಪವ ಹೊತ್ತಿಸಿದ ದೈವ ನೀ
ಪ್ರತೀ ಅಕ್ಷರಕೂ ಜೀವ ತುಂಬಿದ ಕಥೆಗಾರ
ಹೇಳಿ ಹೋಗು ಕಾರಣ ಎನ್ನುತಲಿ
ಹೇಳದೆ ಹೋದೆ ಬಾರದ ಲೋಕಕೆ
ಯಾರು ಹೇಳುವರು ಇನ್ನು ಸಾಂತ್ವನ
ನೋವು-ದುಃಖ ತುಂಬಿದ ಮನಕೆ
ಭಾವುಕತೆ, ಧೈರ್ಯದಲಿ ಮೀರಿಸುವರಿಲ್ಲ
ಬರಹವಣಿಗೆ ಲೋಕವೇ ಅನಾಥವಾಯ್ತಲ್ಲ
ಕಂಚಿನ ಕಂಠದಾ ಅಬ್ಬರವು ಇನ್ನಿಲ್ಲ
ಅಕ್ಷರ ಮಾಂತ್ರಿಕನ ಬದುಕು ಮುಗಿಯಿತಲ್ಲ
ಅಕ್ಷರ ದೀಪ
ನಮ್ಮ ಹೆಮ್ಮೆಯ ವೇದಿಕೆ ಅಕ್ಷರ ದೀಪ
ಹಚ್ಚುವ ನಾವು ಇಲ್ಲಿ ಅಕ್ಷರಗಳ ದೀಪ
ಸಾಹಿತ್ಯಕೆ ಕೊಡುವುದು ಹೊಸ ರೂಪ
ಕವಿ ಮನಸುಗಳಿಗಿದುವೇ ನಂದಾದೀಪ
ಅಕ್ಷರದ ದೀಪ ಹಚ್ಚಲು ವೇದಿಕೆ ಇದುವು
ಸೃಜನಶೀಲತೆಗೆ ಇದು ಆಗಿಹುದು ಒಡಲು
ಉತ್ತಮ ಸ್ಪರ್ಧೆಯ ವಿಧಗಳು ಹತ್ತು ಹಲವು
ಸಾಹಿತ್ಯ ಜ್ಞಾನವನು ಹೊತ್ತು ತರುವ ಕಡಲು
ನಮ್ಮ ವೇದಿಕೆಯೆಂಬ ಹೆಮ್ಮೆ ನಮಗೆ
ನಿರಂತರವೂ ಸಾಹಿತ್ಯದ ಬೆಳವಣಿಗೆ
ಕೀರ್ತಿ ಹರಡಲಿ ಜಗದ ತುದಿಯವರೆಗೆ
ದಿನವೂ ಕನ್ನಡ ಸಾಹಿತ್ಯದ ಮೆರವಣಿಗೆ
ಪ್ರತಿಭೆಗಳಿಗೆ ದೊರೆಹುದು ಇಲ್ಲಿ ಪುರಸ್ಕಾರ
ಇದುವು ಕವಿ ಹೃದಯಗಳ ಭಾವದ ಸಾಗರ
ಸೃಜನಶೀಲ ವಿಚಾರಗಳ ಸುಂದರ ಹಂದರ
ಕವಿ ಮನಗಳಿಗಿದು ಅವಕಾಶಗಳ ಆಗರ
ಬುಧವಾರ, ನವೆಂಬರ್ 18, 2020
ಮಕ್ಕಳು
ಮಕ್ಕಳು
ಮಕ್ಕಳ ಮನವಿದು ಹೂವಿನಂತೆ
ಮಗ್ಧತೆಯ ಪ್ರತಿ ರೂಪದಂತೆ
ನಿಷ್ಕಲ್ಮಷತೆ ತುಂಬಿದ ಹೃದಯ
ಆ ನಗುವಿನಲೇ ಜಗ ತನ್ಮಯ
ಮನೆಯೇ ಮೊದಲ ಪಾಠಶಾಲೆ
ಜನನಿಯೇ ಮೊದಲ ಗುರುವು
ಹಾಕಬೇಕು ಭದ್ರ ಬುನಾದಿ ನೆಲೆ
ಮೌಲ್ಯಗಳೇ ಬಾಳಿಗೆ ಬಲವು
ಉತ್ತಮ ಆಹಾರವ ಒದಗಿಸಿ
ವಿದ್ಯೆ ನೀಡಿ ಬಾಳನು ಬೆಳಗಿಸಿ
ಬೇಕು ಬೇಡಗಳನು ಪೂರೈಸಿ
ಉಜ್ವಲ ಭವಿಷ್ಯಕೆ ಹಾರೈಸಿ
ಕೆಲಸವು ಬೇಡವು ಬಾಲ್ಯದಲಿ
ಬೆಳೆಯುವ ಸಿರಿ ಮೊಳಕೆಯಲಿ
ಉತ್ತಮ ಶಿಕ್ಷಣವು ದೊರೆಯಲಿ
ಸಂಸ್ಕಾರ ಸಂಸ್ಕೃತಿಯೂ ಇರಲಿ
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು
ನಮ್ಮ ಸಮಾಜದ ನಂದಾದೀಪಗಳು
ಹೆತ್ತವರಿಗೆ ಇವರೇ ಎಂದೂ ಕಣ್ಣುಗಳು
ನಮ್ಮ ಬದುಕಿನ ಹೊಸ ಕನಸುಗಳು
ಮಕ್ಕಳ ಮನವಿದು ಹೂವಿನಂತೆ
ಮಗ್ಧತೆಯ ಪ್ರತಿ ರೂಪದಂತೆ
ನಿಷ್ಕಲ್ಮಷತೆ ತುಂಬಿದ ಹೃದಯ
ಆ ನಗುವಿನಲೇ ಜಗ ತನ್ಮಯ
ಮನೆಯೇ ಮೊದಲ ಪಾಠಶಾಲೆ
ಜನನಿಯೇ ಮೊದಲ ಗುರುವು
ಹಾಕಬೇಕು ಭದ್ರ ಬುನಾದಿ ನೆಲೆ
ಮೌಲ್ಯಗಳೇ ಬಾಳಿಗೆ ಬಲವು
ಉತ್ತಮ ಆಹಾರವ ಒದಗಿಸಿ
ವಿದ್ಯೆ ನೀಡಿ ಬಾಳನು ಬೆಳಗಿಸಿ
ಬೇಕು ಬೇಡಗಳನು ಪೂರೈಸಿ
ಉಜ್ವಲ ಭವಿಷ್ಯಕೆ ಹಾರೈಸಿ
ಕೆಲಸವು ಬೇಡವು ಬಾಲ್ಯದಲಿ
ಬೆಳೆಯುವ ಸಿರಿ ಮೊಳಕೆಯಲಿ
ಉತ್ತಮ ಶಿಕ್ಷಣವು ದೊರೆಯಲಿ
ಸಂಸ್ಕಾರ ಸಂಸ್ಕೃತಿಯೂ ಇರಲಿ
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು
ನಮ್ಮ ಸಮಾಜದ ನಂದಾದೀಪಗಳು
ಹೆತ್ತವರಿಗೆ ಇವರೇ ಎಂದೂ ಕಣ್ಣುಗಳು
ನಮ್ಮ ಬದುಕಿನ ಹೊಸ ಕನಸುಗಳು
ಮನದನ್ನೆ
ಮನೋಹರಿ ನನ್ನ ಮನದನ್ನೆ
ಮುಡಿಪಾಗಿಡುವೆ ಬದುಕನ್ನೆ
ಸುರಿವೆ ಪ್ರೀತಿಯ ಧಾರಯನ್ನೆ
ಗಣದಲಿ ಸುಗುಣೆ ಸಂಪನ್ನೆ
ಮನವ ಕದ್ದ ಕೋಮಲ ಹರಿಣಿ
ನೀನೆ ನನ್ನ ಮನೆಯ ಮಹರಾಣಿ
ಆಗಿರುವೆ ಸೌಂದರ್ಯದ ಕಣಿ
ಮೃದುಭಾಷಿ ನನ್ನ ಅರಗಿಣಿ
ಭಾವ ತರಂಗದ ಗುಪ್ತಗಾಮಿನಿ
ನನ್ನ ಉಸಿರಾಗಿಹ ಮಾನಿನಿ
ನಡಿಗೆಯಲಿ ಇವಳು ಹಂಸಿನಿ
ಚತುರೆ ಸುಜ್ಞಾನದ ವಾಹಿನಿ
ಪಾಕಶಾಸ್ತ್ರದಲಿ ಪ್ರವೀಣೆಯು
ಕಲೆ ಸಾಹಿತ್ಯದಲಿ ಇಲ್ಲ ಸಾಟಿಯು
ಇವಳೇ ನಾಟ್ಯ ಮಯೂರಿಯು
ನನ್ನ ಬಾಳಿನ ಕಾವ್ಯ ಕನ್ನಿಕೆಯು
ಕರುನಾಡು
ನಮ್ಮದಿದು ನಮ್ಮದಿದು ಚೆಲುವ ಕನ್ನಡ ನಾಡು
ಶಿಲ್ಪಕಲೆ ಸಂಸ್ಕೃತಿಯ ವೈಭವದ ಸಿರಿನಾಡು
ಹಸಿರ ಸಿರಿ ಮೈತಳೆದ ಸೊಬಗಿನ ಕರುನಾಡು
ತೆಂಗು-ಕಂಗು, ಭತ್ತ-ರಾಗಿ ಬೆಳೆಯುವ ನಾಡು
ಸಾಹಿತ್ಯ ಸಿರಿಯಲೂ ಮೇರು ಆಗಿಹ ನಾಡು
ಕೃಷ್ಣೆ ಕಾವೇರಿ ಶರಾವತಿ ತುಂಗೆಯರ ನೆಲೆವೀಡು
ಸಹ್ಯಾದ್ರಿಯ ಸಾಲು ಮೈತಳೆದ ಕರುನಾಡು
ಕೆಚ್ಚೆದೆಯ ವೀರರಿಗೆ ಜನುಮ ನೀಡಿದ ಗೂಡು
ಜಕ್ಕಣ-ಡಂಕಣನ ಶಿಲ್ಪಕಲೆಗೆ ಹೆಸರಾದ ನಾಡು
ಪಂಪ ಕುಮಾರ ರಾಘವರುದಿಸಿದ ತಾಯ್ನಾಡು
ಕಸ್ತೂರಿ ಕನ್ನಡದ ಕಂಪು ಹರಡಿಹ ನಾಡು
ಕುವೆಂಪು ಬೇಂದ್ರೆ ಮಾಸ್ತಿಯರ ತಾಯ್ನಾಡು
ತಾಯಿ ಭುವನೇಶ್ವರಿಯು ನೆಲೆಸಿಹ ಸಿರಿನಾಡು
ಶಿಲ್ಪಕಲೆಗೆ ಹೆಸರಾದ ದೇವಾಲಯಗಳ ಗೂಡು
ಬೆಲೆ ಬಾಳುವ ಚಿನ್ನ ದೊರೆಯುವ ನಾಡು
ಋಷಿಗಳಾ ಕವಿಗಳಾ ವೀರ-ಶೂರರಾ ತಾಯ್ನಾಡು
ಹುಲಿ ಸಿಂಹ ಆನೆ ನವಿಲು ಸಾರಂಗದ ನೆಲೆವೀಡು
ತೇಗ ಗಂಧ ಆಲ ಬೇಲಗಳ ಹಸಿರು ಸಿರಿಯ ನಾಡು
ವಿಶ್ವ ವಿಖ್ಯಾತ ಜೋಗ ಜಲಪಾತದ ಸೊಬಗ ನಾಡು
ಕಲ್ಲುಕಲ್ಲಿನಲೂ ವೈಭವವ ಹೊತ್ತ ಪುಣ್ಯದ ನಾಡು
ದೀಪಾವಳಿ
ಹೊಸ ಮನ್ವಂತರಕೆ ನಾಂದಿಯಾಗಲಿ ದೀಪ
ಕೊಳಯನೆಲ್ಲ ಸುಡಲಿ ಹಚ್ಚಿದ ದೀಪದ ತಾಪ
ಕೊನೆಯಾಗಲಿ ಜಗಕೆ ಅಂಟಿರುವ ಶಾಪ
ಮನೆ-ಮನಕೆ ಚೈತನ್ಯವ ತುಂಬಲಿ ದೀಪ
ಸಾಲು ಸಾಲಿನಲಿ ಹಚ್ಚುವ ನಾವು ಪ್ರಣತಿ
ಮರೆಯುವ ಎಲ್ಲ ಕಹಿ ನೋವಿನ ಸಂಗತಿ
ನಮ್ಮಯ ಗುರಿಯಾಗಲಿ ಕೇವಲ ಪ್ರಗತಿ
ನಿರತವೂ ಗೆಲುವಾಗಲಿ ನಮ್ಮಯ ಅತಿಥಿ
ಸಾಗುವ ಕತ್ತಲೆಯಿಂದ ಬೆಳಕಿನೆಡೆಗೆ
ಹೋಗುವ ಅಜ್ಞಾನದಿಂದ ಜ್ಞಾನದೆಡೆಗೆ
ದ್ವೇಷ ರೋಷ ಮರೆತು ಪ್ರೀತಿಯೆಡೆಗೆ
ಹರುಷವಾಗಲಿ ಈ ಹಬ್ಬದ ಕೊಡುಗೆ
ದೀಪದಿಂದ ದೀಪವ ಹಚ್ಚುವ ದೀಪಾವಳಿ
ಅಂಧಕಾರವು ಸರಿದು ಜ್ಞಾನ ನೆಲೆಯಾಗಲಿ
ಜೀವನವು ಸ್ಪೂರ್ತಿಯ ಸೆಲೆಯಾಗಲಿ
ದೈವದ ಹರಕೆಯು ನಮ್ಮ ಬಲವಾಗಲಿ
ಶುಕ್ರವಾರ, ನವೆಂಬರ್ 6, 2020
ಮೈಸೂರು ದಸರಾ
ದುರ್ಗೆಯಿಂದ ಮಹಿಷಾಸುರನ ಸಂಹಾರ
ಈ ದೇವಿಯ ಪೂಜಿಸುವ ಉತ್ಸವ ದಸರ
ವಿಧ ವಿಧವಾದ ಕಲಾ ವೈಭವದ ಹಂದರ
ನೋಡಲು ಬಲು ಆಕರ್ಷಕ, ಸುಂದರ
ನವ ಅವತಾರದಿ ದುರ್ಗೆಯು ಬರುವಳು
ನವ ವಿಧದ ಪೂಜೆಯ ಸ್ವೀಕರಿಸುವಳು
ಮಹಿಷಾಸುರಮರ್ದಿನಿ ಚಾಮುಂಡಿ ಇವಳು
ಲೋಕವ ಕಾಯುವ ದೇವತೆಯಾಗಿಹಳು
ಮೈಸೂರಿನಲಿ ಆನೆಯ ಮೇಲೆ ಅಂಬಾರಿ
ಗಾಂಭೀರ್ಯದಲಿ ಜಂಬೂ ಸವಾರಿ
ರಾಜಮನೆತನದವರ ಉಸ್ತುವಾರಿ
ಜನ ಸೇರುವರು ದಸರೆಗೆ ಮಿತಿಮೀರಿ
ಕಣ್ಮನ ಸೆಳೆಯುವ ದೀಪಾಲಂಕಾರವು
ಸಾಂಸ್ಕೃತಿಕ ಕಲೆಗಳಿಗಿದುವೇ ತಾಣವು
ದೇಶ-ವಿದೇಶದಲೂ ದಸರಾ ಪ್ರಸಿದ್ಧವು
ಕರ್ನಾಟಕದ ವೈಭವದ ನಾಡಹಬ್ಬವು
ಚಾಮುಂಡಿಬೆಟ್ಟದಲಿ ವಿಶೇಷ ಪೂಜೆಯು
ವೈಭವದಲಿ ತೇಲುವ ಅರಮನೆಯು
ಕಣ್ಮನವ ಸೆಳೆಯುವ ಹಬ್ಬ ದಸರೆಯು
ಇರಲಿ ಎಲ್ಲರ ಮೇಲೆ ದೇವಿಯ ಕೃಪೆಯು
ಕನ್ನಡ ಸೇವೆ
ಗೂಡು ಬಿಟ್ಟ ಹಕ್ಕಿಗಳು ನಾವು
ಗಡಿನಾಡ ಕನ್ನಡಿಗರು ನಾವು
ಕರುನಾಡು ನಮ್ಮ ತಾಯಿನಾಡು
ನಮ್ಮ ತಾಯಿನುಡಿ ಕನ್ನಡವು
ಕನ್ನಡಕೆಂದು ಚಿರಋಣಿಯು
ಗೈಯುವೆ ಸಾಹಿತ್ಯ ಸೇವೆಯನು
ಕನ್ನಡವೇ ನನ್ನುಸಿರು ನಿತ್ಯಹಸಿರು
ಕನ್ನಡ ಭಾಷೆ ಎನಗೆ ಕಾಮಧೇನು
ಲಿಪಿಗಳ ರಾಣಿ ಕನ್ನಡ ಭಾಷೆಗೆ
ಹೃದಯಾಂತರಾಳದಾ ನಮನವು
ಅಭಿಜಾತ ಭಾಷೆ ಎಂಬ ಗೌರವವು
ಕನ್ನಡ ಮಾತನಾಡುವ ಅನುದಿನವು
ಕನ್ನಡವನೇ ನುಡಿವೆ ಕೊನೆವರೆಗೆ
ಕನ್ನಡದಲೇ ನನ್ನಯ ಬರವಣಿಗೆ
ಕನ್ನಡವೇ ಭಾವದುಸಿರು ಎನಗೆ
ಕನ್ನಡಕಾಗಿ ಬದುಕು ಕೊನೆವರೆಗೆ
ಸಮಯದ ಮಹತ್ವ
ಮುತ್ತಿಗಿಂತ ಹೊತ್ತು ಉತ್ತಮ
ಅರಿತರೆ ಜೀವನ ಸುಗಮ
ಕೂತು ಕಳೆಯಬೇಡ ಹೊತ್ತು
ಬರುವುದು ದೊಡ್ಡ ವಿಪತ್ತು...
ಕಳೆಯ ಸಮಯ ಬರದು
ತಿರುಗಿ ಮತ್ತೆ ಎಂದೆಂದೂ
ಹಣಕೆ ಸಿಗುವುದು ಮುತ್ತು
ಹಣಕೂ ಸಿಗದ ವಸ್ತು ಹೊತ್ತು...
ಮೂರೇ ದಿನ ಜೀವನವು
ಪ್ರತಿ ಕ್ಷಣವೂ ಅಮೂಲ್ಯವು
ಇರುವ ಸಮಯ ಬಳಸಿ
ನಡೆವ ಗುರಿಯ ಅರಸಿ...
ಸದ್ಭಳಕೆ ಮಾಡುವ ಸಮಯ
ಸಮಯ ತೋರದು ದಯ
ಹೊತ್ತಿಗಿದೆ ಅದರದೇ ಹಿರಿಮೆ
ತಿಳಿದವರಾರು ಮಹಿಮೆ
ಸಂವಿಧಾನ ಶಿಲ್ಪಿ
ಮಹಾರಾಷ್ಟ್ರದ ರತ್ನಾಗಿರಿಯಲಿ ಭೀಮನ ಜನನ
ಬಾಲ್ಯದಲೇ ತಾಯಿ ಭೀಮಾಬಾಯಿಯ ನಿಧನ
ಅತ್ತೆ ಮೀರಾಳ ಜೊತೆ ಬಡತನದಲೇ ಜೀವನ
ಇವರು ಅಸ್ಪೃಶ್ಯತೆಯ ವಿರುದ್ಧ ಸಾರಿದರು ಕದನ
ಪಡೆದರು ಅರ್ಥಶಾಸ್ತ್ರ, ರಾಜನೀತಿಯ ಪದವಿಯನು
ವಿದೇಶದಲಿ ಸಂಪಾದಿಸಿದರು ವಕೀಲಿ ವೃತ್ತಿಯನು
ಪಡೆದರು ಪರಿಶ್ರಮದಿ ಡಾಕ್ಟರೇಟ್ ಪದವಿಯನು
ಸ್ಥಾಪಿಸಿದರು ದಲಿತ ವರ್ಗದ ಕಲ್ಯಾಣ ಸಂಸ್ಥೆಯನು
ನೀಡಿದರು ಮನುಸ್ಮೃತಿ ಚಳುವಳಿಗೆ ಚಾಲನೆ
ಮಾಡಿದರು ಸಮಾನತೆಯ ಹಕ್ಕಿನ ಪ್ರತಿಪಾದನೆ
ಹೂಡಿದರು ಜಾತಿಪದ್ಧತಿಯ ವಿರುದ್ಧ ಪ್ರತಿಭಟನೆ
ಯಶಸ್ವಿಯಾಗಿ ಮಾಡಿದರು ಕಾರ್ಯಸಾಧನೆ
ಇವರು ಭಾರತದ ಮಹಾನ್ ಸಂವಿಧಾನ ಶಿಲ್ಪಿಯು
ಅಪಾರ ಜ್ಞಾನದ ಕಡಲು ಈ ಪುಸ್ತಕ ಪ್ರೇಮಿಯು
ಕೊನಯಲಿ ಶಾಂತಿಗಾಗಿ ಬೌದ್ಧ ಧರ್ಮಿಯಾದರು
ಇವರಿಗೆ ಭಾರತರತ್ನವನು ನೀಡಿ ಗೌರವಿಸಿದರು
ಮಹಾ ಮಾನವತಾವಾದಿ
ಭೀಮಾಬಾಯಿ ರಾಮಜೀಯ
ಸುತನು ಈ ಭೀಮನು
ಮಹಾರಾಷ್ಟ್ರ ರತ್ನಾಗಿರಿಯಲಿ
ಇವನು ಜನಿಸಿದನು
ಅಸ್ಪೃಶ್ಯತೆ ಬಡತನದಲೇ
ಬಾಲ್ಯವನು ಕಳೆದನು
ಎಂದಿಗೂ ಮೊದಲಿಗನು
ವಿದ್ಯೆಯಲಿ ಇವನು
ಅರ್ಥಶಾಸ್ತ್ರ ನ್ಯಾಯಶಾಸ್ತ್ರದಿ
ಪದವಿಯನು ಪಡೆದರು
ವಿದೇಶದಲಿ ಕಾನೂನು
ಅಭ್ಯಾಸವನು ಮಾಡಿದರು
ಭಾರತದ ಸಂವಿಧಾನದ
ಶಿಲ್ಪಿಯು ಇವರಾದರು
ಅಸ್ಪೃಶ್ಯತೆಯ ವಿರುದ್ಧ
ಸಮರವನು ಸಾರಿದರು
ಮಹಾ ಮಾನವತಾವಾದಿ
ಪುಸ್ತಕಗಳ ಪ್ರೇಮಿಯು
ಭಾರತರತ್ನ ಪುರಸ್ಕೃತರು
ಬುದ್ಧನ ಅನುಯಾಯಿಯು
ವೀರ ವನಿತೆ ಓಬವ್ವ
ಗಂಡುಮೆಟ್ಟಿದ ನಾಡು ಚಿತ್ರದುರ್ಗವು
ಅಲ್ಲಿಹ ಬಲಿಷ್ಠ ಕಲ್ಲಿನ ಕೋಟೆಯು
ವೀರ ಮದಕರಿ ನಾಯಕನು ಆಳಿದ
ಹಸಿರ ನಡುವಿನ ಉಕ್ಕಿನ ಕೋಟೆಯು
ಕೋಟೆಯ ಕಾವಲಿಗೆ ಇರುವನು
ಶೂರನಾದ ಮದ್ದ ಹನುಮಪ್ಪನು
ಇವನು ಊಟಕೆ ಮನೆಗೆ ಬಂದನು
ಇವನ ಹೆಂಡತಿಯು ಓಬವ್ವನು
ಮನೆಯಲಿ ನೀರು ಮುಗಿದಿರಲು
ಓಬವ್ವ ನೀರಿಗಾಗಿ ಹೊರಟಳು
ಆಗಲೇ ಕಳ್ಳ ಗಿಂಡಿಯಲಿ ಸೈನಿಕರು
ನುಗ್ಗುವದನು ಅವಳು ನೋಡಿದಳು
ಒನಕೆ ಹಿಡಿದು ಅಲ್ಲಿಗೆ ನಡೆದಳು
ಒನಕೆಯಲಿ ತಲೆಯ ಜಜ್ಜಿ ಒಡೆದಳು
ಹೆಣಗಳ ಎಳೆದು ಬೀಸಾಡಿದಳು
ಹೈದರನ ಸೈನ್ಯವನು ಬಗ್ಗು ಬಡಿದಳು
ಊಟ ಮುಗಿಸಿ ಬಂದ ಕಾವಲುಗಾರನು
ರಕ್ತಸಿಕ್ತ ಹೆಂಡತಿಯ ನೋಡಿ ದಂಗಾದನು
ಕೊಡಲೇ ಕಹಳೆಯನು ಊದಿದನು
ಶತ್ರುಗಳ ಮಣಿಸಿ ಗಳಿಸಿದರು ಜಯವನು
ಇತಿಹಾಸದಿ ಹೆಸರಾದಳು ಒನಕೆ ಓಬವ್ವ
ಕರ್ನಾಟಕದ ವೀರ ವನಿತೆ ಓಬವ್ವಳು
ಶೌರ್ಯಕೆ ಮನೆ ಮಾತಾದಳು ನಮ್ಮವ್ವ
ಒನಕೆ ಓಬವ್ವನ ಕಿಂಡಿಗೆ ಹಚ್ಚ ಹಸಿರಾದಳು
ಕಸ್ತೂರಿ ಕನ್ನಡ
ಕಸ್ತೂರಿ ಕನ್ನಡವು ನಮ್ಮ ನುಡಿಯು
ಅಭಿಜಾತ ಭಾಷೆ ಎಂಬ ಹೆಮ್ಮೆಯು
ಆಗಿಹುದು ಇದು ಲಿಪಿಗಳ ರಾಣಿಯು
ಕರುನಾಡು ನಮ್ಮ ತಾಯಿ ಗುಡಿಯು
ಎನಿತು ನಮ್ಮ ನುಡಿಯು ಸೊಗವು
ಅತೀ ಮಧುರ ಕನ್ನಡ ಸ್ವರಾಕ್ಷರವು
ಕೋಗಿಲೆಯ ನದಿಯಂತೆ ಇಂಪು
ನಮ್ಮ ನುಡಿಯೇ ನಮ್ಮ ಬಲವು
ಬ್ರಾಹ್ಮಿ ಲಿಪಿಯಿಂದ ಉಗಮ ಕನ್ನಡವು
ಸಾವಿರದ ಐನೂರು ವರ್ಷದ ಇತಿಹಾಸವು
ಹಲ್ಮಿಡಿ ಕನ್ನಡದ ಮೊದಲ ಶಾಸನವು
ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿಹವು
ಪಂಪ ಕುಮಾರವ್ಯಾಸರ ಕವಿಗಳ ಹಿರಿಮೆ
ಕುವೆಂಪು ಮಾಸ್ತಿ ಸಾಹಿತ್ಯದ ಗರಿಮೆ
ನವ ವಿಧದ ಸಾಹಿತ್ಯಕಿದು ಒಲುಮೆ
ಸಿರಿಗನ್ನಡವು ನಮ್ಮ ಭಾಷೆಯೆಂಬ ಹೆಮ್ಮೆ
ಆಧುನಿಕ ಜೀವನ
ಕೋಟಿ ರೂಪಾಯಿ ಕಾಂಕ್ರೀಟು
ಮನೆಗೆ ಒಡೆಯನು ನಾನು
ತುಂಬಿಹುದು ಬಗೆ ಬಗೆಯ
ಕಾರು, ಎಸಿ, ಸೋಫಾ, ಫ್ಯಾನು
ದುಬಾರಿ ಬೆಲೆಗೆ ಸಿಗುವುದು
ರಾಸಾಯನಿಕ ಮಿಶ್ರಿತ ನೀರು
ಗಾಳಿಯಲೂ ತುಂಬಿಹುದು
ಕಷ್ಮಲ ಶುದ್ಧವಿಲ್ಲವೂ ಚೂರು
ಆಧುನಿಕತೆಯ ಭರದಲಿ
ನಾಶವಾಗಿದೆ ಹಸಿರು
ಜನಜಂಗುಳಿಯ ನಗರ
ಕಲುಷಿತತೆಯ ತವರು
ಜೀವನವು ಆಗಿದೆ ಸರಳ
ಕವಲೊಡೆದ ದಾರಿ
ಬೆರಳ ತುದಿಯಲೇ ಬೇಕೆಲ್ಲ
ಜನರಾಗಿಹರು ಸೋಮಾರಿ
ಮನೆ ಕೆಳಗಿಳಿದರೆ
ಸಿಗುವುದು ಎಲ್ಲ
ಏನು ಮಾಡುವುದು
ನೆಮ್ಮದಿಯೇ ಇಲ್ಲ
ಗುರುವಾರ, ನವೆಂಬರ್ 5, 2020
ಕನ್ನಡ ನಾಡು
ಕಸ್ತೂರಿ ಕನ್ನಡವು ನಮ್ಮ ಭಾಷೆಯೆಂಬ ಹಿರಿಮೆ
ಕರುನಾಡು ನಮ್ಮ ತಾಯ್ನಾಡು ಎಂಬ ಗರಿಮೆ
ವಿವಿಧತೆಯಲಿ ಏಕತೆಯ ಸಾರುವ ನಾಡು
ಶ್ರೀಗಂಧ-ತೇಗ, ಖಗ-ಮೃಗಗಳ ಬೀಡು
ಸಪ್ತ ಜ್ಞಾನಪೀಠ ಕವಿಗಳಿಗಿದು ತಾಯ್ನಾಡು
ಪಂಪ ಕುಮಾರವ್ಯಾಸ ಉದಿಸಿಹ ನಾಡು
ತಾಯಿ ಕಾವೇರಿ ಉಗಮವಾದ ಪುಣ್ಯನಾಡು
ಕಾಮಧೇನು ಕಲ್ಪವೃಕ್ಷ ತುಂಬಿರುವ ನಾಡು
ಶಿಲೆ ಶಿಲೆಯಲೂ ಶಿಲ್ಪಕಲೆ ಅರಳಿದ ನಾಡು
ಗಂಗ-ಕದಂಬರಾಳಿದಂತ ವೈಭವದ ಗೂಡು
ಜೋಗ ಜಲಪಾತ ಧುಮ್ಮಿಕ್ಕಿದ ಸಿರಿನಾಡು
ವಿಶ್ವ ವಿಖ್ಯಾತ ಹಂಪಿ, ಬಾದಾಮಿಯ ನಾಡು
ಮೈಸೂರು ಅರಮನೆ, ಬೃಂದಾವನದ ನಾಡು
ಸಂಸ್ಕೃತಿ-ಸಂಸ್ಕಾರಗಳಿಗೆ ಇದುವೇ ಗೂಡು
ಕರುನಾಡು ನಮ್ಮ ತಾಯ್ನಾಡು ಎಂಬ ಗರಿಮೆ
ವಿವಿಧತೆಯಲಿ ಏಕತೆಯ ಸಾರುವ ನಾಡು
ಶ್ರೀಗಂಧ-ತೇಗ, ಖಗ-ಮೃಗಗಳ ಬೀಡು
ಸಪ್ತ ಜ್ಞಾನಪೀಠ ಕವಿಗಳಿಗಿದು ತಾಯ್ನಾಡು
ಪಂಪ ಕುಮಾರವ್ಯಾಸ ಉದಿಸಿಹ ನಾಡು
ತಾಯಿ ಕಾವೇರಿ ಉಗಮವಾದ ಪುಣ್ಯನಾಡು
ಕಾಮಧೇನು ಕಲ್ಪವೃಕ್ಷ ತುಂಬಿರುವ ನಾಡು
ಶಿಲೆ ಶಿಲೆಯಲೂ ಶಿಲ್ಪಕಲೆ ಅರಳಿದ ನಾಡು
ಗಂಗ-ಕದಂಬರಾಳಿದಂತ ವೈಭವದ ಗೂಡು
ಜೋಗ ಜಲಪಾತ ಧುಮ್ಮಿಕ್ಕಿದ ಸಿರಿನಾಡು
ವಿಶ್ವ ವಿಖ್ಯಾತ ಹಂಪಿ, ಬಾದಾಮಿಯ ನಾಡು
ಮೈಸೂರು ಅರಮನೆ, ಬೃಂದಾವನದ ನಾಡು
ಸಂಸ್ಕೃತಿ-ಸಂಸ್ಕಾರಗಳಿಗೆ ಇದುವೇ ಗೂಡು
ಬುಧವಾರ, ನವೆಂಬರ್ 4, 2020
ಕಡಲ ತೀರದ ಭಾರ್ಗವ
ಉಡುಪಿಯ ಕೋಟದ ಶಿವರಾಮ ಕಾರಂತರು
ನಡೆದಾಡುವ ವಿಶ್ವಕೋಶ ಆಗಿದ್ದರು ಇವರು
ಕಡಲ ತೀರದ ಭಾರ್ಗವ ಎಂದು ಪ್ರಸಿದ್ಧರು
ಪದ್ಮಭೂಷಣ ಪಂಪ ಪ್ರಶಸ್ತಿ ಪುರಸ್ಕೃತರು
ಕನ್ನಡ ಸಾಹಿತ್ಯ ಸಂಸ್ಕೃತಿಯ ವಕ್ತಾರ
ಪ್ರಸಿದ್ಧ ಕಾದಂಬರಿಕಾರ, ನಾಟಕಕಾರ
ವೈಜ್ಞಾನಿಕ ಲೇಖನಗಳ ಬರಹಗಾರ
ಜ್ಞಾನಪೀಠ ನಾಡೋಜದ ಪುರಸ್ಕಾರ
ಪರಿಸರ ಪ್ರೇಮಿ, ಹೋರಾಟಗಾರ ಇವರು
ಬಾಲವನದ ಕಾರಂತಜ್ಜ ಎಂದು ಪ್ರಸಿದ್ಧರು
ಸ್ವಾತಂತ್ರ್ಯ ಸಂಗ್ರಾಮದಲೂ ಇದೆ ಹೆಸರು
ವಿಶ್ವಕೋಶ ನಿಘಂಟುಗಳ ರಚನೆಕಾರರು
ಪ್ರಸಿದ್ಧ ಚೋಮನದುಡಿ, ಮೂಕಜ್ಜಿಯ ಕನಸು
ಚಲನಚಿತ್ರವಾಯ್ತು ಕಾದಂಬರಿ ಚಿಗುರಿದ ಕನಸು
ಇವರ ನಾಟಕಗಳು ಆಹಾ ಎಂತಹ ಸೊಗಸು
ಸೊರೆಗೊಂಡರು ಸಾಹಿತ್ಯ ಪ್ರೇಮಿಗಳ ಮನಸು
ಮಂಗಳವಾರ, ಅಕ್ಟೋಬರ್ 6, 2020
ಗುರು
ಚರಣ ಕಮಲಗಳಿಗೆ ವಂದನೆ
ಮಾಡದಿರುವೆ ಎಂದು ನಿಂದನೆ
ಜ್ಞಾನ ನೀಡಿ ನಮ್ಮನು ಕಾವನೆ
ಗುರುವೇ ದೇವನೆಂಬ ಭಾವನೆ
ಜ್ಞಾನ ಜ್ಯೋತಿಯನು ಬೆಳಗಿಸುವ
ಅಂಧಕಾರವ ದೂರ ಓಡಿಸುವ
ಅಕ್ಕರೆಯ ಕೊಡುವ ಗುರುವ
ನೀಡು ನೆನೆಯುವಂತ ಮನವ
ಹೊಮ್ಮಿಸಿ ಸುಜ್ಞಾನದ ಕಿರಣ
ತುಂಬಿಸಿ ಮೌಲ್ಯಗಳ ಸ್ಪುರಣ
ಹರಿಸಿ ನಿನ್ನಯ ಪ್ರೀತಿ ಕರುಣ
ಸ್ಪರ್ಶಮಣಿಯು ನಿನ್ನ ಚರಣ
ಶಿಲೆಯ ಆಗುವುದು ಶ್ರಮದೆ ಶಿಲ್ಪ
ಸಾಧನೆಗೆ ನೀಡುವೆ ಕಾಯಕಲ್ಪ
ಅಮರನಾಗುವನು ನಿನ್ನಿಂದ ಅಲ್ಪ
ನಿನಗಿಲ್ಲ ಬೇಧಭಾವವು ಸ್ವಲ್ಪ
ಸೋಮವಾರ, ಅಕ್ಟೋಬರ್ 5, 2020
ಆಹ್ವಾನ
ಹೆತ್ತ ತಂದೆ-ತಾಯಿಯರ
ಬಂಧನವ ಬಿಡಿಸಿ
ದುರುಳನಾದ ಕಂಸನ
ಸಂಹರಿಸಿದೆ ನೀ ಮುರಳಿ...
ನಿನಗೆ ಮೃತ್ಯುವಾಗಲು
ಬಂದ ರಾಕ್ಷಸಿ ಪೂತನಿಯ
ಮಗುವಾಗಿರುವಾಗಲೇ
ಕೊಂದೆ ನೀ ಶ್ಯಾಮ...
ಕೌರವ ಸಭೆಯಲಿ ದ್ರೌಪದಿಯ
ವಸ್ತ್ರಾಪಹರಣ ತಡೆದು
ಮಾನ ಉಳಿಸಿದ
ಮಹಾನುಭಾವ ನೀ ಕೃಷ್ಣ...
ಧರ್ಮ ರಕ್ಷಣೆಗಾಗಿ ಕರ್ಣನ
ಬಾಣದಿಂದ ಬಹು ಸೂಕ್ಷ್ಮದಿ
ಅರ್ಜುನನ ಪ್ರಾಣವನು
ಉಳಿಸಿದೆ ನೀ ಮಾಧವ..
ಈ ಕಲಿಯುಗದಿ ಮತ್ತೆ
ಅವತರಿಸಿ ಕಾಣದ ವಿಷಾಣುವಿನ
ಅಬ್ಬರವ ನಿಲ್ಲಿಸಿ ಮುಗ್ಧ ಜೀವಗಳ
ಉಳಿಸು ದುಷ್ಟ ಸಂಹಾರಿ ಮೋಹನ..
ಬಂಧನವ ಬಿಡಿಸಿ
ದುರುಳನಾದ ಕಂಸನ
ಸಂಹರಿಸಿದೆ ನೀ ಮುರಳಿ...
ನಿನಗೆ ಮೃತ್ಯುವಾಗಲು
ಬಂದ ರಾಕ್ಷಸಿ ಪೂತನಿಯ
ಮಗುವಾಗಿರುವಾಗಲೇ
ಕೊಂದೆ ನೀ ಶ್ಯಾಮ...
ಕೌರವ ಸಭೆಯಲಿ ದ್ರೌಪದಿಯ
ವಸ್ತ್ರಾಪಹರಣ ತಡೆದು
ಮಾನ ಉಳಿಸಿದ
ಮಹಾನುಭಾವ ನೀ ಕೃಷ್ಣ...
ಧರ್ಮ ರಕ್ಷಣೆಗಾಗಿ ಕರ್ಣನ
ಬಾಣದಿಂದ ಬಹು ಸೂಕ್ಷ್ಮದಿ
ಅರ್ಜುನನ ಪ್ರಾಣವನು
ಉಳಿಸಿದೆ ನೀ ಮಾಧವ..
ಈ ಕಲಿಯುಗದಿ ಮತ್ತೆ
ಅವತರಿಸಿ ಕಾಣದ ವಿಷಾಣುವಿನ
ಅಬ್ಬರವ ನಿಲ್ಲಿಸಿ ಮುಗ್ಧ ಜೀವಗಳ
ಉಳಿಸು ದುಷ್ಟ ಸಂಹಾರಿ ಮೋಹನ..
ಬಂಧಿ
ಕಾದು ಕುಳಿತಿಹೆ ನಾನು
ಆ ಶಬರಿಯಂತೆ
ಮನಕೆ ಮುದ ನೀಡಲು
ಬರುವೆ ನೀನೆಂದೂ...??
ಕಳೆದ ಆ ಮಧುಮಧುರ
ನೆನಪುಗಳಿಗೆ
ಮರು ಜೀವ ನೀಡುವ
ಕ್ಷಣವು ಬರುವುದೆಂದೂ...??
ಪಂಜರದ ಗಿಣಿಯಂತೆ
ಬಂಧಿ ನಾನಿಲ್ಲಿ
ಕಾಡುತಿಹ ಭಯವು
ಕೊನೆಯಾಗುವುದೆಂದೂ...??
ಪಾಂಡವರ ಬೇಗುದಿಗೂ
ಮಿಗಿಲಾದ ಈ
ಅಜ್ಞಾತವಾಸ ನನಗೆ
ಮುಗಿವ ಕ್ಷಣವೆಂದೂ...??
ಆ ಶಬರಿಯಂತೆ
ಮನಕೆ ಮುದ ನೀಡಲು
ಬರುವೆ ನೀನೆಂದೂ...??
ಕಳೆದ ಆ ಮಧುಮಧುರ
ನೆನಪುಗಳಿಗೆ
ಮರು ಜೀವ ನೀಡುವ
ಕ್ಷಣವು ಬರುವುದೆಂದೂ...??
ಪಂಜರದ ಗಿಣಿಯಂತೆ
ಬಂಧಿ ನಾನಿಲ್ಲಿ
ಕಾಡುತಿಹ ಭಯವು
ಕೊನೆಯಾಗುವುದೆಂದೂ...??
ಪಾಂಡವರ ಬೇಗುದಿಗೂ
ಮಿಗಿಲಾದ ಈ
ಅಜ್ಞಾತವಾಸ ನನಗೆ
ಮುಗಿವ ಕ್ಷಣವೆಂದೂ...??
ಸೃಷ್ಟಿಯ ಸೊಬಗು
ದೇವನ ಅವಿಸ್ಮರಣೀಯ ಕಾಣಿಕೆ
ಹಸಿರ ಹಿರಿಯ ಈ ವನಮಾಲಿಕೆ
ಚೆಲುವಿನ ಸಿರಿಗಿಲ್ಲವೂ ಹೋಲಿಕೆ
ಚಿರಯೌವ್ವನದ ಸೊಬಗ ಕನ್ನಿಕೆ
ಪರಮ ಪಾವನವಾದ ಜಲವು
ಸ್ಥಿರತೆ ಸಾರುವ ಕಲ್ಲಿನ ಚೆಲುವು
ಮೆರಗು ನೀಡುತಿಹ ಕ್ಷಿತಿಜವು
ಮೈಮರೆತು ವೀಕ್ಷಿಸುವ ಮನವು
ಕೌತುಕವು ಸೃಷ್ಟಿಯ ವೈಚಿತ್ರ್ಯ
ಭುವಿ-ಭಾನಿನೊಳು ಸಾಮರಸ್ಯ
ಪ್ರಕೃತಿಯಿದು ಪುಣ್ಯ ಪಾವಿತ್ರ್ಯ
ರಸಿಕ ಕಂಗಳಿಗಿದೋ ಸ್ವಾತಂತ್ರ್ಯ
ಪದಗಳಿಗೆ ನಿಲುಕದ ಸೊಬಗು
ಹೊಂಬೆಳಕು ನೀಡಿದೆ ಮೆರಗು
ಮಾಧುರ್ಯವು ಹಕ್ಕಿಯ ಕೂಗು
ಮುತ್ತಿನ ಹನಿಗಳ ಬಿನ್ನಾಣ ಬೆಡಗು
ಪರಿವರ್ತನೆ
ಅಡಗಿ ಕುಳಿತಿಹೆವು ನಾವು
ಸೂಕ್ಷ್ಮಾಣು ಜೀವಿಗೆ ಹೆದರಿ
ಅಡಗಿ ಕುಳಿತಿಹೆವು ನಾವು...
ಸಂಬಂಧಗಳ ಮರೆತು
ಬಾಂಧವ್ಯಗಳ ಮರೆತು
ಹೆದರಿ ಕುಳಿತಿಹೆವು ನಾವು...
ಬೀದಿ ಬೀದಿಯ ಸುತ್ತದೇ
ಮಾಲ್ ಶಾಪಿಂಗ್ ಇಲ್ಲದೇ
ಹೆದರಿ ಕುಳಿತಿಹೆವು ನಾವು...
ಕಾಯಿಪಲ್ಲೆ, ಹಣ್ಣು ತರಕಾರಿ
ತರಲು ಹೋಗುತ್ತಿಲ್ಲ ಸವಾರಿ
ಹೆದರಿ ಕುಳಿತಿಹೆವು ನಾವು...
ಶವ ಸಂಸ್ಕಾರಕೂ ಹೆದರಿ
ಮಾನವೀಯತೆಯ ತೂರಿ
ಹೆದರಿ ಕುಳಿತಿಹೆವು ನಾವು...
ಓಡುತಿರುವ ಜಗವು ನಿಂತು
ಮುಂದಿನ ಹಾದಿ ಮರೆತು
ಹೆದರಿ ಕುಳಿತಿಹೆವು ನಾವು...
ತಮ್ಮ ಮನೆಗೆ ತಾವೇ ಬಂದು
ನಿಂದನೆಯ ಕೇಳಿ ನೊಂದು
ಹೆದರಿ ಕುಳಿತಿಹೆವು ನಾವು...
ಸೂಕ್ಷ್ಮಾಣು ಜೀವಿಗೆ ಹೆದರಿ
ಅಡಗಿ ಕುಳಿತಿಹೆವು ನಾವು...
ಸಂಬಂಧಗಳ ಮರೆತು
ಬಾಂಧವ್ಯಗಳ ಮರೆತು
ಹೆದರಿ ಕುಳಿತಿಹೆವು ನಾವು...
ಬೀದಿ ಬೀದಿಯ ಸುತ್ತದೇ
ಮಾಲ್ ಶಾಪಿಂಗ್ ಇಲ್ಲದೇ
ಹೆದರಿ ಕುಳಿತಿಹೆವು ನಾವು...
ಕಾಯಿಪಲ್ಲೆ, ಹಣ್ಣು ತರಕಾರಿ
ತರಲು ಹೋಗುತ್ತಿಲ್ಲ ಸವಾರಿ
ಹೆದರಿ ಕುಳಿತಿಹೆವು ನಾವು...
ಶವ ಸಂಸ್ಕಾರಕೂ ಹೆದರಿ
ಮಾನವೀಯತೆಯ ತೂರಿ
ಹೆದರಿ ಕುಳಿತಿಹೆವು ನಾವು...
ಓಡುತಿರುವ ಜಗವು ನಿಂತು
ಮುಂದಿನ ಹಾದಿ ಮರೆತು
ಹೆದರಿ ಕುಳಿತಿಹೆವು ನಾವು...
ತಮ್ಮ ಮನೆಗೆ ತಾವೇ ಬಂದು
ನಿಂದನೆಯ ಕೇಳಿ ನೊಂದು
ಹೆದರಿ ಕುಳಿತಿಹೆವು ನಾವು...
ಸೊಬಗಿನ ತವರು
ಹಸಿರು ಸೊಬಗಿನ ಸಿರಿಯ
ತೆಂಗು ಅಡಿಕೆಯ ಬೆಳೆಯ
ನಡುವಲಿಹುದು ನಮ್ಮೂರು
ಜುಳು ಜುಳು ಹರಿವ ನದಿಯ
ಹಸಿರು ದಿಬ್ಬದ ಕಣಿವೆಯ
ಬದಿಯಲಿಹುದು ನಮ್ಮೂರು
ನವಿಲಿನ ನರ್ತನದ ಸೊಗಡು
ಕೋಗಿಲೆಯ ಇಂಪಾದ ಹಾಡು
ತುಂಬಿರುವ ನಮ್ಮೂರು
ಸುಗುಣ ಸಂಸ್ಕೃತಿಯ ತವರು
ಸುಸಂಸ್ಕೃತರು ತುಂಬಿದ ಊರು
ಪುಣ್ಯಭೂಮಿಯು ನಮ್ಮೂರು
ಶಾಲ್ಮಲೆಯು ಹರಿಯುವಳು ಇಲ್ಲಿ
ಶಿವಗಂಗೆ ಜಲಪಾತ ಧುಮ್ಮಿಕ್ಕಿ ಚೆಲ್ಲಿ
ಕೈ ಬೀಸಿ ಕರೆಯುವ ನಮ್ಮೂರು
ಗುರುಮಾತೆ
ನನ್ನಯ ಮೊದಲ ಗುರುಮಾತೆ
ಅವಳು ನನಗೆ ಜನನಿಯಂತೆ
ತೋರಿದಳು ಪ್ರೀತಿ ಮಮತೆ
ವಿದ್ಯೆ ಕಲಿಸಿದ ಜ್ಞಾನದಾತೆ
ಅಕ್ಷರಮಾಲೆ ಕಲಿಸಿದವಳು
ತಪ್ಪು ತಿದ್ದಿ ಬೆಳೆಸಿದವಳು
ನೀತಿ ಕಥೆಯ ಹೇಳಿದವಳು
ಕರುಣೆಯ ಕಡಲು ಇವಳು
ಬಿದ್ದಾಗ ಕೈಹಿಡಿದು ಎತ್ತಿದವಳು
ನಾ ಗೆದ್ದಾಗ ಸಂಭ್ರಮಿಸಿದವಳು
ಊಟ ಮಾಡಿಸಿದ ತಾಯಿ ಇವಳು
ವಿಶಾಲ ಮಾತೃ ಹೃದಯದವಳು
ಪದಗಳಿಗೆ ನಿಲುಕದ ಶಕ್ತಿ ಇವಳು
ಮನಕೆ ಧೈರ್ಯ ತುಂಬಿದವಳು
ಜೀವನದ ದಾರಿ ತೋರಿದವಳು
ಸತ್ಯ ಮಾರ್ಗದಿ ನಡೆಸಿದವಳು
ಭಾನುವಾರ, ಅಕ್ಟೋಬರ್ 4, 2020
ಸಮಾರಂಭದ ಸಂಭ್ರಮ
ಕರೆ ನೀಡಿದೆ ಮಮತೆಯ ಕರೆಯೋಲೆ
ಸ್ವಾಗತಿಸುತಿದೆ ಮಾವಿನೆಲೆಯ ಮಾಲೆ
ಸಂಭ್ರಮಕೆ ಮೆರುಗು ನೀಡಿದೆ ಬಾಳೆ ಎಲೆ
ಕಣ್ಮನ ಸೆಳೆಯುತಿದೆ ಹೂ ಸಿಂಗಾರದ ಕಲೆ
ಎಲ್ಲೆಲ್ಲೂ ಹರಡಿದೆ ಚೆಲುವಿನಾ ಬಲೆ...
ಅತಿಥಿಗಳಿಗೆ ಕಾದಿದೆ ತಂಪು ಪಾನಕವು
ಘಮಘಮಿಸುತಿದೆ ಲಘು ಉಪಹಾರವು
ನಗು ಮೊಗದ ಮಾತಿನಾ ಸ್ವಾಗತವು
ಕಾಯುತಿದೆ ಮೆತ್ತನೆ ಸುಖಾಸನವು
ಸುತ್ತಲಿನ ಅಲಂಕಾರ ಚಿತ್ತಾಕರ್ಷಕವು...
ಮೊಳಗುತಿದೆ ಇಂಪಾದ ಮಂಗಳ ವಾದ್ಯವು
ರೇಷ್ಮೆ ಸೀರೆಯ ಮಾನಿನಿಯರ ಸೊಗವು
ಜೊತೆಗೆ ಬಂಗಾರದ ಆ ಆಭರಣದ ಲಾಸ್ಯವು
ಎಲ್ಲೆಡೆ ಕಾಣುತಿದೆ ಸವಿ ಸಂಭ್ರಮವು
ಸಭೆಯಲಿ ಗುಜು ಗುಜು ಮಾತಿನ ಸಡಗರವು...
ಹೊರ ಹೊಮ್ಮುತಿದೆ ಅಕ್ಷತೆಯ ರಂಗು
ಮೊಳಗುತಿದೆ ಮಧುರಗಾನದ ಗುಂಗು
ಮನ ಸೆಳೆಯುತಿದೆ ಬೆಳಕಿನಾ ಬೆಡಗು
ವರ್ಣನಾತೀತ ಶುಭಕಾರ್ಯದ ಸೊಬಗು
ಮಂತ್ರ ಶಾಸ್ತ್ರವು ಹೆಚ್ಚಿಸಿದೆ ಮೆರಗು...
ಬಾಕಿ ಉಳಿದಿದೆ ಇನ್ನೂ ಔತಣ ಕೂಟ
ಸಿದ್ಧವಾಗಿದೆ ಇದಕೆ ಹಸಿರು ತೋಟ
ಕೈ ಬೀಸಿ ಕರೆದಿದೆ ಬಾಳೆಲೆಯ ಊಟ
ಸಮಾರಂಭವಿನ್ನು ಇತಿಹಾಸದ ಪುಟ
ಸವಿ ನೆನಪಿಗಾಗಿ ಇರಲಿ ಒಂದು ಪಟ...
ಉಡುಗೊರೆಯ ಶಾಸ್ತ್ರ ಕೊನೆಯಲಿ
ಉಳಿಯಲಿ ಎಂದೆಂದೂ ನೆನಪಿನಲಿ
ಹರಸಿ ಹಾರೈಸಿ ಶುಭ ಕೋರಿಕೆಯಲಿ
ಹಂಚಿದ ಸಿಹಿ ಎಲ್ಲರ ಕರದಲಿ
ಕೊನೆಯಾಗುವುದು ನಿರ್ಗಮನದಲಿ..
ಸ್ವಾಗತಿಸುತಿದೆ ಮಾವಿನೆಲೆಯ ಮಾಲೆ
ಸಂಭ್ರಮಕೆ ಮೆರುಗು ನೀಡಿದೆ ಬಾಳೆ ಎಲೆ
ಕಣ್ಮನ ಸೆಳೆಯುತಿದೆ ಹೂ ಸಿಂಗಾರದ ಕಲೆ
ಎಲ್ಲೆಲ್ಲೂ ಹರಡಿದೆ ಚೆಲುವಿನಾ ಬಲೆ...
ಅತಿಥಿಗಳಿಗೆ ಕಾದಿದೆ ತಂಪು ಪಾನಕವು
ಘಮಘಮಿಸುತಿದೆ ಲಘು ಉಪಹಾರವು
ನಗು ಮೊಗದ ಮಾತಿನಾ ಸ್ವಾಗತವು
ಕಾಯುತಿದೆ ಮೆತ್ತನೆ ಸುಖಾಸನವು
ಸುತ್ತಲಿನ ಅಲಂಕಾರ ಚಿತ್ತಾಕರ್ಷಕವು...
ಮೊಳಗುತಿದೆ ಇಂಪಾದ ಮಂಗಳ ವಾದ್ಯವು
ರೇಷ್ಮೆ ಸೀರೆಯ ಮಾನಿನಿಯರ ಸೊಗವು
ಜೊತೆಗೆ ಬಂಗಾರದ ಆ ಆಭರಣದ ಲಾಸ್ಯವು
ಎಲ್ಲೆಡೆ ಕಾಣುತಿದೆ ಸವಿ ಸಂಭ್ರಮವು
ಸಭೆಯಲಿ ಗುಜು ಗುಜು ಮಾತಿನ ಸಡಗರವು...
ಹೊರ ಹೊಮ್ಮುತಿದೆ ಅಕ್ಷತೆಯ ರಂಗು
ಮೊಳಗುತಿದೆ ಮಧುರಗಾನದ ಗುಂಗು
ಮನ ಸೆಳೆಯುತಿದೆ ಬೆಳಕಿನಾ ಬೆಡಗು
ವರ್ಣನಾತೀತ ಶುಭಕಾರ್ಯದ ಸೊಬಗು
ಮಂತ್ರ ಶಾಸ್ತ್ರವು ಹೆಚ್ಚಿಸಿದೆ ಮೆರಗು...
ಬಾಕಿ ಉಳಿದಿದೆ ಇನ್ನೂ ಔತಣ ಕೂಟ
ಸಿದ್ಧವಾಗಿದೆ ಇದಕೆ ಹಸಿರು ತೋಟ
ಕೈ ಬೀಸಿ ಕರೆದಿದೆ ಬಾಳೆಲೆಯ ಊಟ
ಸಮಾರಂಭವಿನ್ನು ಇತಿಹಾಸದ ಪುಟ
ಸವಿ ನೆನಪಿಗಾಗಿ ಇರಲಿ ಒಂದು ಪಟ...
ಉಡುಗೊರೆಯ ಶಾಸ್ತ್ರ ಕೊನೆಯಲಿ
ಉಳಿಯಲಿ ಎಂದೆಂದೂ ನೆನಪಿನಲಿ
ಹರಸಿ ಹಾರೈಸಿ ಶುಭ ಕೋರಿಕೆಯಲಿ
ಹಂಚಿದ ಸಿಹಿ ಎಲ್ಲರ ಕರದಲಿ
ಕೊನೆಯಾಗುವುದು ನಿರ್ಗಮನದಲಿ..
ಕೆಚ್ಚೆದೆಯ ಕಲಿ ರಾಯಣ್ಣ
ಕ್ರಾಂತಿಕಾರಿ ವೀರ ಸಂಗೊಳ್ಳಿ ರಾಯಣ್ಣ
ಶೌರ್ಯ ಧೈರ್ಯವೇ ಇವನ ಮೈಬಣ್ಣ
ವೀರ ಸಿಪಾಯಿಗಳಿಗೆ ಇವನು ಅಣ್ಣ
ಅಗಸ್ಟ್ ಹದಿನೈದರಂದೆ ಜನಿಸಿದ ರಾಯಣ್ಣ
ಕೆಂಚಮ್ಮಾಜಿ, ಭರಮಪ್ಪನ ಮಗನಿವನು
ಸಂಗೊಳ್ಳಿಯ ವೀರ ಪುತ್ರ ಇವನು
ಕೆಚ್ಚೆದೆಯ ವೀರ ಶೂರ ಕಲಿ ಇವನು
ಬ್ರಿಟೀಷರೊಡನೆ ಹೋರಾಟಕೆ ನಿಂತನು
ಸ್ವಾತಂತ್ರ್ಯ ಸಮರದಿ ಪ್ರಮುಖ ಪಾತ್ರ
ಚೆನ್ನಮ್ಮನಿಗಾದ ಇವನು ವೀರ ಪುತ್ರ
ಹಿಡಿದನು ಸಂಗೊಳ್ಳಿ ಸಾಮ್ರಾಜ್ಯದ ಸೂತ್ರ
ಬ್ರಿಟೀಷರಿಗೆ ನೀಡಿದ ರಣಕೆ ಆಹ್ವಾನ ಪತ್ರ
ಸಾಧುವಿನ ವೇಷದಿ ಸೇರಿ ಸೆರೆಮನೆಯ
ಚೆನ್ನಮ್ಮಾಜಿಗೆ ನೀಡಿ ಭರವಸೆಯ
ಊದಿದನು ಸ್ವಾತಂತ್ರ್ಯದ ಕಹಳೆಯ
ಮುನ್ನಡೆಸಿದನು ಸಂಗೊಳ್ಳಿ ಸೇನೆಯ
ಬ್ರಿಟೀಷರ ಮೋಸಕೆ ಬಲಿಯಾದನು
ವೀರ ಮರಣಕೆ ಶರಣನಾದನು
ಇತಿಹಾಸದ ಪುಟವ ಸೇರಿದನು
ಸಂಗೊಳ್ಳಿ ಮರೆಯಲಾರದ ವೀರನು
ಶಾಸ್ತ್ರೀಜಿ
ಮೊಘಲ್ ಸರಾಯಿಯಲಿ ಜನಿಸಿದ ಈತ
ದಕ್ಷ-ಪ್ರಾಮಾಣಿಕನೆಂಬ ಮಾತು ಜನಜನಿತ
ಬಾಲ್ಯದಲಿ ಹಾಸಿ ಹೊದ್ದ ಬರಿಯ ಬಡತನ
ಬರಿಗಾಲಲೆ ನಡೆದು ಕಳೆದ ಬಾಲ್ಯದ ಜೀವನ
ಗಾಂಧಿಯಿಂದ ಆದನು ಇನನು ಪ್ರಭಾವಿತ
ಸ್ವಾತಂತ್ರ್ಯ ಹೋರಾಟಕೆ ಧುಮುಕಿದನೀತ
ಲಲಿತಾದೇವಿಯೊಂದಿಗೆ ಆಯಿತು ಮದುವೆ
ದೇಶ ಸೇವೆಗೈವ ದೃಢ ನಿರ್ಧಾರದ ನಡುವೆ
ನಾಯಕ ಬ್ರಿಟಿಷ ವಿರೋಧಿ ಚಳುವಳಿಗೆ
ಏಳು ವರ್ಷ ಕಳೆದ ಸೆರೆಮನೆಯೊಳಗೆ
ದೇಶಕೆ ಸಲ್ಲಿಸಿದ ಸೇವೆಯು ಅಪಾರ
ಇಂದಿಗೂ ಪ್ರಸಿದ್ಧ ಶಾಸ್ತ್ರೀ ಸೋಮವಾರ
ಸ್ವಾತಂತ್ರ ಭಾರತದ ಎರಡನೇ ಪ್ರಧಾನಿ
ಶಾಸ್ತ್ರೀ ಎಂಬ ಬಿರುದಾಂಕಿತ ಸ್ವಾಭಿಮಾನಿ
ಮರಣಾನಂತರ ದೊರೆಯಿತು ಭಾರತರತ್ನವು
ದೆಹಲಿಯಲಿ ಸ್ಮಾರಕ ನಿರ್ಮಿಸಿ ಸಮ್ಮಾನವು
ಗಾಂಧೀಜಿ-ಶಾಸ್ತ್ರೀಜಿ ಇಬ್ಬರನು ನೆನೆಯುವ
ಸಪರ್ಪಣಾ ಭಾವದ ರಾಜಕಾರಣಿಗೆ ನಮಿಸುವ
ಜೈ ಜವಾನ್ ಜೈ ಕಿಸಾನ್ ಇವರ ಧ್ಯೇಯವಾಕ್ಯ
ಇವರ ಕಾಲದಲಿ ದೇಶವು ಪ್ರಗತಿಯಲಿ ಔನತ್ಯ
ದಕ್ಷ-ಪ್ರಾಮಾಣಿಕನೆಂಬ ಮಾತು ಜನಜನಿತ
ಬಾಲ್ಯದಲಿ ಹಾಸಿ ಹೊದ್ದ ಬರಿಯ ಬಡತನ
ಬರಿಗಾಲಲೆ ನಡೆದು ಕಳೆದ ಬಾಲ್ಯದ ಜೀವನ
ಗಾಂಧಿಯಿಂದ ಆದನು ಇನನು ಪ್ರಭಾವಿತ
ಸ್ವಾತಂತ್ರ್ಯ ಹೋರಾಟಕೆ ಧುಮುಕಿದನೀತ
ಲಲಿತಾದೇವಿಯೊಂದಿಗೆ ಆಯಿತು ಮದುವೆ
ದೇಶ ಸೇವೆಗೈವ ದೃಢ ನಿರ್ಧಾರದ ನಡುವೆ
ನಾಯಕ ಬ್ರಿಟಿಷ ವಿರೋಧಿ ಚಳುವಳಿಗೆ
ಏಳು ವರ್ಷ ಕಳೆದ ಸೆರೆಮನೆಯೊಳಗೆ
ದೇಶಕೆ ಸಲ್ಲಿಸಿದ ಸೇವೆಯು ಅಪಾರ
ಇಂದಿಗೂ ಪ್ರಸಿದ್ಧ ಶಾಸ್ತ್ರೀ ಸೋಮವಾರ
ಸ್ವಾತಂತ್ರ ಭಾರತದ ಎರಡನೇ ಪ್ರಧಾನಿ
ಶಾಸ್ತ್ರೀ ಎಂಬ ಬಿರುದಾಂಕಿತ ಸ್ವಾಭಿಮಾನಿ
ಮರಣಾನಂತರ ದೊರೆಯಿತು ಭಾರತರತ್ನವು
ದೆಹಲಿಯಲಿ ಸ್ಮಾರಕ ನಿರ್ಮಿಸಿ ಸಮ್ಮಾನವು
ಗಾಂಧೀಜಿ-ಶಾಸ್ತ್ರೀಜಿ ಇಬ್ಬರನು ನೆನೆಯುವ
ಸಪರ್ಪಣಾ ಭಾವದ ರಾಜಕಾರಣಿಗೆ ನಮಿಸುವ
ಜೈ ಜವಾನ್ ಜೈ ಕಿಸಾನ್ ಇವರ ಧ್ಯೇಯವಾಕ್ಯ
ಇವರ ಕಾಲದಲಿ ದೇಶವು ಪ್ರಗತಿಯಲಿ ಔನತ್ಯ
ಜನಸಂಖ್ಯಾ ಸ್ಫೋಟ
ಜನಸಂಖ್ಯಾ ಸ್ಫೋಟ
ಜನಸಂಖ್ಯೆ ಕೋಟಿ ಕೋಟಿ
ಏರುತಿಹುದು ಮಿತಿ ದಾಟಿ
ಎಲ್ಲಡೆಯೂ ಪೈಪೋಟಿ
ಈ ಸಮಸ್ಯೆಗಿಲ್ಲ ಸಾಟಿ
ಎಲ್ಲಿ ನೋಡಿದರೂ ಜನರು
ಸೌಲಭ್ಯ ವಂಚಿತರ ತವರು
ಹಬ್ಬಿದೆ ಸಮಸ್ಯೆಯ ಬೇರು
ಸಿಗುತಿಲ್ಲ ಜನರಿಗೆ ಅನ್ನ ನೀರು
ಶಿಕ್ಷಣದಿ ಇಲ್ಲ ಅವಕಾಶ
ಆರ್ಥಿಕ ಪ್ರಗತಿಯ ನಾಶ
ದೇಶದ ಅಭಿವೃದ್ಧಿ ವಿನಾಶ
ಬರಿದಾಗಿದೆ ದೇಶದ ಕೋಶ
ಮನೆಗೊಂದು ಮಗುವಿರಲಿ
ಮನೆ ತುಂಬ ನಗುವಿರಲಿ
ಮನೆ ಮನೆಯಲೂ ಇರಲಿ
ಜನಸಂಖ್ಯೆ ನಿಯಂತ್ರಣದಲಿ
ಮೂಡಿಸುವ ಎಲ್ಲರಲೂ ಜಾಗೃತಿ
ಹಳ್ಳಿ ನಗರದಲೂ ಹೇಳುವ ನೀತಿ
ಮೀರದಿರಲಿ ಜನಸಂಖ್ಯೆ ಮಿತಿ
ದೇಶದೆಲ್ಲೆಡೆ ಆಗಲಿ ಉನ್ನತಿ
ಜನಸಂಖ್ಯೆ ಕೋಟಿ ಕೋಟಿ
ಏರುತಿಹುದು ಮಿತಿ ದಾಟಿ
ಎಲ್ಲಡೆಯೂ ಪೈಪೋಟಿ
ಈ ಸಮಸ್ಯೆಗಿಲ್ಲ ಸಾಟಿ
ಎಲ್ಲಿ ನೋಡಿದರೂ ಜನರು
ಸೌಲಭ್ಯ ವಂಚಿತರ ತವರು
ಹಬ್ಬಿದೆ ಸಮಸ್ಯೆಯ ಬೇರು
ಸಿಗುತಿಲ್ಲ ಜನರಿಗೆ ಅನ್ನ ನೀರು
ಶಿಕ್ಷಣದಿ ಇಲ್ಲ ಅವಕಾಶ
ಆರ್ಥಿಕ ಪ್ರಗತಿಯ ನಾಶ
ದೇಶದ ಅಭಿವೃದ್ಧಿ ವಿನಾಶ
ಬರಿದಾಗಿದೆ ದೇಶದ ಕೋಶ
ಮನೆಗೊಂದು ಮಗುವಿರಲಿ
ಮನೆ ತುಂಬ ನಗುವಿರಲಿ
ಮನೆ ಮನೆಯಲೂ ಇರಲಿ
ಜನಸಂಖ್ಯೆ ನಿಯಂತ್ರಣದಲಿ
ಮೂಡಿಸುವ ಎಲ್ಲರಲೂ ಜಾಗೃತಿ
ಹಳ್ಳಿ ನಗರದಲೂ ಹೇಳುವ ನೀತಿ
ಮೀರದಿರಲಿ ಜನಸಂಖ್ಯೆ ಮಿತಿ
ದೇಶದೆಲ್ಲೆಡೆ ಆಗಲಿ ಉನ್ನತಿ
ಬಂಡಾಯ ಕವನ
ಕಾರ್ಮಿಕ
ದುಡಿಯುತಿಹನು ಕೂಲಿಯಾಗಿ
ನೋವು-ದಣಿವನೆಲ್ಲ ನುಂಗಿ
ಕುಟುಂಬದ ಒಪ್ಪತ್ತಿನ ಊಟಕಾಗಿ
ಅಲ್ಲ ದುಡಿಮೆಯು ಶೋಕಿಗಾಗಿ
ದಿನವೂ ಬೆವರು ಹರಿಸುವ
ಕಂಬನಿಯನು ಸುರಿಸುವ
ಕಷ್ಟಗಳ ಹೊದ್ದು ಬದುಕುವ
ಬವಣೆಯಲೆ ಬೇಯುವ
ಕಾರ್ಮಿಕನ ಗೋಳ ಕೇಳುವರಿಲ್ಲ
ಇವನ ಶ್ರಮವನು ಬಲ್ಲವರಿಲ್ಲ
ಆಳುವವರ ದರ್ಪ ತಡೆವರಿಲ್ಲ
ದೌರ್ಜನ್ಯ ಮಿತಿ ಮೀರಿದೆಯಲ್ಲ
ದೇಶದ ಬೆನ್ನೆಲುಬು ಕಾರ್ಮಿಕರು
ಅವರು ನಮ್ಮಂತೆ ಮನುಜರು
ಆಗದಿರಲಿ ಅವಕಾಶ ವಂಚಿತರು
ಬದುಕಿ ಬಾಳಲಿ ನಮ್ಮಂತೆ ಇವರು
ದುಡಿಯುತಿಹನು ಕೂಲಿಯಾಗಿ
ನೋವು-ದಣಿವನೆಲ್ಲ ನುಂಗಿ
ಕುಟುಂಬದ ಒಪ್ಪತ್ತಿನ ಊಟಕಾಗಿ
ಅಲ್ಲ ದುಡಿಮೆಯು ಶೋಕಿಗಾಗಿ
ದಿನವೂ ಬೆವರು ಹರಿಸುವ
ಕಂಬನಿಯನು ಸುರಿಸುವ
ಕಷ್ಟಗಳ ಹೊದ್ದು ಬದುಕುವ
ಬವಣೆಯಲೆ ಬೇಯುವ
ಕಾರ್ಮಿಕನ ಗೋಳ ಕೇಳುವರಿಲ್ಲ
ಇವನ ಶ್ರಮವನು ಬಲ್ಲವರಿಲ್ಲ
ಆಳುವವರ ದರ್ಪ ತಡೆವರಿಲ್ಲ
ದೌರ್ಜನ್ಯ ಮಿತಿ ಮೀರಿದೆಯಲ್ಲ
ದೇಶದ ಬೆನ್ನೆಲುಬು ಕಾರ್ಮಿಕರು
ಅವರು ನಮ್ಮಂತೆ ಮನುಜರು
ಆಗದಿರಲಿ ಅವಕಾಶ ವಂಚಿತರು
ಬದುಕಿ ಬಾಳಲಿ ನಮ್ಮಂತೆ ಇವರು
ಮುಂಜಾನೆಯ ಮಳೆ
ಮುತ್ತಿನ ಹನಿಗಾಗಿ ಕಾಯ್ವ ಇಳೆ
ಮುಂಜಾನೆಯ ಸೋನೆ ಮಳೆ
ತೊಳೆಯಿತೆಲ್ಲ ಇಳೆಯ ಕೊಳೆ
ಜನಿಸಿತಾಗ ಹಚ್ಚಹಸಿರ ಬೆಳೆ
ಹಸಿರ ಸೀರೆಯುಟ್ಟ ಭುವಿ
ನಾಚಿ ನೀರಾದಳು ಬರಲು ರವಿ
ಹೊಂಗಿರಣದ ಸ್ಪರ್ಶದ ಸವಿ
ಕೇಳುತಿದೆ ಪ್ರೇಮರಾಗದ ಪಲ್ಲವಿ
ಹಾಲಿನಂತೆ ಹರಿವ ನೀರ ಝರಿ
ಎಂಥ ಚಂದ ಭೂರಮೆಯ ಸಿರಿ
ತೆರೆದಂತಿದೆ ಸ್ವರ್ಗದ ದಾರಿ
ಅದಕೆ ನಿಲುಕದ ಸೊಬಗ ವೈಖರಿ
ಸಕಲ ಜೀವರಾಶಿಗಿದುವೆ ನೆಲೆ
ಅದ್ಭುತ ದೇವ ಸೃಷ್ಟಿಯ ಕಲೆ
ಬೆಳಗಿದುವೆ ಚೈತನ್ಯದ ಸೆಲೆ
ರಮ್ಯತೆಗೆ ಕಟ್ಟಲಾದೀತೆ ಬೆಲೆ??
ಮುಂಜಾನೆಯ ಸೋನೆ ಮಳೆ
ತೊಳೆಯಿತೆಲ್ಲ ಇಳೆಯ ಕೊಳೆ
ಜನಿಸಿತಾಗ ಹಚ್ಚಹಸಿರ ಬೆಳೆ
ಹಸಿರ ಸೀರೆಯುಟ್ಟ ಭುವಿ
ನಾಚಿ ನೀರಾದಳು ಬರಲು ರವಿ
ಹೊಂಗಿರಣದ ಸ್ಪರ್ಶದ ಸವಿ
ಕೇಳುತಿದೆ ಪ್ರೇಮರಾಗದ ಪಲ್ಲವಿ
ಹಾಲಿನಂತೆ ಹರಿವ ನೀರ ಝರಿ
ಎಂಥ ಚಂದ ಭೂರಮೆಯ ಸಿರಿ
ತೆರೆದಂತಿದೆ ಸ್ವರ್ಗದ ದಾರಿ
ಅದಕೆ ನಿಲುಕದ ಸೊಬಗ ವೈಖರಿ
ಸಕಲ ಜೀವರಾಶಿಗಿದುವೆ ನೆಲೆ
ಅದ್ಭುತ ದೇವ ಸೃಷ್ಟಿಯ ಕಲೆ
ಬೆಳಗಿದುವೆ ಚೈತನ್ಯದ ಸೆಲೆ
ರಮ್ಯತೆಗೆ ಕಟ್ಟಲಾದೀತೆ ಬೆಲೆ??
ನಿಲ್ಲಲಿ ಶೋಷಣೆ
ಬಂಡಾಯ ಕವನ
ಕಾರ್ಖಾನೆಯಲಿ ಬೆವರು ಹರಿಸಿ
ತೋಳ ಬಲವ ಬಂಡವಾಳವಾಗಿಸಿ
ಮೈಯ ಮೂಳೆಯನು ಸವೆಸಿ
ದುಡಿವ ನಮ್ಮ ಕಡೆ ಗಮನ ಹರಿಸಿ
ಅನ್ನ ಬಟ್ಟೆಗಾಗಿ ನಮ್ಮ ಶ್ರಮವೂ
ನಮ್ಮ ದುಡಿಮೆ ನಂಬಿಹ ಕುಟುಂಬವೂ
ಕೆಲಸ ಇಲ್ಲವಾದರೆ ಇಲ್ಲ ಊಟವೂ
ಶೋಕಿಗಾಗಿ ಅಲ್ಲ ನಮ್ಮ ಕೆಲಸವೂ
ನೀವು ಬೆಳೆಯಲು ಬೇಕು ನಾವುಗಳು
ನೀಡಿ ನಮಗೂ ನಮ್ಮ ಸೌಲಭ್ಯಗಳು
ಆಗಲಿ ಒಳ್ಳೆಯ ಬದಲಾವಣೆಗಳು
ದೂರಾಗಲಿ ಕಾರ್ಮಿಕರ ಬವಣೆಗಳು
ಬಡವರೆಂದು ಶೋಷಿಸದಿರಿ ನಮ್ಮನು
ನೀಡಿ ನಮಗೆ ನಮ್ಮಯ ಹಕ್ಕನು
ಜೊತೆಗೆ ನಮ್ಮ ಶ್ರಮಕೆ ಗೌರವವನು
ಹಸನುಗೊಳಿಸಿ ನಮ್ಮ ಬದುಕನು
ನವಪರ್ವ ಫೌಂಡೇಶನ್ : ಉತ್ತಮ ಸ್ಥಾನ
27/07/2020
ಕಾರ್ಖಾನೆಯಲಿ ಬೆವರು ಹರಿಸಿ
ತೋಳ ಬಲವ ಬಂಡವಾಳವಾಗಿಸಿ
ಮೈಯ ಮೂಳೆಯನು ಸವೆಸಿ
ದುಡಿವ ನಮ್ಮ ಕಡೆ ಗಮನ ಹರಿಸಿ
ಅನ್ನ ಬಟ್ಟೆಗಾಗಿ ನಮ್ಮ ಶ್ರಮವೂ
ನಮ್ಮ ದುಡಿಮೆ ನಂಬಿಹ ಕುಟುಂಬವೂ
ಕೆಲಸ ಇಲ್ಲವಾದರೆ ಇಲ್ಲ ಊಟವೂ
ಶೋಕಿಗಾಗಿ ಅಲ್ಲ ನಮ್ಮ ಕೆಲಸವೂ
ನೀವು ಬೆಳೆಯಲು ಬೇಕು ನಾವುಗಳು
ನೀಡಿ ನಮಗೂ ನಮ್ಮ ಸೌಲಭ್ಯಗಳು
ಆಗಲಿ ಒಳ್ಳೆಯ ಬದಲಾವಣೆಗಳು
ದೂರಾಗಲಿ ಕಾರ್ಮಿಕರ ಬವಣೆಗಳು
ಬಡವರೆಂದು ಶೋಷಿಸದಿರಿ ನಮ್ಮನು
ನೀಡಿ ನಮಗೆ ನಮ್ಮಯ ಹಕ್ಕನು
ಜೊತೆಗೆ ನಮ್ಮ ಶ್ರಮಕೆ ಗೌರವವನು
ಹಸನುಗೊಳಿಸಿ ನಮ್ಮ ಬದುಕನು
ನವಪರ್ವ ಫೌಂಡೇಶನ್ : ಉತ್ತಮ ಸ್ಥಾನ
27/07/2020
ಮನುಜ ಕುಲವೊಂದೆ
ಬಂಡಾಯ ಕವನ
ಎಲ್ಲರೂ ಮನುಜರೇ ಮರೆಯಬೇಡಿ
ನಮಗೂ ಒಂದು ಬದುಕಿದೆ ಕಾಡಬೇಡಿ
ಎಲ್ಲೆಡೆಯೂ ಬೇಧ-ಭಾವ ಮಾಡಬೇಡಿ
ಕರಿಯ ಬಣ್ಣಕೂ ಇದೆ ಅದರದೆ ಬೆಲೆ
ಕರಿಯರಿಗೂ ಇದೆ ಅವರದೆ ಆದ ನೆಲೆ
ಕಿತ್ತುಕೊಳ್ಳಬೇಡಿ ನೀರು, ಅನ್ನದ ಒಲೆ
ದೇವನೊಬ್ಬ ನೋಡುತಿರುವ ಮೇಲೆ
ಶಾಶ್ವತವಲ್ಲ ಗಳಿಸಿದ ಹಣ ಸಂಪತ್ತು
ಬದಲಾಗುತಲಿಹುದು ಈ ಜಗತ್ತು
ನಿಮ್ಮ ಸ್ಥಾನಕೂ ಬರಬಹುದು ಕುತ್ತು
ನಂಬಿ ಬದುಕುವವರು ನಾವು ನಿಯತ್ತು
ಬಣ್ಣದಲಿ ಹೆಚ್ಚುಗಾರಿಕೆ ಏನಿದೆ ಅಣ್ಣ
ಜಗದ ಮನುಜರೆಲ್ಲ ಒಂದೇ ಅಣ್ಣ
ನಮ್ಮಲಿ ಮೇಲು ಕೀಳು ಬೇಡ ಅಣ್ಣ
ಎಲ್ಲರ ರಕ್ತದ ಬಣ್ಣ ಒಂದೇ ಅಣ್ಣ
ನಮಗೂ ಬದುಕು ಬಿಡಿ ದಯಮಾಡಿ
ನಮ್ಮ ಅನ್ನವ ಕಿತ್ತು ಕಿತ್ತು ತಿನ್ನಬೇಡಿ
ನಮದೂ ಈ ಭೂಮಿ ಬದುಕಗೊಡಿ
ಹಕ್ಕು ಕಸಿದು ಸಮಾಧಿ ಮಾಡಬೇಡಿ
ನವಪರ್ವ ಫೌಂಡೇಶನ್ : ಉತ್ತಮ ಸ್ಥಾನ
13/07/2020
ಶನಿವಾರ, ಅಕ್ಟೋಬರ್ 3, 2020
ನವ ವಧು
ನವವಧು
ಹುಟ್ಟಿ ಬೆಳೆದಾ ಮನೆಯ ಬಿಟ್ಟು
ಒಡಹುಟ್ಟಿದವರನೂ ಬಿಟ್ಟು
ಜನ್ಮವಿತ್ತ ದೇವರುಗಳ ಬಿಟ್ಟು
ಒಡನಾಡಿಗಳನೆಲ್ಲ ಬಿಟ್ಟು
ಅಕ್ಕರೆಯ ಸೇರನು ಒದ್ದು ಬಂದಳು
ಸೊಸೆಯಾಗಿ ಹೊಸ ಮನೆ ಸೇರಿದಳು
ಮಡದಿಯೆಂಬ ಪಟ್ಟವ ಏರಿದಳು
ಹೊಸ ಕನಸಗಳ ಕಂಗಳಲಿ ಕಂಡಳು
ಅಲ್ಲಿ ಕೂತರೆ ಅತ್ತೆ ಏನೆನ್ನುವರು
ಇಲ್ಲಿ ನಿಂತರೆ ಮಾವ ಏನೆನ್ನುವರು
ಅಡಿಗೆಯೂ ಬಾರದು ಚೂರು-ಪಾರು
ಕ್ಷಣವೂ ನೆನಪಾಗುತಿಹುದು ತವರು
ಇನ್ನು ಹೇಗಿರುವನೋ ಪತಿರಾಯ
ಆಗುವನೆ ಇವನು ಮನದ ಇನಿಯ
ಆಷಾಢ ಬರಲು ಸೇರಿ ತೌರು ಮನೆಯ
ಹಾಡುತಲಿ ಕಹಿ ವಿರಹದಾ ಗೀತೆಯ
ಬರಲು ಶ್ರಾವಣ ಸೇರಿ ಪತಿಗೃಹವನು
ಪೂಜಿಸಿ ವರ ಮಹಾಲಕ್ಷ್ಮೀಯನು
ಬೇಡಿ ಸಂಸಾರ ಸುಖ, ಸಂತಾನವನು
ಸಾಮರಸ್ಯದಿ ಕೂಡಿ ಬಾಳು ಹಸನು
ಹುಟ್ಟಿ ಬೆಳೆದಾ ಮನೆಯ ಬಿಟ್ಟು
ಒಡಹುಟ್ಟಿದವರನೂ ಬಿಟ್ಟು
ಜನ್ಮವಿತ್ತ ದೇವರುಗಳ ಬಿಟ್ಟು
ಒಡನಾಡಿಗಳನೆಲ್ಲ ಬಿಟ್ಟು
ಅಕ್ಕರೆಯ ಸೇರನು ಒದ್ದು ಬಂದಳು
ಸೊಸೆಯಾಗಿ ಹೊಸ ಮನೆ ಸೇರಿದಳು
ಮಡದಿಯೆಂಬ ಪಟ್ಟವ ಏರಿದಳು
ಹೊಸ ಕನಸಗಳ ಕಂಗಳಲಿ ಕಂಡಳು
ಅಲ್ಲಿ ಕೂತರೆ ಅತ್ತೆ ಏನೆನ್ನುವರು
ಇಲ್ಲಿ ನಿಂತರೆ ಮಾವ ಏನೆನ್ನುವರು
ಅಡಿಗೆಯೂ ಬಾರದು ಚೂರು-ಪಾರು
ಕ್ಷಣವೂ ನೆನಪಾಗುತಿಹುದು ತವರು
ಇನ್ನು ಹೇಗಿರುವನೋ ಪತಿರಾಯ
ಆಗುವನೆ ಇವನು ಮನದ ಇನಿಯ
ಆಷಾಢ ಬರಲು ಸೇರಿ ತೌರು ಮನೆಯ
ಹಾಡುತಲಿ ಕಹಿ ವಿರಹದಾ ಗೀತೆಯ
ಬರಲು ಶ್ರಾವಣ ಸೇರಿ ಪತಿಗೃಹವನು
ಪೂಜಿಸಿ ವರ ಮಹಾಲಕ್ಷ್ಮೀಯನು
ಬೇಡಿ ಸಂಸಾರ ಸುಖ, ಸಂತಾನವನು
ಸಾಮರಸ್ಯದಿ ಕೂಡಿ ಬಾಳು ಹಸನು
ಶುಕ್ರವಾರ, ಅಕ್ಟೋಬರ್ 2, 2020
ನುಡಿ ನಮನ
ನುಡಿ-ನಮನ
ಕೆಚ್ಚೆದೆಯ ಯೋಧರಿಗೆ
ಎದೆಯಾಳದಿಂದ ನಮನಾ
ಸಮರದ ಕಲಿಗಳಿಗಿದೋ
ಅರ್ಪಿಸುವೆವು ವಂದನಾ...
ಪ್ರಾಣವನೆ ಪಣಕಿಟ್ಟು
ದೇಶವನು ಕಾಯುವರು
ಜನ್ಮಭೂಮಿ ರಕ್ಷಣೆಗೆ
ಕುಟುಂಬವನೇ ತೊರೆದರು...
ನಮ್ಮ ನೆಮ್ಮದಿಯ ಹೊಣೆಯ
ತಮ್ಮ ಹೆಗಲ ಮೇಲೆ ಹೊತ್ತರು
ಶತ್ರುವಿನೊಡನೆ ಸೆಣೆಸಾಡಿ
ಜಯಿಸಿ ಹರಿಸಿ ತಮ್ಮ ನೆತ್ತರು...
ನಮ್ಮ ಭರತ ಭೂಮಿಯ
ಹಮ್ಮೆಯ ವೀರ ಪುತ್ರರು
ಕಾಡು-ಮೇಡು ಲೆಕ್ಕಿಸದೇ
ಹೋರಾಟಕೆ ನಿಂತರು...
ಎಂದೆಂದಿಗೂ ಅಮರವಾಗಿದೆ
ಅವರ ತ್ಯಾಗ ಬಲಿದಾನವು
ಕೆಚ್ಚೆದೆಯ ವೀರರ ಶೌರ್ಯ
ಮಾತೃ ಭೂಮಿಗೆ ವರದಾನವು..
ಕಾರ್ಗಿಲ್ ವಿಜಯ ದಿವಸ
ಹೆಮ್ಮೆಯಿಂದ ಆಚರಿಸುವ
ಹುತಾತ್ಮ ಯೋಧರನು
ಗೌರವದಿ ಸಂಸ್ಮರಿಸುವ...
ಹೃದಯದಿಂದ ಹೊಮ್ಮಲಿ
ವೀರರಿಗೆ ಭಾವಾಂಜಲಿ
ಕರಮುಗಿದು ಶಿರಬಾಗಿ
ಸಮರ್ಪಿಸುವ ಶೃದ್ಧಾಂಜಲಿ...
ಕೆಚ್ಚೆದೆಯ ಯೋಧರಿಗೆ
ಎದೆಯಾಳದಿಂದ ನಮನಾ
ಸಮರದ ಕಲಿಗಳಿಗಿದೋ
ಅರ್ಪಿಸುವೆವು ವಂದನಾ...
ಪ್ರಾಣವನೆ ಪಣಕಿಟ್ಟು
ದೇಶವನು ಕಾಯುವರು
ಜನ್ಮಭೂಮಿ ರಕ್ಷಣೆಗೆ
ಕುಟುಂಬವನೇ ತೊರೆದರು...
ನಮ್ಮ ನೆಮ್ಮದಿಯ ಹೊಣೆಯ
ತಮ್ಮ ಹೆಗಲ ಮೇಲೆ ಹೊತ್ತರು
ಶತ್ರುವಿನೊಡನೆ ಸೆಣೆಸಾಡಿ
ಜಯಿಸಿ ಹರಿಸಿ ತಮ್ಮ ನೆತ್ತರು...
ನಮ್ಮ ಭರತ ಭೂಮಿಯ
ಹಮ್ಮೆಯ ವೀರ ಪುತ್ರರು
ಕಾಡು-ಮೇಡು ಲೆಕ್ಕಿಸದೇ
ಹೋರಾಟಕೆ ನಿಂತರು...
ಎಂದೆಂದಿಗೂ ಅಮರವಾಗಿದೆ
ಅವರ ತ್ಯಾಗ ಬಲಿದಾನವು
ಕೆಚ್ಚೆದೆಯ ವೀರರ ಶೌರ್ಯ
ಮಾತೃ ಭೂಮಿಗೆ ವರದಾನವು..
ಕಾರ್ಗಿಲ್ ವಿಜಯ ದಿವಸ
ಹೆಮ್ಮೆಯಿಂದ ಆಚರಿಸುವ
ಹುತಾತ್ಮ ಯೋಧರನು
ಗೌರವದಿ ಸಂಸ್ಮರಿಸುವ...
ಹೃದಯದಿಂದ ಹೊಮ್ಮಲಿ
ವೀರರಿಗೆ ಭಾವಾಂಜಲಿ
ಕರಮುಗಿದು ಶಿರಬಾಗಿ
ಸಮರ್ಪಿಸುವ ಶೃದ್ಧಾಂಜಲಿ...
ಸೋಮವಾರ, ಸೆಪ್ಟೆಂಬರ್ 28, 2020
ಆಸೆ
ಆಸೆ
ಬಾಳ ಕಡಲಲಿ ತೇಲಿ ಮೀಯುವ ಅರಸಂಚೆಯಾಗುವಾಸೆ
ಭುವಿಯ ಮೆರಗ ಹೆಚ್ಚಿಸುವ
ಹಸಿರ ಹೊದಿಕೆಯಾಗುವಾಸೆ
ಜುಳು ಜುಳು ಹರಿವ ನೀರಲಿ
ಮೀನಾಗಿ ಈಜುವಾಸೆ
ಬಾನ ರವಿಯ ಹೊಂಗಿರಣದಲಿ
ಸ್ಪುರಣ ಕಾಂತಿಯಾಗುವಾಸೆ
ಹಸುಕಂದನ ತುಟಿಯ ಮೇಲಿನ
ಕಿರು ನಗುವಾಗುವಾಸೆ
ಹಸಿರು ಚಿಗುರಿಲೆಯ ಮೇಲಿನ
ಮುತ್ತಿನ ಹನಿಯಾಗುವಾಸೆ
ಕಂಗೊಳಿಸುವ ತರುಲತೆಯಲಿ
ಸೌಗಂಧಿಕ ಪುಷ್ಪವಾಗುವಾಸೆ
ಬಾನೆತ್ತರಕೆ ಹಾರಿ ಕ್ಷಿತಿಜವದಲಿ
ಸೇರಿ ಬಣ್ಣದ ಹಕ್ಕಿಯಾಗುವಾಸೆ
ವೇದಾವತಿ ಭಟ್ಟ
ಮುಂಬೈ
ಬಾಳ ಕಡಲಲಿ ತೇಲಿ ಮೀಯುವ ಅರಸಂಚೆಯಾಗುವಾಸೆ
ಭುವಿಯ ಮೆರಗ ಹೆಚ್ಚಿಸುವ
ಹಸಿರ ಹೊದಿಕೆಯಾಗುವಾಸೆ
ಜುಳು ಜುಳು ಹರಿವ ನೀರಲಿ
ಮೀನಾಗಿ ಈಜುವಾಸೆ
ಬಾನ ರವಿಯ ಹೊಂಗಿರಣದಲಿ
ಸ್ಪುರಣ ಕಾಂತಿಯಾಗುವಾಸೆ
ಹಸುಕಂದನ ತುಟಿಯ ಮೇಲಿನ
ಕಿರು ನಗುವಾಗುವಾಸೆ
ಹಸಿರು ಚಿಗುರಿಲೆಯ ಮೇಲಿನ
ಮುತ್ತಿನ ಹನಿಯಾಗುವಾಸೆ
ಕಂಗೊಳಿಸುವ ತರುಲತೆಯಲಿ
ಸೌಗಂಧಿಕ ಪುಷ್ಪವಾಗುವಾಸೆ
ಬಾನೆತ್ತರಕೆ ಹಾರಿ ಕ್ಷಿತಿಜವದಲಿ
ಸೇರಿ ಬಣ್ಣದ ಹಕ್ಕಿಯಾಗುವಾಸೆ
ವೇದಾವತಿ ಭಟ್ಟ
ಮುಂಬೈ
ಬುಧವಾರ, ಜುಲೈ 1, 2020
ಚುಟುಕು
ತನು
ತನುವ ಸೌಂದರ್ಯಕೆ ಸೋಲದಿರು
ಹೇ ಮರುಳು ಮನುಜ
ನಶಿಸುವುದು ಕಾಲ ಕಳೆದಂತೆ
ಇದು ಬಹಳ ಸಹಜ...
ಮನ
ಹೆಂಡತಿಯ ಮಾತ ಕೇಳಿ ಒಬ್ಬ
ತಾಯಿಗೆ ಕಟ್ಟಿದ ಪಟ್ಟ ಹುಚ್ಚಿ
ಮನದ ಮಾತ ಕೇಳದೇ ಮಾಡಿದ
ಅಪರಾಧ ಕೊನೆತನಕ ಕಾಡಿತ್ತು ಚುಚ್ಚಿ...
ಧನ
ಮಾಡಿದ ದಾನ ಧರ್ಮ
ಬರುವುದು ಕೊನೆಯಲಿ
ಕೂಡಿಟ್ಟ ಧನ ಇರುವುದು
ಕೇವಲ ಪೆಟ್ಟಿಗೆಯಲಿ...
*ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ(ರಿ) -ಮಹಾರಾಷ್ಟ್ರ*🇮🇳 🇮🇳🇮🇳🇮🇳🇮🇳🇮🇳🇮🇳🇮🇳
ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ (ರಿ )-ಮಹಾರಾಷ್ಟ್ರ ಇವರು *ಕುಣಿಗಲ್ ತಾ. ಲೇಖಕರ ಬಳಗ ಹಾಗೂ ತನ್ಮಯ್ ಗ್ರೂಪ್ಸ್ ನ ಸಹಯೋಗದಲ್ಲಿ ದಿ :20.06.2020ರಂದು ಅಂತರ್ ರಾಜ್ಯ ಮಟ್ಟದ ವಾಟ್ಸಪ್ *ಚುಟುಕು ಸ್ಪರ್ಧೆ* ಯಲ್ಲಿ "ಅತ್ಯುತ್ತಮ" ಸ್ಥಾನ ದೊರೆತು "ಅನರ್ಘ್ಯ ಚುಟುಕು ರತ್ನ" ಪ್ರಶಸ್ತಿ ಗೆ ಪಾತ್ರವಾಗಿದೆ.
ತನುವ ಸೌಂದರ್ಯಕೆ ಸೋಲದಿರು
ಹೇ ಮರುಳು ಮನುಜ
ನಶಿಸುವುದು ಕಾಲ ಕಳೆದಂತೆ
ಇದು ಬಹಳ ಸಹಜ...
ಮನ
ಹೆಂಡತಿಯ ಮಾತ ಕೇಳಿ ಒಬ್ಬ
ತಾಯಿಗೆ ಕಟ್ಟಿದ ಪಟ್ಟ ಹುಚ್ಚಿ
ಮನದ ಮಾತ ಕೇಳದೇ ಮಾಡಿದ
ಅಪರಾಧ ಕೊನೆತನಕ ಕಾಡಿತ್ತು ಚುಚ್ಚಿ...
ಧನ
ಮಾಡಿದ ದಾನ ಧರ್ಮ
ಬರುವುದು ಕೊನೆಯಲಿ
ಕೂಡಿಟ್ಟ ಧನ ಇರುವುದು
ಕೇವಲ ಪೆಟ್ಟಿಗೆಯಲಿ...
*ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ(ರಿ) -ಮಹಾರಾಷ್ಟ್ರ*🇮🇳 🇮🇳🇮🇳🇮🇳🇮🇳🇮🇳🇮🇳🇮🇳
ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ (ರಿ )-ಮಹಾರಾಷ್ಟ್ರ ಇವರು *ಕುಣಿಗಲ್ ತಾ. ಲೇಖಕರ ಬಳಗ ಹಾಗೂ ತನ್ಮಯ್ ಗ್ರೂಪ್ಸ್ ನ ಸಹಯೋಗದಲ್ಲಿ ದಿ :20.06.2020ರಂದು ಅಂತರ್ ರಾಜ್ಯ ಮಟ್ಟದ ವಾಟ್ಸಪ್ *ಚುಟುಕು ಸ್ಪರ್ಧೆ* ಯಲ್ಲಿ "ಅತ್ಯುತ್ತಮ" ಸ್ಥಾನ ದೊರೆತು "ಅನರ್ಘ್ಯ ಚುಟುಕು ರತ್ನ" ಪ್ರಶಸ್ತಿ ಗೆ ಪಾತ್ರವಾಗಿದೆ.
ಕೋರಿಕೆ
ಪಟಪಟನೇ ಸುರಿವ ಮಳೆಯೇ
ತೊಳೆ ನೀ ಭುವಿಯ ಕೊಳೆಯ
ಭರಭರನೇ ಬೀಸುವ ಗಾಳಿಯೇ
ಹಾರಿಸು ನೀ ಎಲ್ಲ ಸಂಕಷ್ಟವ
ಗುಡುಗುಡು ಗುಡುವ ಗುಡುಗೇ
ಹೆದರಿ ಓಡಿಸು ವಿಷ ಜೀವಾಣುವ
ಪಕಪಕನೇ ಹೊಳೆವ ಕೋಲ್ಮಿಂಚೇ
ಓಡಿಸು ಜಗದ ಅಂಧಕಾರವ
ದಡಬಡನೇ ಬಡಿವ ಬರಸಿಡಿಲೇ
ಚೂರುಚೂರಾಗಿಸು ಅಹಂಕಾರ
ತಪ್ಪಿನ ಅರಿವು ಮಾಡು ಪ್ರಕೃತಿಯೇ
ತಾನೇ ಮೇಲೆಂದು ಮೆರೆವ ಮನುಜರ
ಓ ದೇವನೇ ಸಾಕು ಮಾಡು ಈ ನರಕ
ಕೊನೆಯಾಗಿಸು ಶೀತಲ ಸಮರ
ಉಳಿಸು ನೀ ಎಲ್ಲ ಮುಗ್ಧರ ಜೀವ
ಕೊನೆಯಾಗಿಸು ಈ ಮರಣ ಮೃದಂಗ
ಪಂಚಮ ವೇದಾ...
ತೊಳೆ ನೀ ಭುವಿಯ ಕೊಳೆಯ
ಭರಭರನೇ ಬೀಸುವ ಗಾಳಿಯೇ
ಹಾರಿಸು ನೀ ಎಲ್ಲ ಸಂಕಷ್ಟವ
ಗುಡುಗುಡು ಗುಡುವ ಗುಡುಗೇ
ಹೆದರಿ ಓಡಿಸು ವಿಷ ಜೀವಾಣುವ
ಪಕಪಕನೇ ಹೊಳೆವ ಕೋಲ್ಮಿಂಚೇ
ಓಡಿಸು ಜಗದ ಅಂಧಕಾರವ
ದಡಬಡನೇ ಬಡಿವ ಬರಸಿಡಿಲೇ
ಚೂರುಚೂರಾಗಿಸು ಅಹಂಕಾರ
ತಪ್ಪಿನ ಅರಿವು ಮಾಡು ಪ್ರಕೃತಿಯೇ
ತಾನೇ ಮೇಲೆಂದು ಮೆರೆವ ಮನುಜರ
ಓ ದೇವನೇ ಸಾಕು ಮಾಡು ಈ ನರಕ
ಕೊನೆಯಾಗಿಸು ಶೀತಲ ಸಮರ
ಉಳಿಸು ನೀ ಎಲ್ಲ ಮುಗ್ಧರ ಜೀವ
ಕೊನೆಯಾಗಿಸು ಈ ಮರಣ ಮೃದಂಗ
ಪಂಚಮ ವೇದಾ...
ಬಂಧಿ
ಕಾದು ಕುಳಿತಿಹೆ ನಾನು
ಆ ಶಬರಿಯಂತೆ
ಮನಕೆ ಮುದ ನೀಡಲು
ಬರುವೆ ನೀನೆಂದೂ...??
ಕಳೆದ ಆ ಮಧುಮಧುರ
ನೆನಪುಗಳಿಗೆ
ಮರು ಜೀವ ನೀಡುವ
ಕ್ಷಣವು ಬರುವುದೆಂದೂ...??
ಪಂಜರದ ಗಿಣಿಯಂತೆ
ಬಂಧಿ ನಾನಿಲ್ಲಿ
ಕಾಡುತಿಹ ಭಯವು
ಕೊನೆಯಾಗುವುದೆಂದೂ...??
ಪಾಂಡವರ ಬೇಗುದಿಗೂ
ಮಿಗಿಲಾದ ಈ
ಅಜ್ಞಾತವಾಸ ನನಗೆ
ಮುಗಿವ ಕ್ಷಣವೆಂದೂ...??
ಆ ಶಬರಿಯಂತೆ
ಮನಕೆ ಮುದ ನೀಡಲು
ಬರುವೆ ನೀನೆಂದೂ...??
ಕಳೆದ ಆ ಮಧುಮಧುರ
ನೆನಪುಗಳಿಗೆ
ಮರು ಜೀವ ನೀಡುವ
ಕ್ಷಣವು ಬರುವುದೆಂದೂ...??
ಪಂಜರದ ಗಿಣಿಯಂತೆ
ಬಂಧಿ ನಾನಿಲ್ಲಿ
ಕಾಡುತಿಹ ಭಯವು
ಕೊನೆಯಾಗುವುದೆಂದೂ...??
ಪಾಂಡವರ ಬೇಗುದಿಗೂ
ಮಿಗಿಲಾದ ಈ
ಅಜ್ಞಾತವಾಸ ನನಗೆ
ಮುಗಿವ ಕ್ಷಣವೆಂದೂ...??
ಪರಿವರ್ತನೆ
ಅಡಗಿ ಕುಳಿತಿಹೆವು ನಾವು
ಸೂಕ್ಷ್ಮಾಣು ಜೀವಿಗೆ
ಹೆದರಿ ಕುಳಿತಿಹೆವು ನಾವು...
ಸಂಬಂಧಗಳ ಮರೆತು
ಬಾಂಧವ್ಯಗಳ ಮರೆತು
ಹೆದರಿ ಕುಳಿತಿಹೆವು ನಾವು...
ಬೀದಿ ಬೀದಿಯ ಸುತ್ತದೇ
ಮಾಲ್ ಶಾಪಿಂಗ್ ಇಲ್ಲದೇ
ಹೆದರಿ ಕುಳಿತಿಹೆವು ನಾವು...
ಕಾಯಿಪಲ್ಲೆ, ಹಣ್ಣು ತರಕಾರಿ
ತರಲು ಹೋಗುತ್ತಿಲ್ಲ ಸವಾರಿ
ಹೆದರಿ ಕುಳಿತಿಹೆವು ನಾವು...
ಶವ ಸಂಸ್ಕಾರಕೂ ಹೆದರಿ
ಮಾನವೀಯತೆಯ ತೂರಿ
ಹೆದರಿ ಕುಳಿತಿಹೆವು ನಾವು...
ಓಡುತಿರುವ ಜಗವು ನಿಂತು
ಮುಂದಿನ ಹಾದಿ ಮರೆತು
ಹೆದರಿ ಕುಳಿತಿಹೆವು ನಾವು...
ತಮ್ಮ ಮನೆಗೆ ತಾವೇ ಬಂದು
ನಿಂದನೆಯ ಕೇಳಿ ನೊಂದು
ಹೆದರಿ ಕುಳಿತಿಹೆವು ನಾವು...
ಪಂಚಮ ವೇದಾ....
ಸೂಕ್ಷ್ಮಾಣು ಜೀವಿಗೆ
ಹೆದರಿ ಕುಳಿತಿಹೆವು ನಾವು...
ಸಂಬಂಧಗಳ ಮರೆತು
ಬಾಂಧವ್ಯಗಳ ಮರೆತು
ಹೆದರಿ ಕುಳಿತಿಹೆವು ನಾವು...
ಬೀದಿ ಬೀದಿಯ ಸುತ್ತದೇ
ಮಾಲ್ ಶಾಪಿಂಗ್ ಇಲ್ಲದೇ
ಹೆದರಿ ಕುಳಿತಿಹೆವು ನಾವು...
ಕಾಯಿಪಲ್ಲೆ, ಹಣ್ಣು ತರಕಾರಿ
ತರಲು ಹೋಗುತ್ತಿಲ್ಲ ಸವಾರಿ
ಹೆದರಿ ಕುಳಿತಿಹೆವು ನಾವು...
ಶವ ಸಂಸ್ಕಾರಕೂ ಹೆದರಿ
ಮಾನವೀಯತೆಯ ತೂರಿ
ಹೆದರಿ ಕುಳಿತಿಹೆವು ನಾವು...
ಓಡುತಿರುವ ಜಗವು ನಿಂತು
ಮುಂದಿನ ಹಾದಿ ಮರೆತು
ಹೆದರಿ ಕುಳಿತಿಹೆವು ನಾವು...
ತಮ್ಮ ಮನೆಗೆ ತಾವೇ ಬಂದು
ನಿಂದನೆಯ ಕೇಳಿ ನೊಂದು
ಹೆದರಿ ಕುಳಿತಿಹೆವು ನಾವು...
ಪಂಚಮ ವೇದಾ....
ಆಹ್ವಾನ
ಹೆತ್ತ ತಂದೆ-ತಾಯಿಯರ
ಬಂಧನವ ಬಿಡಿಸಿ
ದುರುಳನಾದ ಕಂಸನ
ಸಂಹರಿಸಿದೆ ನೀ ಮುರಳಿ...
ನಿನಗೆ ಮೃತ್ಯುವಾಗಲು
ಬಂದ ರಾಕ್ಷಸಿ ಪೂತನಿಯ
ಮಗುವಾಗಿರುವಾಗಲೇ
ಕೊಂದೆ ನೀ ಶ್ಯಾಮ...
ಕೌರವ ಸಭೆಯಲಿ ದ್ರೌಪದಿಯ
ವಸ್ತ್ರಾಪಹರಣ ತಡೆದು
ಮಾನ ಉಳಿಸಿದ
ಮಹಾನುಭಾವ ನೀ ಕೃಷ್ಣ...
ಧರ್ಮ ರಕ್ಷಣೆಗಾಗಿ ಕರ್ಣನ
ಬಾಣದಿಂದ ಬಹು ಸೂಕ್ಷ್ಮದಿ
ಅರ್ಜುನನ ಪ್ರಾಣವನು
ಉಳಿಸಿದೆ ನೀ ಮಾಧವ..
ಈ ಕಲಿಯುಗದಿ ಮತ್ತೆ
ಅವತರಿಸಿ ಕಾಣದ ವಿಷಾಣುವಿನ
ಅಬ್ಬರವ ನಿಲ್ಲಿಸಿ ಮುಗ್ಧ ಜೀವಗಳ
ಉಳಿಸು ದುಷ್ಟ ಸಂಹಾರಿ ಮೋಹನ..
ಬಂಧನವ ಬಿಡಿಸಿ
ದುರುಳನಾದ ಕಂಸನ
ಸಂಹರಿಸಿದೆ ನೀ ಮುರಳಿ...
ನಿನಗೆ ಮೃತ್ಯುವಾಗಲು
ಬಂದ ರಾಕ್ಷಸಿ ಪೂತನಿಯ
ಮಗುವಾಗಿರುವಾಗಲೇ
ಕೊಂದೆ ನೀ ಶ್ಯಾಮ...
ಕೌರವ ಸಭೆಯಲಿ ದ್ರೌಪದಿಯ
ವಸ್ತ್ರಾಪಹರಣ ತಡೆದು
ಮಾನ ಉಳಿಸಿದ
ಮಹಾನುಭಾವ ನೀ ಕೃಷ್ಣ...
ಧರ್ಮ ರಕ್ಷಣೆಗಾಗಿ ಕರ್ಣನ
ಬಾಣದಿಂದ ಬಹು ಸೂಕ್ಷ್ಮದಿ
ಅರ್ಜುನನ ಪ್ರಾಣವನು
ಉಳಿಸಿದೆ ನೀ ಮಾಧವ..
ಈ ಕಲಿಯುಗದಿ ಮತ್ತೆ
ಅವತರಿಸಿ ಕಾಣದ ವಿಷಾಣುವಿನ
ಅಬ್ಬರವ ನಿಲ್ಲಿಸಿ ಮುಗ್ಧ ಜೀವಗಳ
ಉಳಿಸು ದುಷ್ಟ ಸಂಹಾರಿ ಮೋಹನ..
ಶನಿವಾರ, ಜನವರಿ 18, 2020
ಜೀವನ ಪಯಣ
ಅವರ ಜೊತೆ ಅವರಂತೆ
ಇವರ ಜೊತೆ ಇವರಂತೆ
ಅಲ್ಲಿಯದ ಅಲ್ಲಿ ಬಿಟ್ಟು
ಇಲ್ಲಿಯದು ಇಲ್ಲೇ ಬಿಟ್ಟು
ಹೊಂದಿಕೊಂಡು ಹೋಗುವುದೇ
ಸುಗಮ ಜೀವನದ ಸೂತ್ರ...
ಅಹಂಕಾರ ಬದಿಗಿರಿಸಿ
ಮಾತ್ಸರ್ಯ ಹೊಡೆದೋಡಿಸಿ
ಚುಚ್ಚು ಮಾತುಗಳ ಕೇಳಿಯೂ ಕೇಳದಂತೆ
ದ್ವೇಷ-ರೋಷ ಬಳಿಯೂ ಸುಳಿಯದಂತೆ
ನಗುವಿನುತ್ತರ ನೀಡುತ ಸಾಗುವುದೇ
ನಮ್ಮ ನಿಮ್ಮೆಲ್ಲರ ಜೀವನದ ಪಾತ್ರ...
ನಾನೆಂಬ ಮಾಯೆಯ ಮರೆತು
ಎಲ್ಲರೊಡಗೂಡಿ ಬೆರೆತು
ಕೋಪತಾಪಗಳ ದೂರವಿರಿಸಿ
ಸಹಬಾಳ್ವೆಯ ಚಿತ್ತಾರ ಬಿಡಿಸಿ
ಸಂತೋಷವ ಹಂಚುತಾ ಬಾಳುವಾ
ಈ ಬದುಕು ಬರೀ ನಾಲ್ಕು ದಿನ ಮಾತ್ರ...
ಬದುಕು ಸಾಗುವುದು ನದಿಯಂತೆ
ಇದು ಸುಖ-ದುಃಖಗಳ ಸಂತೆ
ಬೆಸೆಯುವುದು ಹೊಸ ನಂಟು
ಒಯ್ಯಲಾಗದು ಎಷ್ಟಿದ್ದರೂ ಗಂಟು
ಗಳಿಸಿದ ಜನರು ಮಾತ್ರ ಉಪಕಾರ
ಸ್ಮರಿಸುತ್ತ ಬರುವರು ಕೊನೆಗೆ ಹತ್ತಿರ...
ಸೋಮವಾರ, ಜನವರಿ 13, 2020
ಹನಿಗವನ 1
ಪ್ರಶ್ನಾರ್ಥಕ
ಹಲವು ವೇಷ ಬದುಕಲು ಅಗತ್ಯ ಕೆಲವರಿಗೆ
ಶೋಕಿಗಾಗಿ ವೇಷ ಹಾಕುವ ಕರ್ಮ ಹಲವರಿಗೆ
ಅನ್ನವಿಲ್ಲದೇ ಪರಿತಪಿಸುವರು ಹಲವರು
ಬೆಲೆತೆತ್ತು ಅನ್ನ ಚೆಲ್ಲುವರು ಕೆಲವರು...
ಜೀವನ
ಬಾರದು ಮತ್ತೆ ಕಳೆದಿರುವ ಕ್ಷಣ
ಸವಿಯಬಹುದು ನೆನಪಿನ ಹೂರಣ
ಸಿಹಿ-ಕಹಿ ಎರಡೂ ಉಂಟು ಬದುಕಲಿ
ನೋವು-ನಲಿವೆಂಬ ಮುಖವು ಬಾಳಲಿ
ಬೇಸರಿಸದೆ ಸಂತಸದಿ ತಾ ಬದುಕಿ
ಬದುಕಕೊಟ್ಟರೆಲ್ಲರಿಗೂ ಬಾಳು ಸುಖಕರ
ನಿದ್ದೆ
ನಿದ್ದೆ ನಿದ್ದೆ ನಿದ್ದೆ ನಿದ್ದೆ
ಪತಿರಾಯನಿಗೆ ಯಾವಾಗಲೂ ಇದ್ದಿದ್ದೆ
ಕೇಳಿದರೆ ನಿಮಗೆ ಯಾಕಿಷ್ಟು ನಿದ್ದೆ
ಬರುವ ಉತ್ತರ ನೋಡಿ...
ನಿನ್ನದು ರಾಮಾಯಣ ಯಾವಾಗಲೂ ಇದ್ದಿದ್ದೆ
ಪಾರಾಯಣ
ಹಗಲಲಿ ಓದಿಸುವರು ದೇವಿ ಪಾರಾಯಣ
ರಾತ್ರಿ ಮಾಡುವರು ಹದಿಮೂರೆಲೆಯ ಪಾರಾಯಣ
ಬೆಳಿಗ್ಗೆ ಹೆಂಡತಿಯಿಂದ ಮಹಾಭಾರತ ರಾಮಾಯಣ
ಜಪಭಜನೆ ಮಾಡುವರು ನಾರಾಯಣ ನಾರಾಯಣ
ಶುಕ್ರವಾರ, ಜನವರಿ 10, 2020
ಮತ್ತದೇ ಮೌನ..
ಮನಸು ಮುಗಿಲೆತ್ತರಕೆ
ಹಾರಿ ಸಂಭ್ರಮದಿ
ಮಿಂದೇಳುತಲಿದೆ..
ಆದರೆ ಅದೇಕೋ ಮತ್ತದೇ ಮೌನ....
ಎಲ್ಲವೂ ಹಿತ ಮನಕೆ
ತಂಪಾದ ತಂಗಾಳಿಯಲಿ
ಓಲೈಸುತಿದೆ..
ಆದರೆ ಅದೇಕೋ ಮತ್ತದೇ ಮೌನ....
ತುಂತುರು ಮಳೆಯ
ಮಣ್ಣ ವಾಸನೆಯಲಿ
ಮನ ನರ್ತಿಸುತಿದೆ..
ಆದರೆ ಅದೇಕೋ ಮತ್ತದೇ ಮೌನ....
ಹುಣ್ಣಿಮೆ ಬೆಳದಿಂಗಳಲಿ
ನೈದಿಲೆಯ ನೋಡಿ
ಮನ ಮುದಗೊಂಡಿದೆ..
ಆದರೆ ಅದೇಕೋ ಮತ್ತದೇ ಮೌನ....
ಸಖನ ಸವಿ ನುಡಿಗೆ
ಖುಷಿಯ ಮೇರೆಮೀರಿ
ಮನ ಪುಳಕಿತವಾಗಿದೆ..
ಆದರೆ ಅದೇಕೋ ಮತ್ತದೇ ಮೌನ....
ಬಾಳ ಪಯಣದಲಿ
ಕಹಿಯನೆಲ್ಲ ಹಿಂದಿಕ್ಕಿ
ಮನ ಸಿಹಿಯಾಗಿದೆ..
ಆದರೆ ಅದೇಕೋ ಮತ್ತದೇ ಮೌನ....
ಒಲವ ಜಿನುಗಿ
ದ್ವೇಷ ಕರಗಿ
ಮನ ಹಸಿರಾಗಿದೆ..
ಆದರೆ ಅದೇಕೋ ಮತ್ತದೇ ಮೌನ....
ಕಾರಣ ತಿಳಿದು
ತಿಳಿಯದೇ ಮನ
ಗೊಂದಲದ ಗೂಡಾಗಿದೆ..
ಆದರೆ ಅದೇಕೋ ಮತ್ತದೇ ಮೌನ....
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)